ಆ್ಯಪ್ನಗರ

ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ: ಆರೋಪಿ ಬಂಧನಕ್ಕೆ ಬಲೆ

ಆರೋಪಿ ಬಂಧನಕ್ಕೆ ಬಲೆ * ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ಬಾಲಕಿ ತಂದೆ --------------- ವಿಕ ಸುದ್ದಿಲೋಕ ಹಾಸನ ಅಪ್ರಾಪ್ತ ಬಾಲಕಿ ಅಪಹರಣ ...

Vijaya Karnataka 26 May 2018, 5:00 am
ಹಾಸನ: ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದ ಆರೋಪಿ ಬಂಧಿಸಲು ಆಲೂರು ಪೊಲೀಸರು ಕಳೆದ ಏಳು ತಿಂಗಳಿಂದ ಮೀನಾಮೇಷ ಎಣಿಸುತ್ತಿದ್ದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಳಿಕ ಎಸ್‌ಪಿ ಖಡಕ್‌ ಸೂಚನೆ ಮೇರೆಗೆ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯೋನ್ಮುಖವಾಗಿದ್ದಾರೆ.
Vijaya Karnataka Web hassan child kidnap highcourt suggest arrest accuse
ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣ: ಆರೋಪಿ ಬಂಧನಕ್ಕೆ ಬಲೆ


ಆಲೂರು ತಾಲೂಕಿನ ಗ್ರಾಮವೊಂದರ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ರಘು (28) ಎಂಬಾತ 2017ರ ನ.13 ರಂದು ಅಪಹರಿಸಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿ ಪೋಷಕರು ಆಲೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧಿಸಿ ಬಾಲಕಿಯನ್ನು ಪತ್ತೆಹಚ್ಚುವ ಬದಲು ಸಬೂಬು ಹೇಳುತ್ತಿದ್ದರು ಎಂದು ಬಾಲಕಿ ತಂದೆ ಮಹಮ್ಮದ್‌ ಆಲಿ ದೂರಿದರು.

ಮೊರೆ:

ಪೊಲೀಸ್‌ ಠಾಣೆ, ಎಸ್‌ಪಿ ಕಚೇರಿಗೆ ತಿರುಗಿ ಸಾಕಾದ ಬಳಿಕ 2017ರ ನ.28ರಂದು ಎಸ್‌ಪಿ, ಡಿಸಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಗಳನ್ನು ಪತ್ತೆಮಾಡಿಕೊಡುವಂತೆದೂರು ನೀಡಿದ್ದರು. ಇಷ್ಟೆಲ್ಲ ಪ್ರಯತ್ನದ ಬಳಿಕವೂ ತಿಂಗಳುಗಟ್ಟಲೇ ಕಳೆದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ಕೂಡಲೇ ಬಾಲಕಿ ಪತ್ತೆಮಾಡುವಂತೆ ಎರಡು ತಿಂಗಳ ಹಿಂದೆ ಆದೇಶಿಸಿದ್ದರು.

ಬಾಲಕಿ ಪತ್ತೆ:

ಪ್ರಕರಣ ತೀವ್ರತೆ ಹೆಚ್ಚಿದ ಬಳಿಕ ಆರೋಪಿ ಸಂಬಂಧಿಕರ ಅರೇಹಳ್ಳಿಯ ಮನೆಯಲ್ಲಿದ್ದ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದ ಪೊಲೀಸರು ಅಂದಿನಿಂದ ಇಂದಿನವರೆಗೆ ಬಾಲಕಿಯರ ಬಾಲಮಂದಿರದಲ್ಲಿ ಇರಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪಿ ಬಂಧಿಸಿ ಕ್ರಮ ಕೈಗೊಳ್ಳಿ ಎಂಬ ಮನವಿಗೆ ಭರವಸೆ ಹೊರತಾಗಿ ಕ್ರಮ ಕೈಗೊಂಡಿಲ್ಲ ಎಂಬುದು ಬಾಲಕಿ ತಂದೆಯ ದೂರು. ಈ ಎಲ್ಲ ಪ್ರಯತ್ನದ ಬಳಿಕ ಇದೀಗ ಕಾರ‍್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿ ಬಂಧಿಸಿಯೇ ಕರೆತರುತ್ತೇವೆ ಎಂದು ಹೊರಟಿದ್ದಾರೆ.

-------------------
ಆಯೋಗ ಪ್ರವೇಶ

ಏಳು ತಿಂಗಳಾದರೂ, ಆರೋಪಿಯನ್ನು ಬಂಧಿಸದಿರುವ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಸ್ಪಿ ರಾಹುಲ್‌ಕುಮಾರ್‌ ಶಹಪುರವಾಡ್‌ ಅವರನ್ನು ಸಂಪರ್ಕಿಸಿ ಕೂಡಲೇ ಬಂಧಿಸಬೇಕೆಂದು ಕೋರಿದೆ. ಎರಡು ದಿನದ ಹಿಂದೆಯೂ ಪ್ರಕರಣದ ಬಗ್ಗೆ ಗಮನ ಸೆಳೆದಿದ್ದೇನೆ ಶೀಘ್ರ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- ಕೃಪಾ ಆಳ್ವಾ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ

ಶೀಘ್ರ ಬಂಧನ

ಬಾಲಕಿ ಅಪಹರಣ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿ ಬಂಧನಕ್ಕಾಗಿ ಆಲೂರು ಪೊಲೀಸರಿಗೆ ಗಡುವು ನೀಡಿದ್ದೇನೆ ಒಂದೆರಡು ದಿನದಲ್ಲಿ ಬಂಧನದ ಸಾಧ್ಯತೆ ಇದೆ.

- ರಾಹುಲ್‌ಕುಮಾರ್‌ ಶಹಪುರವಾಡ್‌ ಎಸ್‌ಪಿ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ