ಚನ್ನರಾಯಪಟ್ಟಣ: ಭಾರತೀಯ ಆರೋಗ್ಯ ಶಾಸ್ತ್ರ ನಮ್ಮೆಲ್ಲರಿಗೆ ಮಾರ್ಗದರ್ಶಕವಾಗಿದೆ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್.ಕೆ.ಪುಷ್ಪಲತಾ ಹೇಳಿದರು.
ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಶ್ರೀಮಠ, ವಿವಿಧ ಶಾಲೆಗಳ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನದಲ್ಲಿ ಮಾತನಾಡಿದ ಅವರು, ಎಲ್ಲ ರೀತಿಯ ವ್ಯಾಯಾಮಗಳನ್ನೂ ಮೀರಿದ್ದು ಯೋಗಾಭ್ಯಾಸವಾಗಿದೆ. ಇದನ್ನು ಪಠ್ಯಕ್ರಮದಲ್ಲೂ ಅಳವಡಿಸಿದ್ದು ಇತ್ತೀಚಿನ ದಿನಗಳಲ್ಲಿ ಯೋಗ ವಾಣಿಜ್ಯೀಕರಣವಾಗಿ ಬದಲಾಗುತ್ತಿದೆ. ವಾಣಿಜ್ಯ ಉದ್ದೇಶದ ಸರಕಾಗಿರುವುದು ಬೇಸರದ ಸಂಗತಿಯಾಗಿದೆ ಎಂದ ಅವರು ಸಾರ್ವಜನಿಕರಲ್ಲಿಯೂ ಈ ಬಗ್ಗೆ ಜಾಗೃತಿ ಕಂಡುಬರುತ್ತಿದ್ದು ಎಲ್ಲರಿಗೂ ಇದು ಅನಿವಾರ್ಯವಾಗಿದೆ ಎಂದರು.
ಯೋಗ ಮತ್ತು ಧ್ಯಾನದ ಮೂಲಕ ಅತೀತವಾದುದನ್ನು ಸಾಧಿಸಬಹುದಾಗಿದ್ದು ತಮ್ಮ ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸವನ್ನು ಕಡ್ಡಾಯ ಮಾಡಿಕೊಳ್ಳಬೇಕು ಎಂದರು.
ಮಠದ ಪೀಠಾಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಮಾತನಾಡಿ, ಪೂಜೆ ಪುನಸ್ಕಾರಗಳಷ್ಟೇ ಮಹತ್ವವನ್ನು ಯೋಗಾಭ್ಯಾಸಕ್ಕೂ ನೀಡಬೇಕು. ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಮುಕ್ತರನ್ನಾಗಿ ಮಾಡಲು ಯೋಗ ಬೇಕು. ನಿತ್ಯವೂ ಇದು ಅನುಷ್ಠಾನವಾಗಬೇಕು ಎಂದು ಹೇಳಿದರು.
ಶರೀರದ ಪ್ರತಿಯೊಂದು ಅವಯವವೂ ಸ್ವಾಸ್ಥ್ಯವಾಗಿರಲು ಯೋಗ ಅವಶ್ಯವಾಗಿದ್ದು ಶುದ್ಧವಾದ ಗಾಳಿ, ನೀರು ಸೇವಿಸಿ ಶುಭ್ರ ವಸ್ತ್ರಧಾರಿಗಳಾಗಿದ್ದರೆ ಆರೋಗ್ಯ ಇದ್ದಂತೆ. ಯೋಗಾಭ್ಯಾಸಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಯೋಗದ ಅಭಿರುಚಿ ಎಲ್ಲರಲ್ಲಿ ಇರಲಿ, ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ದೈಹಿಕ ಶಿಕ್ಷ ಣ ಶಿಕ್ಷ ಕ ಎಚ್.ಮಹೇಶ್ಹುಲಸೂರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ದೈಹಿಕ ಶಿಕ್ಷ ಣ ಅಧೀಕ್ಷ ಕ ಮಹದೇವ್, ಇಸಿಒ ರುದ್ರೇಶ್, ಸಿಆರ್ಪಿ ಚಿದಾನಂದ್ ಇದ್ದರು.
ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಶ್ರೀಮಠ, ವಿವಿಧ ಶಾಲೆಗಳ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನದಲ್ಲಿ ಮಾತನಾಡಿದ ಅವರು, ಎಲ್ಲ ರೀತಿಯ ವ್ಯಾಯಾಮಗಳನ್ನೂ ಮೀರಿದ್ದು ಯೋಗಾಭ್ಯಾಸವಾಗಿದೆ. ಇದನ್ನು ಪಠ್ಯಕ್ರಮದಲ್ಲೂ ಅಳವಡಿಸಿದ್ದು ಇತ್ತೀಚಿನ ದಿನಗಳಲ್ಲಿ ಯೋಗ ವಾಣಿಜ್ಯೀಕರಣವಾಗಿ ಬದಲಾಗುತ್ತಿದೆ. ವಾಣಿಜ್ಯ ಉದ್ದೇಶದ ಸರಕಾಗಿರುವುದು ಬೇಸರದ ಸಂಗತಿಯಾಗಿದೆ ಎಂದ ಅವರು ಸಾರ್ವಜನಿಕರಲ್ಲಿಯೂ ಈ ಬಗ್ಗೆ ಜಾಗೃತಿ ಕಂಡುಬರುತ್ತಿದ್ದು ಎಲ್ಲರಿಗೂ ಇದು ಅನಿವಾರ್ಯವಾಗಿದೆ ಎಂದರು.
ಯೋಗ ಮತ್ತು ಧ್ಯಾನದ ಮೂಲಕ ಅತೀತವಾದುದನ್ನು ಸಾಧಿಸಬಹುದಾಗಿದ್ದು ತಮ್ಮ ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸವನ್ನು ಕಡ್ಡಾಯ ಮಾಡಿಕೊಳ್ಳಬೇಕು ಎಂದರು.
ಮಠದ ಪೀಠಾಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಮಾತನಾಡಿ, ಪೂಜೆ ಪುನಸ್ಕಾರಗಳಷ್ಟೇ ಮಹತ್ವವನ್ನು ಯೋಗಾಭ್ಯಾಸಕ್ಕೂ ನೀಡಬೇಕು. ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಮುಕ್ತರನ್ನಾಗಿ ಮಾಡಲು ಯೋಗ ಬೇಕು. ನಿತ್ಯವೂ ಇದು ಅನುಷ್ಠಾನವಾಗಬೇಕು ಎಂದು ಹೇಳಿದರು.
ಶರೀರದ ಪ್ರತಿಯೊಂದು ಅವಯವವೂ ಸ್ವಾಸ್ಥ್ಯವಾಗಿರಲು ಯೋಗ ಅವಶ್ಯವಾಗಿದ್ದು ಶುದ್ಧವಾದ ಗಾಳಿ, ನೀರು ಸೇವಿಸಿ ಶುಭ್ರ ವಸ್ತ್ರಧಾರಿಗಳಾಗಿದ್ದರೆ ಆರೋಗ್ಯ ಇದ್ದಂತೆ. ಯೋಗಾಭ್ಯಾಸಕ್ಕೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಯೋಗದ ಅಭಿರುಚಿ ಎಲ್ಲರಲ್ಲಿ ಇರಲಿ, ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ದೈಹಿಕ ಶಿಕ್ಷ ಣ ಶಿಕ್ಷ ಕ ಎಚ್.ಮಹೇಶ್ಹುಲಸೂರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ದೈಹಿಕ ಶಿಕ್ಷ ಣ ಅಧೀಕ್ಷ ಕ ಮಹದೇವ್, ಇಸಿಒ ರುದ್ರೇಶ್, ಸಿಆರ್ಪಿ ಚಿದಾನಂದ್ ಇದ್ದರು.