ಆ್ಯಪ್ನಗರ

ಸಲಿಂಗ ಕಾಮ: ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ

ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ * ಸಂಗಮ ಸಂಸ್ಥೆಯ ಹಾಸನ ವಿಭಾಗೀಯ ಮುಖ್ಯಸ್ಥೆ ನಿಶಾ ಗೊಳೂರು * ಧಾರ್ಮಿಕ, ನೈತಿಕತೆಯ ದೌರ್ಜನ್ಯದ ವಿರುದ್ಧ ಹೋರಾಟ ವಿಕ ಸುದ್ದಿಲೋಕ ...

Vijaya Karnataka 8 Sep 2018, 5:00 am
ಹಾಸನ: ಸುಪ್ರೀಂಕೋರ್ಟ್‌ ಸಲಿಂಗಕಾಮ ಅಪರಾಧವಲ್ಲ ಎಂಬ ಮಹತ್ವದ ತೀರ್ಪು ನೀಡಿದ್ದು ಜೀವಿಸುವ ಹಕ್ಕು ಪಡೆದುಕೊಂಡಿದ್ದೇವೆ. ಇನ್ನೇನಿದ್ದರೂ ತಮ್ಮದು ಧಾರ್ಮಿಕ, ನೈತಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಟ ಎಂದು ಸಂಗಮ ಸಂಸ್ಥೆಯ ಹಾಸನ ವಿಭಾಗೀಯ ಮುಖ್ಯಸ್ಥೆ ನಿಶಾ ಗೊಳೂರು ಹೇಳಿದರು.
Vijaya Karnataka Web hassan gay sex aritcle 377 legal in india organisation welcomes
ಸಲಿಂಗ ಕಾಮ: ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ


ನಮ್ಮ ಸಮುದಾಯಕ್ಕೆ ಸ್ವಾತಂತ್ರ್ಯ ಸಿಕ್ಕಿದಷ್ಟೇ ಸಂತೋಷವಾಗಿದೆ. ತಮಗೆ ಸೆಕ್ಷ ನ್‌ 377 ಕಂಠಕವಾಗಿತ್ತು, ಈ ಕಾಯಿದೆ ಇದ್ದುದರಿಂದ ತಮ್ಮನ್ನು ಅಪರಾಧಿಗಳಂತೆ ಕಾಣಲಾಗುತ್ತಿತ್ತು. ಈ ಮೂಲಕ ಒಂದು ರೀತಿಯಲ್ಲಿ ನಮ್ಮ ಬದುಕಿನ ಹಕ್ಕನ್ನೇ ಕಸಿದು ಕೊಳ್ಳಲಾಗಿತ್ತು. ನಿನ್ನೆಯಷ್ಟೇ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠ ಐಪಿಸಿ ಸೆಕ್ಷ ನ್‌ 377 ಅನ್ನು ರದ್ದುಗೊಳಿಸಿರುವುದು ಸಂತಸದ ವಿಷಯ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಈ ಹಿಂದೆ ಇದೇ ಸುಪ್ರೀಂಕೋರ್ಟ್‌ ತಮ್ಮನ್ನು ತೃತೀಯ ಲಿಂಗಿಗಳೆಂದು ಹೇಳಿ ಎಲ್ಲ ರೀತಿಯ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಆದರೆ ಈವರೆಗೂ ಯಾವುದೇ ರೀತಿಯ ಸವಲತ್ತು ಸಿಕ್ಕಿರಲಿಲ್ಲ. ಇದೀಗ ನಮ್ಮ ಬಹು ದಿನಗಳ ಹೋರಾಟಕ್ಕೆ ಮನ್ನಣೆ ಸಿಕ್ಕಿದ್ದು, ಮುಂದಾದರೂ ಸಮಾಜದಲ್ಲಿ ನಮ್ಮನ್ನೂ ಎಲ್ಲರಂತೆ ಕಾಣಬೇಕು. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ನಮ್ಮ ಸಮುದಾಯ ಸ್ವಾಗತಿಸುತ್ತದೆ. ಈ ತೀರ್ಪು ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯಿಸುತ್ತದೆ ಎಂದರು.

ನಮ್ಮ ಸಮುದಾಯದವರು ಮಾತ್ರ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಎಂಬ ಅಭಿಪ್ರಾಯದಿಂದ ದೇಶದಲ್ಲಿ ನಮ್ಮ ಸಮುದಾಯದವರ ಮೇಲೆ ಪೊಲೀಸ್‌ ದೌರ್ಜನ್ಯ ಹಾಗೂ ಸಾಮಾಜಿಕ ಕಳಂಕವಿತ್ತು. ಸುಮಾರು 20 ವರ್ಷಗಳಿಂದ ನಡೆಸಿದ ಹೋರಾಟಕ್ಕೆ ನಮಗೆ ಜಯ ಸಿಕ್ಕಿದೆ. ನ್ಯಾಯಾಂಗದ ಅಡಿಯಲ್ಲಿ ನಮಗೆ ನ್ಯಾಯ, ಸ್ವಾತಂತ್ರ್ಯ ದೊರಕಿದ್ದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ನೈತಿಕತೆ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಹಿಂದೂ ಧರ್ಮದ ಮೇಲುಗೈ ಇರುವ ನಮ್ಮ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಮಹಿಳೆಯರು , ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ಅದೇ ರೀತಿ ನಮ್ಮ ಸಮುದಾಯದವರ ಮೇಲೂ ಕಳಂಕ ಹಾಗೂ ತಾರತಮ್ಯ ಹೆಚ್ಚಾಗಿದೆ. ಇನ್ನು ಮುಂದೆ ಸಂಭಾಷಣೆ ಮೂಲಕ ಅರ್ಥ ಮಾಡಿಸುವ ಹೋರಾಟವನ್ನು ಶಾಂತಿಯುತವಾಗಿ ಮಾಡುತ್ತೇವೆ ಎಂದರು.

ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷ ವರ್ಷ, ಸದಸ್ಯರಾದ ಮಂಜುಳಾ, ಪ್ರಕಾಶ್‌, ದಲಿತ ಮುಖಂಡ ಹೆತ್ತೂರು ನಾಗರಾಜ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ