ಆ್ಯಪ್ನಗರ

ಅಕ್ರಮ ಮದ್ಯ ತಡೆಗಟ್ಟದಿದ್ರೆ ವಿಶೇಷ ತಂಡ ಕರೆಸುತ್ತೇನೆ

ಹಾಸನ : ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯ ಅಬಕಾರಿ ಅಧಿಕಾರಿಗಳು ನಿಯಂತ್ರಿಸದಿದ್ದರೆ ಆಯುಕ್ತರಿಗೆ ಹೇಳಿ ಬೆಂಗಳೂರಿನಿಂದ ವಿಶೇಷ ತಂಡ ಕರೆಸಿ ದಾಳಿ ಮಾಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.

Vijaya Karnataka 15 Jan 2019, 5:00 am
ಹಾಸನ : ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಜಿಲ್ಲೆಯ ಅಬಕಾರಿ ಅಧಿಕಾರಿಗಳು ನಿಯಂತ್ರಿಸದಿದ್ದರೆ ಆಯುಕ್ತರಿಗೆ ಹೇಳಿ ಬೆಂಗಳೂರಿನಿಂದ ವಿಶೇಷ ತಂಡ ಕರೆಸಿ ದಾಳಿ ಮಾಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.
Vijaya Karnataka Web hassan control illigual liquer minister hd revanna
ಅಕ್ರಮ ಮದ್ಯ ತಡೆಗಟ್ಟದಿದ್ರೆ ವಿಶೇಷ ತಂಡ ಕರೆಸುತ್ತೇನೆ


ಕಾನೂನು ರೀತಿ ಮಾರಾಟ ಮಾಡಿದರೆ ಅಭ್ಯಂತರವಿಲ್ಲ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಕುಡಿದು ಬಂದು ಮಹಿಳೆಯರು, ಮಕ್ಕಳ ಮೇಲೆ ಹಲ್ಲೆ ಮಾಡುವುದನ್ನು ಸಹಿಸುವುದಿಲ್ಲ. ಅಕ್ರಮ ಮದ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಅವರಿಗೂ ಸೂಚಿಸಿದ್ದೇನೆ. ಅಕ್ರಮ ಮದ್ಯ ಮಾರಾಟ ಸಂಪೂರ್ಣ ಮಟ್ಟ ಹಾಕುವರೆಗೆ ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಶಾಸಕರ ಅನುದಾನ ಈ ತಿಂಗಳ 30 ರೊಳಗೆ ಜಿಪಂ ಎಂಜಿನಿಯರ್‌ಗಳು ಏಜೆನ್ಸಿ ನಿಗದಿಪಡಿಸಬೇಕು. ಶೇ.100 ಅನುದಾನ ಸದ್ಭಳಕೆಯಾಗಬೇಕು. ರಾಜ್ಯದ ಹಾಗೂ ಕೇಂದ್ರದ ಅನುದಾನವಿರಲಿ ಕಾನೂನು ರೀತಿ ನಿಗದಿತ ಸಮಯದ ಒಳಗೆ ಪೂರ್ಣವಾಗಿ ಬಳಕೆಯಾಗಬೇಕು. ಈ ಸಂಬಂಧ ಜಿಪಂ ಸಿಇಒ ವಾರದೊಳಗೆ ಎಲ್ಲ ಇಒ, ಪಿಡಿಒಗಳ ಸಭೆ ಕರೆದು ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ಡಿಸಿ ಕಚೇರಿಲಿ ಸಭೆ: ಜ.16 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸುತ್ತೇನೆ. ವೃದ್ಧಾಪ್ಯ ವೇತನ ವಂಚಿತರು ಯಾರು ಇರಬಾರದು. ಪಿಡಿಒಗಳು ಮನೆ ಬಾಗಿಲಿಗೆ ತೆರಳಿ ಯಾರಿಗೆ ವೃದ್ಧಾಪ್ಯ ವೇತನ ಬರುತ್ತಿಲ್ಲವೋ ಕೇಳಿ ಮಾಡಿಸಬೇಕು. ಈ ಸಂಬಂಧ ಇಡೀ ದಿನ ಪ್ರಗತಿ ಪರಿಶೀಲಿಸುತ್ತೇನೆ. ಇಲಾಖೆವಾರು ಪ್ರಗತಿ ಪರಿಶೀಲಿಸುತ್ತೇನೆ. ಅರಸೀಕೆರೆಗೆ ಎಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಿಸುತ್ತೇನೆ. ರಾಮನಾಥಪುರ-ಕೊಣನೂರು ನಡುವೆ ಎಂಜಿನಿಯರಿಂಗ್‌ ಕಾಲೇಜು ಮಾಡಿಸುತ್ತೇನೆ ಎಂದರು.
-----------
ಐದು ಜನ ಶಾಸಕರು ಹೋದರು, ಸರಕಾರ ಬೀಳುತ್ತೆ ಅನ್ನೋದೆಲ್ಲಾ ದೃಶ್ಯ ಮಾಧ್ಯಮದವರ ಸೃಷ್ಟಿ. ಅದೊಂದು ರೀತಿ ಏಪ್ರಿಲ್‌ ಫೂಲ್‌ ಮಾಡಿದಂತೆ. ಮಾಡಿಕೊಳ್ಳಲಿ ಬಿಡಿ. ನಮ ಸರಕಾರ ಭದ್ರವಾಗೈತೆ.
- ಎಚ್‌.ಡಿ.ರೇವಣ್ಣ, ಲೋಕೋಪಯೋಗಿ ಇಲಾಖೆ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ