ಆ್ಯಪ್ನಗರ

ಆಚಾರ‍್ಯ ವರ್ಧಮಾನಸಾಗರ ಮಹಾರಾಜರ ಆಶೀರ್ವಾದದಿಂದ ಆತ್ಮಕಲ್ಯಾಣ

ವಿಕ ಸುದ್ದಿಲೋಕ ಚನ್ನರಾಯಪಟ್ಟಣ ಆಚಾರ‍್ಯ ವರ್ಧಮಾನಸಾಗರ ಮಹಾರಾಜರ ಆಶೀರ್ವಾದದಿಂದ ಕ್ಷೇತ್ರದ ಕಲ್ಯಾಣ ಮಾತ್ರವಲ್ಲ, ಆತ್ಮಕಲ್ಯಾಣವೂ ಆಗುತ್ತದೆ ಎಂದು ಶ್ರವಣಬೆಳಗೊಳ ಮಠದ ...

Vijaya Karnataka 17 Sep 2018, 5:00 am
ಚನ್ನರಾಯಪಟ್ಟಣ: ಆಚಾರ‍್ಯ ವರ್ಧಮಾನಸಾಗರ ಮಹಾರಾಜರ ಆಶೀರ್ವಾದದಿಂದ ಕ್ಷೇತ್ರದ ಕಲ್ಯಾಣ ಮಾತ್ರವಲ್ಲ, ಆತ್ಮಕಲ್ಯಾಣವೂ ಆಗುತ್ತದೆ ಎಂದು ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
Vijaya Karnataka Web hassan channarayapattana sravanbelagola vardaman sagara maharaj 68 aniversery
ಆಚಾರ‍್ಯ ವರ್ಧಮಾನಸಾಗರ ಮಹಾರಾಜರ ಆಶೀರ್ವಾದದಿಂದ ಆತ್ಮಕಲ್ಯಾಣ


ಶ್ರವಣಬೆಳಗೊಳದ ಚಾಮುಂಡರಾಯ ಸಭಾಮಂಟಪದಲ್ಲಿ ನಡೆದ ದಶಲಕ್ಷ ಣ ಮಹಾಪರ್ವದ 3ನೇ ಅರ್ಜವ ಧರ್ಮ ಜೊತೆಗೆ ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರ 68 ನೇ ಜನ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಇಡೀ ದೇಶಕ್ಕೆ ಧರ್ಮದ ಪ್ರಭಾವನೆ ಮತ್ತು ಪ್ರಚಾರ ಮಾಡುತ್ತಿದ್ದು, ಇವರು ಹೋದಲ್ಲಿ ಕಲ್ಯಾಣವಾಗುತ್ತದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಇದಕ್ಕೂ ಮುನ್ನ 68 ನೇ ಜನ್ಮ ಜಯಂತಿ ಅಂಗವಾಗಿ 68 ಶ್ರೀ ಫಲಗಳನ್ನು ಅರ್ಪಿಸಿ ಮಾತಾಜಿವರಿಂದ 68 ದೀಪಗಳಿಂದ ಅರತಿ ಮಾಡಿ ಪಾದಪೂಜೆ ಮಾಡಲಾಯಿತು. ನಂತರ ಗಣನಿ ಆರ್ಯಿಕಾ ಮಾತಾಜಿಯವರು ಸಂಗ್ರಹ ಮಾಡಿರುವ 'ಭಾದ್ರಪದ ಪೂಜಾ ಸಂಗ್ರಹ' ಎಂಬ ಪುಸ್ತಕವನ್ನು ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಮತ್ತು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ಸುವಿಧಿ ಸಾಗರ ಮಹಾರಾಜರು, ಆಚಾರ್ಯ ಶ್ರೀ ಪಂಚಕಲ್ಯಾಣ ಸಾಗರ ಮಹಾರಾಜರು, ಆಚಾರ್ಯ ಶ್ರೀ ಸುದೇಶ್‌ ಸಾಗರ ಮಹಾರಾಜರು ಮುನಿ ವೃಂದ ಆರ್ಯಿಕಾ ಮಾತಾಜಿಯವರು ಮತ್ತು ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ