ಆ್ಯಪ್ನಗರ

ಉತ್ತಮ ಕೆಲಸ ಮಾಡಿದರೂ ಮತ ನೀಡಲಿಲ್ಲ

ಉತ್ತಮ ಕೆಲಸ ಮಾಡಿದರೂ ಮತ ನೀಡಲಿಲ್ಲ *ಜೆಡಿಎಸ್‌ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಶಾಸಕ ಎಚ್‌ಎಸ್‌...

Vijaya Karnataka 25 Jun 2018, 5:00 am
ಹಾಸನ: ಹಾಸನ ನಗರಸಭೆಯಿಂದ ಉತ್ತಮ ಕೆಲಸಗಳಾಗಿದೆ ಎಂದು ಜನರು ಇಂದಿಗೂ ಮಾತನಾಡುತ್ತಾರೆ. ಆದರೆ, ಅವೆಲ್ಲ ಮತವಾಗಿ ಪರಿವರ್ತನೆ ಆಗಲಿಲ್ಲ. ಇದಕ್ಕೆ ಪ್ರಚಾರದ ಕೊರತೆಯೂ ಕಾರಣವಾಗಿದೆ. ಜೆಡಿಎಸ್‌ ಸೋಲಿನಿಂದ ಯಾವ ಕಾರ‍್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು ಮಾಜಿ ಶಾಸಕ ಎಚ್‌.ಎಸ್‌. ಪ್ರಕಾಶ್‌ ಹೇಳಿದರು.
Vijaya Karnataka Web hassan ex mla prakash jds workers evaluvation meeting
ಉತ್ತಮ ಕೆಲಸ ಮಾಡಿದರೂ ಮತ ನೀಡಲಿಲ್ಲ


ನಗರದ ತನ್ವಿತ್ರಿಶಾ ಸಮುದಾಯದ ಭವನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಕಾರ‍್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುಕ ಕಾಲ ಬದಲಾಗಿದ್ದು ಹಣ ಇಲ್ಲದೆ ಚುನಾವಣೆ ನಡೆಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ತಾನು ಚುನಾವಣೆಗೆ ಸ್ಪರ್ಧಿಸಿದಾಗ ತನ್ನ ಬಳಿ ಹಣ ಇರಲಿಲ್ಲ. ಪP್ಷÜದಲ್ಲಿಯೂ ಹಣ ಇರಲಿಲ್ಲ. ಹಾಗಾಗಿ ಸೋಲಿಗೆ ಹಣವೂ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳಾ ಸಂಘಟನೆಯಲ್ಲಿ ಜೆಡಿಎಸ್‌ ಹಿಂದೆ ಉಳಿದಿದೆ. ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಗೂ ಹೆಚ್ಚು ಒತ್ತು ನೀಡಬೇಕು. ರಾಜ್ಯದಲ್ಲಿ ನಮ್ಮ ಪP್ಷÜವೇ ಅಧಿಕಾರದಲ್ಲಿದೆ. ರೇವಣ್ಣ ಅವರು ಸಚಿವರಾಗಿದ್ದು, ಜಿಲ್ಲೆಯ ಅಭಿವದ್ಧಿಗೆ ಸದಾ ಸಿದ್ಧರಿದ್ದಾರೆ. ಸೋತ ಮಾತ್ರಕ್ಕೆ ತಾನು ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಕ್ಷೇತ್ರದ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.

ಜೆಡಿಎಸ್‌ ಮುಖಂಡ ಕೆ.ಎಂ.ರಾಜೇಗೌಡ ಮತನಾಡಿ, ಎಚ್‌.ಎಸ್‌.ಪ್ರಕಾಶ್‌ ಅವರು ಶಾಸಕರಾಗಿದ್ದಾಗ ಅನೇಕ ಅಭಿವದ್ಧಿ ಕೆಲಸ ಮಾಡಿದ್ದಾರೆ. ಅವರ ಸೋಲಿಗೆ ಅಪಪ್ರಚಾರ ಹಾಗೂ ವಿವಿಧ ಆಮಿಷಗಳು ಕಾರಣವಾಗಿವೆ. ಯಾರೂ ಎದೆಗುಂದಬೇಕಿಲ್ಲ ರಾಜಕೀಯದಲ್ಲಿ ಸೋಲು ಗೆಲುವು ಇದ್ದದ್ದೇ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಇಂದಿರಾ ಗಾಂಧಿ ಸೇರಿದಂತೆ ಅನೇಕ ನಾಯಕರು ಸೋಲಿನ ಕಹಿ ಅನುಭವಿಸಿದ್ದಾರೆ. ಹಾಗಾಗಿ ಕಾರ್ಯಕರ್ತರು ಧೃತಿಗೆಡದೆ ಪP್ಷÜ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಪಟೇಲ್‌ ಶಿವರಾಮ್‌ ಮಾತನಾಡಿ, ಇಂದಿಗೂ ಹಾಸನ ಜೆಡಿಎಸ್‌ನ ಭದ್ರ ಕೋಟೆ. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಜೆಡಿಎಸ್‌ ಶಕ್ತಿ ಕೇಂದ್ರದಲ್ಲೇ ನಮಗೆ ಇದು ಎರಡನೇ ಸೋಲು. ವಿಧಾನ ಪರಿಷತ್‌ ಚುನಾವಣೆಯಲ್ಲಿ ತಾನು ಸೋಲು ಅನುಭವಿಸಿದೆ. ಈಗ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಎಸ್‌. ಪ್ರಕಾಶ್‌ ಸೋತಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಜೆಡಿಎಸ್‌ ಬಹುಮತ ಇದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ. ಅದನ್ನು ತಾನು ಈಗ ಚರ್ಚಿಸುವುದಿಲ್ಲ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪP್ಷÜವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.

ಜೆಡಿಎಸ್‌ ತಾಲೂಕು ಘಟಕದ ಅಧ್ಯP್ಷÜ ಎಸ್‌.ದ್ಯಾವೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯP್ಷÜ ಸತ್ಯನಾರಾಯಣ್‌, ನಗರಸಭೆ ಸದಸ್ಯ ಜಮೀರ್‌, ನಿರ್ಮಲಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ