ಆ್ಯಪ್ನಗರ

ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಿದ್ಧ

ಹಾಸನ: ರಾಜ್ಯದ ಹೈಕೋರ್ಟ್‌ಗಿಂತ ವಿಶಾಲ ಪ್ರದೇಶದಲ್ಲಿ ಬರೋಬ್ಬರಿ 93 ಕೋಟಿ ರೂ.ವೆಚ್ಚದಲ್ಲಿ ಎರಡು ಹಂತದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.

Vijaya Karnataka 11 Mar 2019, 5:00 am
ಹಾಸನ: ರಾಜ್ಯದ ಹೈಕೋರ್ಟ್‌ಗಿಂತ ವಿಶಾಲ ಪ್ರದೇಶದಲ್ಲಿ ಬರೋಬ್ಬರಿ 93 ಕೋಟಿ ರೂ.ವೆಚ್ಚದಲ್ಲಿ ಎರಡು ಹಂತದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.
Vijaya Karnataka Web hassan court complex inaguration to ready
ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಿದ್ಧ


ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶರನ್ನು ರಾಜ್ಯ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ, ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಬೆನ್ನಲ್ಲೇ ಭಾನುವಾರ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕ ಘೋಷಿಸಿದ್ದು ಉದ್ಘಾಟನೆ ಅನುಮಾನವಾಗಲಿದೆ.

ವೀಕ್ಷಣೆ: ಅಂತಿಮ ಹಂತದ ಕಾಮಗಾರಿಯನ್ನು ಹೈಕೋರ್ಟ್‌ ನ್ಯಾಯಾಧೀಶರು, ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶೆ ಸುಜಾತ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್‌.ತಿಮ್ಮಣ್ಣಚಾರ್‌, ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ , ಜಿಲ್ಲಾಧಿಕಾರಿ ಅಕ್ರಂಪಾಷಾ, ಪಿಡಬ್ಲ್ಯೂಡಿ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಮತ್ತಿತರ ಅಧಿಕಾರಿಗಳ ತಂಡ ಭಾನುವಾರ ವೀಕ್ಷಿಸಿತು. ಹಗಲು-ರಾತ್ರಿ ಕರ್ತವ್ಯ ನಿರ್ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಇನ್ನು ಅಗತ್ಯ ಕಾಮಗಾರಿ ಬಗ್ಗೆ ಯೋಜನೆ ರೂಪಿಸಲು ಸೂಚಿಸಲಾಯಿತು.

ಒಟ್ಟು 7.34 ಎಕರೆ ವಿಶಾಲ ಪ್ರದೇಶದಲ್ಲಿ ಒಟ್ಟು 93 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಲಾಗಿದ್ದು, ಮೊದಲನೇ ಹಂತದ ನ್ಯಾಯಾಲಯ ಸಂಕೀರ್ಣವನ್ನು 21 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು 2007ರ ಜೂ.17 ರಂದು ಮುಖ್ಯಮಂತ್ರಿ ಎಚ್‌.ಡಿ.ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ್ದರು. 2015ರ ಏ.4 ರಂದು ಜಿಲ್ಲಾ ನ್ಯಾಯಾಲಯ ಕಟ್ಟಡವನ್ನು ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಉದ್ಘಾಟಿಸಿದ್ದರು. ಆದರೆ ಇಲ್ಲಿಗೆ ನ್ಯಾಯಾಲಯ ಇನ್ನೂ ಸ್ಥಳಾಂತರಗೊಂಡಿಲ್ಲ. ಇದೀಗ ಎರಡನೇ ಹಂತದ ಕಾಮಗಾರಿಗೆ 72 ಕೋಟಿ ವೆಚ್ಚ ಮಾಡಿದ್ದು, ಪಿಠೋಪಕರಣ, ನ್ಯಾಯಾಧೀಶರ ಕೊಠಡಿಗಳು, ಇತರ ಕೊಠಡಿಗೆ ಅಗತ್ಯ ಪಿಠೋಪಕರಣ, ಬಾಗಿಲು, ಕಿಟಕಿ, ಒಳಾಂಗಣದ ಕೊಠಡಿಗಳನ್ನು ಅಲಂಕೃತಗೊಳಿಸುವ ಕಾಮಗಾರಿ ಬಿರುಸಿನಿಂದ ಸಾಗಿದೆ.

ಒಂದೇ ಸೂರು: ಒಟ್ಟು 13 ನಾನಾ ನ್ಯಾಯಾಲಯಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡಿದೆ. ನ್ಯಾಯಾಲಯದ ಹಿಂಬದಿಯಲ್ಲಿ ವಕೀಲರ ಸಂಘದ ಕಟ್ಟಡ, ಎಪಿಪಿ( ಸರಕಾರಿ ಅಭಿಯೋಜಕರು) ನೋಟರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾಂಟೀನ್‌, ಟೈಪಿಸ್ಟ್‌ ಕೊಠಡಿಗಳು ಸೇರಿದಂತೆ ಅಗತ್ಯ ಮೂಲಸೌಲಭ್ಯವನ್ನು ಒಂದೆಡೆ ಕಲ್ಪಿಸಲಾಗಿದ್ದು, ರಾಜ್ಯದ ಹೈಕೋರ್ಟ್‌ಗೂ ಮಿಗಿಲಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

-------------
ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪೂರ್ಣಗೊಂಡು ಸಣ್ಣಪುಟ್ಟ ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದೆ. ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಮಂಜೂರಾತಿ ದೊರೆತಿರುವ ಕಾರಣ ಆ ಕಾಮಗಾರಿಯೂ ಆಗುತ್ತದೆ.
- ಅಕ್ರಂಪಾಷಾ, ಜಿಲ್ಲಾಧಿಕಾರಿ
-----------
ನ್ಯಾಯಾಲಯಕ್ಕೆ ಅಗತ್ಯ ಸೌಲಭ್ಯ ಏನೇನು ಬೇಕು ಎಂಬುದರ ಪಟ್ಟಿ ನೀಡಲು ಸೂಚಿಸಲಾಗಿದೆ. ನ್ಯಾಯಾಲಯ ಹಿಂಬದಿ ಖಾಸಗಿ ಜಾಗವಿದ್ದು ಅದನ್ನು ಸ್ವಾಧೀನಕ್ಕೆ ಪಡೆದು ಇಲ್ಲೇ ನ್ಯಾಯಾಧೀಶರ ವಸತಿ ಗೃಹಕ್ಕೆ ವ್ಯವಸ್ಥೆ ಕಲ್ಪಿಸಬಹುದೇ ಎಂದು ವೀಕ್ಷಣೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ.
- ಎಚ್‌.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ
------------
ವಕೀಲರ ಸಂಘದ ಕೊಠಡಿಯಲ್ಲಿ ಸಂಘದ ಸದಸ್ಯರು ಕೂರಲು ಸೂಕ್ತ ವ್ಯವಸ್ಥೆ, ಮೊದಲ ಅಂತಸ್ಥಿನಲ್ಲಿ ವಿಶಾಲ ಸಭಾಂಗಣ, ಕ್ರೀಡಾ ಕೊಠಡಿಯೊಂದಿಗೆ, ಮಹಿಳಾ ವಕೀಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು. ಅಂಚೆ ಕಚೇರಿ, ಅಂಗಡಿ ಮಳಿಗೆ, ಕ್ಯಾಂಟೀನ್‌ ನಿರ್ವಹಣೆ ಜವಾಬ್ದಾರಿಯನ್ನು ಸಂಘಕ್ಕೆ ವಹಿಸಬೇಕು ಎಂದು ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶೆ ಸುಜಾತ ಅವರನ್ನು ಕೋರಲಾಗಿದೆ.
- ಜೆ.ಪಿ.ಶೇಖರ್‌, ವಕೀಲರ ಸಂಘದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ