ಚನ್ನರಾಯಪಟ್ಟಣ: ಸುಳ್ಳು ದಾಖಲೆ ನೀಡಿ ಪ್ರೋತ್ಸಾಹ ಧನ
ಚನ್ನರಾಯಪಟ್ಟಣ : ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯೊಬ್ಬರು ಬೀದಿಬದಿ ವ್ಯಾಪಾರಿ ಎಂದು ಸುಳ್ಳು ದಾಖಲೆ ನೀಡಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಸಾವಿರ ರೂ.ಪ್ರೋತ್ಸಾಹ ಧನ ಪಡೆದಿರುವ ಪ್ರಕರಣ ತಾಲೂಕು ಪಂಚಾಯಿತಿ ಸಭೆಯಲ್ಲಿ ಬೆಳಕಿಗೆ ಬಂದಿದೆ.
Vijaya Karnataka 20 Dec 2018, 5:00 am
ಚನ್ನರಾಯಪಟ್ಟಣ : ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯೊಬ್ಬರು ಬೀದಿಬದಿ ವ್ಯಾಪಾರಿ ಎಂದು ಸುಳ್ಳು ದಾಖಲೆ ನೀಡಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 10 ಸಾವಿರ ರೂ.ಪ್ರೋತ್ಸಾಹ ಧನ ಪಡೆದಿರುವ ಪ್ರಕರಣ ತಾಲೂಕು ಪಂಚಾಯಿತಿ ಸಭೆಯಲ್ಲಿ ಬೆಳಕಿಗೆ ಬಂದಿದೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರಂಜಿತಾ ನಿಂಗೇಗೌಡ ಅಧ್ಯಕ್ಷ ತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಧರಣೀಶ್ ತಮ್ಮ ಇಲಾಖೆಯ ಪ್ರಗತಿಯ ವರದಿ ನೀಡುವ ವೇಳೆ ಈ ಮಾಹಿತಿ ಬಹಿರಂಗಗೊಂಡಿದೆ. ಕೆಂಬಾಳು ಪಂಚಾಯಿತಿ ಸದಸ್ಯರಾದ ಎಲ್.ಜಿ.ಗಿರೀಶ್ ಮಾತನಾಡಿ, ನಮ್ಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಒಬ್ಬರು ತಾನು ಬೀದಿಬದಿ ವ್ಯಾಪಾರಿ ಎಂದು ಹೇಳಿಕೊಂಡು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಸಾವಿರ ರೂ. ಪ್ರೋತ್ಸಾಹಧನ ಪಡೆದಿದ್ದಾರೆ. ಇದೇ ರೀತಿ ಇನ್ನೆಷ್ಟು ಪ್ರಕರಣಗಳು ನಡೆದಿವೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಇಡೀ ಸಭೆಯಲ್ಲಿ ಚರ್ಚೆ ಅಲ್ಲಲ್ಲಿ ಪ್ರಾರಂಭವಾಯಿತು. ಕಳೆದ ಸಾಲಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಈ ಪ್ರಮಾದವಾಗಿದ್ದು ಆ ವೇಳೆ ಯಾರಾರಯರಿಗೆ ಪ್ರೋತ್ಸಾಹ ಧನ ನೀಡಲಾಗಿದೆಯೋ ಎಲ್ಲವನ್ನೂ ಪರಿಶೀಲನೆ ನಡೆಸಬೇಕೆಂದು ಅಧ್ಯಕ್ಷ ರು ಸೂಚಿಸಿದರು.
ಇದ್ಯಾವುದಕ್ಕೂ ತಾವು ಹೊಣೆಗಾರರಲ್ಲ ಎಂದ ಸಿಡಿಪಿಒ, ಒದಗಿಸಿದ ದಾಖಲೆಗಳನ್ನು ನಾವು ಮೇಲಧಿಕಾರಿಗಳಿಗೆ ಕಳುಹಿಸುವುದಷ್ಟೇ ನಮ್ಮ ಕೆಲಸ. ಪರಿಶೀಲನೆ ಎಲ್ಲ ಜಿಲ್ಲಾ ಮಟ್ಟದಿಂದಲೇ ಮಾಡುತ್ತಾರೆ ಎಂದು ಜಾರಿಕೊಂಡರು. ಮತ್ತೊಂದು ವಿಷಯದ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ಸಿಡಿಪಿಒ ಅವರು ಮುಂದಿನ ಸಭೆಯ ಹೊತ್ತಿಗೆ ನಾನು ಇಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದದ್ದರಿಂದ ಸದಸ್ಯರಲ್ಲಿ ಆಕ್ರೋಶ ಹೆಚ್ಚಿಸಿತು.
ಇಲಾಖೆಯಲ್ಲಿನ ದೋಷಗಳ ಬಗ್ಗೆ ಅಧ್ಯಕ್ಷ ರನ್ನು ಮೊದಲುಗೊಂಡು ಸದಸ್ಯರಾದ ಶ್ಯಾಮಲಾ ಉದಯಕುಮಾರ್, ರಾಮಕೃಷ್ಣ, ಎಲ್.ಜಿ.ಗಿರೀಶ್, ಜಯರಾಂ ಹಾಗೂ ಇತರರು ಒಂದೊಂದೇ ದೂರು ಹೇಳುವ ವೇಳೆ ಈ ಅಂಶ ಚರ್ಚೆಗೆ ಗ್ರಾಸವಾಯಿತು. ಬೀದಿಬದಿ ವ್ಯಾಪಾರಿಗಳೆಂದು ಪ್ರೋತ್ಸಾಹ ಧನವನ್ನು ಸೀಮಿತ ಕ್ಷೇತ್ರಗಳಿಗೆ ನೀಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತವಾಯಿತು. ಗುರಿಗೆ ತಕ್ಕಂತೆ ಸಾಧನೆಯಾಗಿದೆ ಎಂಬ ಹೇಳಿಕೆಯಿಂದ ಕುಪಿತರಾದ ಅಧ್ಯಕ್ಷ ರು ಬಸವನಹಳ್ಳಿಗೆ ನಾಲ್ಕು ತಿಂಗಳಿಂದಲೂ ಆಹಾರವನ್ನೇ ಕೊಡುತ್ತಿಲ್ಲ. ಇಂತಹ ಇನ್ನೆಷ್ಟು ಅಂಗನವಾಡಿ ಕೇಂದ್ರಗಳಿವೆಯೋ. ಯಾರಿಗೆ ಗೊತ್ತು. ನೀವೇಕೆ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸೂಪರ್ವೈಸರ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾರನ್ನೂ ಏಕೆ ಸ್ಥಳ ಪರಿಶೀಲನೆಗೆ ಕಳುಹಿಸುತ್ತಿಲ್ಲ. ಕಚೇರಿಯಲ್ಲೇ ಕುಳಿತು ಅವರು ಮಾಡುವುದೇನಿದೆ? ಸಮಸ್ಯೆಯನ್ನು ಹಲವು ಬಾರಿ ಹೇಳಿದರೂ ಏಕೆ ಗಮನಹರಿಸುತ್ತಿಲ್ಲ. ಆಹಾರವೇ ಸರಿಯಾಗಿ ತಲುಪುತ್ತಿಲ್ಲ ಎಂದಾದರೆ ನೀವು ಹೇಗೆ ಕೆಲಸ ಮಾಡುತ್ತಿದ್ದೀರಾ ಎಂಬುದು ತಿಳಿಯುತ್ತದೆ ಎಂದು ಶ್ಯಾಮಲಾ ಹರಿಹಾಯ್ದರು.
ಮಾತೃಪೂರ್ಣ ಯೋಜನೆ ಫಲಕಾರಿಯಾಗಿಲ್ಲ. ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡುತ್ತಿಲ್ಲ. ಅವರಲ್ಲಿ ಹಿಂಜರಿಕೆ ಇದೆ. ಕೆಲವೊಮ್ಮೆ ದೂರ ಎನ್ನುವ ಕಾರಣವೂ ಇದೆ. ಮನೆಗೇ ಹೋಗಿ ಆಹಾರ ನೀಡಿ ಬರುವಂತಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇಲಾಖೆಗೆ ಹೊಸ ವಾಹನ ಬಂದಿದ್ದು ಅಧಿಕಾರಿಗಳು ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಗರ್ಭಿಣಿಯರು ಊಟಕ್ಕೆ ಬರುತ್ತಿಲ್ಲವೆಂದು ಹೆರಿಗೆ ಆದ ನಂತರ ಅವರ ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನ ನೀಡುವಂತಿಲ್ಲವೆಂದು ತಿರಸ್ಕರಿಸಬಾರದು. ಕರ್ತವ್ಯ ನಿರ್ಲಕ್ಷ ್ಯ ಬೇಡವೆಂದು ಅಧ್ಯಕ್ಷ ರು ಸೂಚಿಸಿದರು. 12 ಅಂಗನವಾಡಿ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಇನ್ನೂ ಏಕೆ ಅಲ್ಲಿಗೆ ಸ್ಥಳಾಂತರ ಮಾಡಿಲ್ಲ ಎಂಬ ಮಂಜುನಾಥ್ ಪ್ರಶ್ನೆಗೆ ಇನ್ನೂ ಇಲಾಖೆಗೆ ಹಸ್ತಾಂತರಿಸಿಲ್ಲ ಎಂದು ಧರಣೀಶ್ ಹೇಳಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ಪಡಿತರ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಗುಲಸಿಂದ ನ್ಯಾಯಬೆಲೆ ಅಂಗಡಿಯಲ್ಲಿ 2 ಕೆಜಿ ಅಕ್ಕಿಯನ್ನು ಕಡಿಮೆ ಕೊಡುತ್ತಿದ್ದಾರೆ. ಅಲ್ಲದೆ ಹಣವನ್ನೂ ಹೆಚ್ಚಾಗಿ ಪಡೆಯುತ್ತಿದ್ದಾರೆ. ಎರಡು ಸಭೆಯಿಂದಲೂ ಈ ಸಮಸ್ಯೆಯನ್ನು ಹೇಳುತ್ತಿದ್ದರೂ ಅಧಿಕಾರಿಗಳ ಮೌನವೇ ಉತ್ತರವಾಗಿದೆ. ಏಕೆ ಸರಿಪಡಿಸುತ್ತಿಲ್ಲ ಎಂದರು. ನುಗ್ಗೇಹಳ್ಳಿ ಸೊಸೈಟಿಯಲ್ಲೂ ಕಡಿಮೆ ಪಡಿತರ ನೀಡಲಾಗುತ್ತಿದೆ ಎಂದು ಸದಸ್ಯ ಜಯರಾಂ ದೂರಿದರು. ಪಡಿತರವನ್ನು ನೆಲದ ಮೇಲೆ ಸುರಿಯುವುದು, ಕಾಲಿನಿಂದ ತುಳಿದುಕೊಂಡು ಓಡಾಡುವುದು ಮಾಡದಂತೆ ಸೂಚನೆ ನೀಡಬೇಕು. ದರಪಟ್ಟಿಯ ಫಲಕವನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಹೆಬ್ಬೆಟ್ಟು ಗುರುತಿಗೆ 10 ರೂ. ಶುಲ್ಕ ತೆಗೆದುಕೊಳ್ಳಬಾರದೆಂಬ ಸೂಚನೆಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡುವಂತೆಯೂ ಸದಸ್ಯರು ಒತ್ತಾಯಿಸಿದರು.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಕುಡಿಯುವ ನೀರಿಗೆ ಎಲ್ಲೇ ಸಮಸ್ಯೆಯಾದರೂ ಅಧಿಕಾರಿಗಳು ತಕ್ಷ ಣ ಸ್ಪಂದಿಸಬೇಕೆಂದು ಅಧ್ಯಕ್ಷ ರು ಸೂಚಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಬಿ.ನಂದಿನಿ ಇದ್ದರು.
----------------------
ನ್ಯಾಯಬೆಲೆ ಅಂಗಡಿ ವಿಚಾರ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಉಪಾಧ್ಯಕ್ಷ ಭೈರೇಗೌಡ ತಮ್ಮ ಪಕ್ಕದಲ್ಲೇ ಕುಳಿತಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ರತ್ತ ಬೊಟ್ಟುಮಾಡಿ ಇಂತಹವರಿಂದ ಮೊದಲುಗೊಂಡು ಯಾರೇ ನಿಯಮ ಉಲ್ಲಂಘನೆ ಮಾಡಿದರೂ ಕ್ರಮಕೈಗೊಳ್ಳಬೇಕು ಎಂದಿದ್ದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಿ.ಮಂಜೇಗೌಡರನ್ನು ಕೆರಳಿಸಿತು. ಇಬ್ಬರೂ ಪರಸ್ಪರ ಚರ್ಚೆಗೆ ಮುಂದಾಗುತ್ತಿದ್ದಂತೆ ಸದಸ್ಯರು ಮಂಜೇಗೌಡರ ವಿರುದ್ಧವೇ ಮಾತನಾಡಿ ನೀವು ಇಲ್ಲಿ ನ್ಯಾಯಬೆಲೆ ಅಂಗಡಿಯವರ ಪ್ರತಿನಿಧಿಯಾಗಿ ಬಂದಿಲ್ಲವೆಂದು ಅವರನ್ನು ಸುಮ್ಮನಾಗಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರಂಜಿತಾ ನಿಂಗೇಗೌಡ ಅಧ್ಯಕ್ಷ ತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಧರಣೀಶ್ ತಮ್ಮ ಇಲಾಖೆಯ ಪ್ರಗತಿಯ ವರದಿ ನೀಡುವ ವೇಳೆ ಈ ಮಾಹಿತಿ ಬಹಿರಂಗಗೊಂಡಿದೆ. ಕೆಂಬಾಳು ಪಂಚಾಯಿತಿ ಸದಸ್ಯರಾದ ಎಲ್.ಜಿ.ಗಿರೀಶ್ ಮಾತನಾಡಿ, ನಮ್ಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಒಬ್ಬರು ತಾನು ಬೀದಿಬದಿ ವ್ಯಾಪಾರಿ ಎಂದು ಹೇಳಿಕೊಂಡು ಮಹಿಳಾ ಅಭಿವೃದ್ಧಿ ನಿಗಮದಿಂದ 10 ಸಾವಿರ ರೂ. ಪ್ರೋತ್ಸಾಹಧನ ಪಡೆದಿದ್ದಾರೆ. ಇದೇ ರೀತಿ ಇನ್ನೆಷ್ಟು ಪ್ರಕರಣಗಳು ನಡೆದಿವೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಇಡೀ ಸಭೆಯಲ್ಲಿ ಚರ್ಚೆ ಅಲ್ಲಲ್ಲಿ ಪ್ರಾರಂಭವಾಯಿತು. ಕಳೆದ ಸಾಲಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಈ ಪ್ರಮಾದವಾಗಿದ್ದು ಆ ವೇಳೆ ಯಾರಾರಯರಿಗೆ ಪ್ರೋತ್ಸಾಹ ಧನ ನೀಡಲಾಗಿದೆಯೋ ಎಲ್ಲವನ್ನೂ ಪರಿಶೀಲನೆ ನಡೆಸಬೇಕೆಂದು ಅಧ್ಯಕ್ಷ ರು ಸೂಚಿಸಿದರು.
ಇದ್ಯಾವುದಕ್ಕೂ ತಾವು ಹೊಣೆಗಾರರಲ್ಲ ಎಂದ ಸಿಡಿಪಿಒ, ಒದಗಿಸಿದ ದಾಖಲೆಗಳನ್ನು ನಾವು ಮೇಲಧಿಕಾರಿಗಳಿಗೆ ಕಳುಹಿಸುವುದಷ್ಟೇ ನಮ್ಮ ಕೆಲಸ. ಪರಿಶೀಲನೆ ಎಲ್ಲ ಜಿಲ್ಲಾ ಮಟ್ಟದಿಂದಲೇ ಮಾಡುತ್ತಾರೆ ಎಂದು ಜಾರಿಕೊಂಡರು. ಮತ್ತೊಂದು ವಿಷಯದ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ಸಿಡಿಪಿಒ ಅವರು ಮುಂದಿನ ಸಭೆಯ ಹೊತ್ತಿಗೆ ನಾನು ಇಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದದ್ದರಿಂದ ಸದಸ್ಯರಲ್ಲಿ ಆಕ್ರೋಶ ಹೆಚ್ಚಿಸಿತು.
ಇಲಾಖೆಯಲ್ಲಿನ ದೋಷಗಳ ಬಗ್ಗೆ ಅಧ್ಯಕ್ಷ ರನ್ನು ಮೊದಲುಗೊಂಡು ಸದಸ್ಯರಾದ ಶ್ಯಾಮಲಾ ಉದಯಕುಮಾರ್, ರಾಮಕೃಷ್ಣ, ಎಲ್.ಜಿ.ಗಿರೀಶ್, ಜಯರಾಂ ಹಾಗೂ ಇತರರು ಒಂದೊಂದೇ ದೂರು ಹೇಳುವ ವೇಳೆ ಈ ಅಂಶ ಚರ್ಚೆಗೆ ಗ್ರಾಸವಾಯಿತು. ಬೀದಿಬದಿ ವ್ಯಾಪಾರಿಗಳೆಂದು ಪ್ರೋತ್ಸಾಹ ಧನವನ್ನು ಸೀಮಿತ ಕ್ಷೇತ್ರಗಳಿಗೆ ನೀಡುತ್ತಿರುವುದಕ್ಕೂ ಆಕ್ಷೇಪ ವ್ಯಕ್ತವಾಯಿತು. ಗುರಿಗೆ ತಕ್ಕಂತೆ ಸಾಧನೆಯಾಗಿದೆ ಎಂಬ ಹೇಳಿಕೆಯಿಂದ ಕುಪಿತರಾದ ಅಧ್ಯಕ್ಷ ರು ಬಸವನಹಳ್ಳಿಗೆ ನಾಲ್ಕು ತಿಂಗಳಿಂದಲೂ ಆಹಾರವನ್ನೇ ಕೊಡುತ್ತಿಲ್ಲ. ಇಂತಹ ಇನ್ನೆಷ್ಟು ಅಂಗನವಾಡಿ ಕೇಂದ್ರಗಳಿವೆಯೋ. ಯಾರಿಗೆ ಗೊತ್ತು. ನೀವೇಕೆ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸೂಪರ್ವೈಸರ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಯಾರನ್ನೂ ಏಕೆ ಸ್ಥಳ ಪರಿಶೀಲನೆಗೆ ಕಳುಹಿಸುತ್ತಿಲ್ಲ. ಕಚೇರಿಯಲ್ಲೇ ಕುಳಿತು ಅವರು ಮಾಡುವುದೇನಿದೆ? ಸಮಸ್ಯೆಯನ್ನು ಹಲವು ಬಾರಿ ಹೇಳಿದರೂ ಏಕೆ ಗಮನಹರಿಸುತ್ತಿಲ್ಲ. ಆಹಾರವೇ ಸರಿಯಾಗಿ ತಲುಪುತ್ತಿಲ್ಲ ಎಂದಾದರೆ ನೀವು ಹೇಗೆ ಕೆಲಸ ಮಾಡುತ್ತಿದ್ದೀರಾ ಎಂಬುದು ತಿಳಿಯುತ್ತದೆ ಎಂದು ಶ್ಯಾಮಲಾ ಹರಿಹಾಯ್ದರು.
ಮಾತೃಪೂರ್ಣ ಯೋಜನೆ ಫಲಕಾರಿಯಾಗಿಲ್ಲ. ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡುತ್ತಿಲ್ಲ. ಅವರಲ್ಲಿ ಹಿಂಜರಿಕೆ ಇದೆ. ಕೆಲವೊಮ್ಮೆ ದೂರ ಎನ್ನುವ ಕಾರಣವೂ ಇದೆ. ಮನೆಗೇ ಹೋಗಿ ಆಹಾರ ನೀಡಿ ಬರುವಂತಾಗಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇಲಾಖೆಗೆ ಹೊಸ ವಾಹನ ಬಂದಿದ್ದು ಅಧಿಕಾರಿಗಳು ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಗರ್ಭಿಣಿಯರು ಊಟಕ್ಕೆ ಬರುತ್ತಿಲ್ಲವೆಂದು ಹೆರಿಗೆ ಆದ ನಂತರ ಅವರ ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನ ನೀಡುವಂತಿಲ್ಲವೆಂದು ತಿರಸ್ಕರಿಸಬಾರದು. ಕರ್ತವ್ಯ ನಿರ್ಲಕ್ಷ ್ಯ ಬೇಡವೆಂದು ಅಧ್ಯಕ್ಷ ರು ಸೂಚಿಸಿದರು. 12 ಅಂಗನವಾಡಿ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಇನ್ನೂ ಏಕೆ ಅಲ್ಲಿಗೆ ಸ್ಥಳಾಂತರ ಮಾಡಿಲ್ಲ ಎಂಬ ಮಂಜುನಾಥ್ ಪ್ರಶ್ನೆಗೆ ಇನ್ನೂ ಇಲಾಖೆಗೆ ಹಸ್ತಾಂತರಿಸಿಲ್ಲ ಎಂದು ಧರಣೀಶ್ ಹೇಳಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ಪಡಿತರ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಗುಲಸಿಂದ ನ್ಯಾಯಬೆಲೆ ಅಂಗಡಿಯಲ್ಲಿ 2 ಕೆಜಿ ಅಕ್ಕಿಯನ್ನು ಕಡಿಮೆ ಕೊಡುತ್ತಿದ್ದಾರೆ. ಅಲ್ಲದೆ ಹಣವನ್ನೂ ಹೆಚ್ಚಾಗಿ ಪಡೆಯುತ್ತಿದ್ದಾರೆ. ಎರಡು ಸಭೆಯಿಂದಲೂ ಈ ಸಮಸ್ಯೆಯನ್ನು ಹೇಳುತ್ತಿದ್ದರೂ ಅಧಿಕಾರಿಗಳ ಮೌನವೇ ಉತ್ತರವಾಗಿದೆ. ಏಕೆ ಸರಿಪಡಿಸುತ್ತಿಲ್ಲ ಎಂದರು. ನುಗ್ಗೇಹಳ್ಳಿ ಸೊಸೈಟಿಯಲ್ಲೂ ಕಡಿಮೆ ಪಡಿತರ ನೀಡಲಾಗುತ್ತಿದೆ ಎಂದು ಸದಸ್ಯ ಜಯರಾಂ ದೂರಿದರು. ಪಡಿತರವನ್ನು ನೆಲದ ಮೇಲೆ ಸುರಿಯುವುದು, ಕಾಲಿನಿಂದ ತುಳಿದುಕೊಂಡು ಓಡಾಡುವುದು ಮಾಡದಂತೆ ಸೂಚನೆ ನೀಡಬೇಕು. ದರಪಟ್ಟಿಯ ಫಲಕವನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಹೆಬ್ಬೆಟ್ಟು ಗುರುತಿಗೆ 10 ರೂ. ಶುಲ್ಕ ತೆಗೆದುಕೊಳ್ಳಬಾರದೆಂಬ ಸೂಚನೆಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡುವಂತೆಯೂ ಸದಸ್ಯರು ಒತ್ತಾಯಿಸಿದರು.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿರುವುದರಿಂದ ಕುಡಿಯುವ ನೀರಿಗೆ ಎಲ್ಲೇ ಸಮಸ್ಯೆಯಾದರೂ ಅಧಿಕಾರಿಗಳು ತಕ್ಷ ಣ ಸ್ಪಂದಿಸಬೇಕೆಂದು ಅಧ್ಯಕ್ಷ ರು ಸೂಚಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಬಿ.ನಂದಿನಿ ಇದ್ದರು.
----------------------
ನ್ಯಾಯಬೆಲೆ ಅಂಗಡಿ ವಿಚಾರ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ವೇಳೆ ಉಪಾಧ್ಯಕ್ಷ ಭೈರೇಗೌಡ ತಮ್ಮ ಪಕ್ಕದಲ್ಲೇ ಕುಳಿತಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ರತ್ತ ಬೊಟ್ಟುಮಾಡಿ ಇಂತಹವರಿಂದ ಮೊದಲುಗೊಂಡು ಯಾರೇ ನಿಯಮ ಉಲ್ಲಂಘನೆ ಮಾಡಿದರೂ ಕ್ರಮಕೈಗೊಳ್ಳಬೇಕು ಎಂದಿದ್ದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಿ.ಮಂಜೇಗೌಡರನ್ನು ಕೆರಳಿಸಿತು. ಇಬ್ಬರೂ ಪರಸ್ಪರ ಚರ್ಚೆಗೆ ಮುಂದಾಗುತ್ತಿದ್ದಂತೆ ಸದಸ್ಯರು ಮಂಜೇಗೌಡರ ವಿರುದ್ಧವೇ ಮಾತನಾಡಿ ನೀವು ಇಲ್ಲಿ ನ್ಯಾಯಬೆಲೆ ಅಂಗಡಿಯವರ ಪ್ರತಿನಿಧಿಯಾಗಿ ಬಂದಿಲ್ಲವೆಂದು ಅವರನ್ನು ಸುಮ್ಮನಾಗಿಸಿದರು.