ಆ್ಯಪ್ನಗರ

ಹರದನಹಳ್ಳಿ ದೇವೇಶ್ವರನಿಗೆ ಸಿಎಂ ಪೂಜೆ

ವಿಕ ಸುದ್ದಿಲೋಕ ಹಾಸನ ಮುಖ್ಯಮಂತ್ರಿ ಎಚ್‌ಡಿ...

Vijaya Karnataka 14 Aug 2018, 5:00 am
ಹಾಸನ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶ್ರಾವಣ ಸೋಮವಾರವಾರದಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ತಮ್ಮ ಕುಟುಂಬದ ಆರಾಧ್ಯಧೈವ ದೇವೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
Vijaya Karnataka Web hassan haradanahlli cm hd kumaraswamy sravanasomavara lord shiva worship
ಹರದನಹಳ್ಳಿ ದೇವೇಶ್ವರನಿಗೆ ಸಿಎಂ ಪೂಜೆ


ಹುಬ್ಬಳ್ಳಿಯಿಂದ ಭಾನುವಾರ ರಾತ್ರಿ ನಗರಕ್ಕೆ ಪತ್ನಿ ಅನಿತಾ ಅವರೊಂದಿಗೆ ಆಗಮಿಸಿದ ಸಿಎಂ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಮುಂಜಾನೆ ಐದು ಗಂಟೆಗೆ ತಮ್ಮ ಹುಟ್ಟೂರು ಹರದನಹಳ್ಳಿಗೆ ಆಗಮಿಸಬೇಕಿತ್ತಾದರೂ, 7.15ರ ವೇಳೆಗೆ ಆಗಮಿಸಿದರು. ಶೃಂಗೇರಿ-ಕೊಪ್ಪದಿಂದ ಆಗಮಿಸಿದ್ದ ಅರ್ಚಕರು ಮಧ್ಯರಾತ್ರಿಯಿಂದಲೇ ದೇವೇಶ್ವರ(ಈಶ್ವರ) ದೇಗುಲದಲ್ಲಿ ಪೂಜೆಗೆ ವಿಶೇಷ ಸಿದ್ಧತೆ ನಡೆಸಿದ್ದರು. ತಂದೆ ಎಚ್‌.ಡಿ.ದೇವೇಗೌಡ, ತಾಯಿ ಚನ್ನಮ್ಮ ,ಸಹೋದರ ಎಚ್‌.ಡಿ.ರೇವಣ್ಣ ಸಮ್ಮುಖದಲ್ಲಿ ದುರ್ಗಾಸಪ್ತಶತಿ ಪಾರಾಯಣಕ್ಕೆ ಸಂಕಲ್ಪ ಮಾಡಿಕೊಂಡ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಅಲ್ಲಿಂದ ಹೊಳೆನರಸೀಪುರದ ಲಕ್ಷ್ಮೇನರಸಿಂಹ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಮಾವಿನಕೆರೆ ಬೆಟ್ಟಕ್ಕೆ ತೆರಳಿ ಅಲ್ಲಿಯೂ ಕೆಲಕಾಲ ಇದ್ದು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ 1.45 ರವೇಳೆಗೆ ಹರದನಹಳ್ಳಿಗೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ದೇಗುಲದಲ್ಲೇ ಪ್ರಸಾದ ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಸುಸ್ಥಿತ, ಸುಭದ್ರ, ಜನಪರ ಆಡಳಿತ ನೀಡುವುದನ್ನು ಗುರಿಯ್ಡಾಟ್ಟುಕೊಂಡು ಕಾರ‍್ಯಕ್ರಮ ರೂಪಿಸಿದ್ದೇನೆ. ಇದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗುವುದಿಲ್ಲ ಹಾಗೆಂದು ಎಲ್ಲರನ್ನು ಮೆಚ್ಚಿಸಲು ಆಗಲ್ಲ. ಹುಟ್ಟೂರಿನ ದೇವೇಶ್ವರ ತಂದೆಯವರಿಗೆ ರಾಜಕೀಯ ಭವಿಷ್ಯ ರೂಪಿಸಿದ ಪುಣ್ಯಸ್ಥಳ. ಮೊದಲಿನಿಂದಲೂ ಇಲ್ಲಿಗೆ ಬರುತ್ತಿದ್ದೆ ಎಂದರು.

ನಾಡಿನ 6.50 ಕೋಟಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಶಕ್ತಿ ನೀಡು ಎಂದು ಪ್ರಾರ್ಥಿಸಿದ್ದೇನೆ. ನಮ್ಮ ಶ್ರಮದ ಹಿಂದೆ ದೇವರ ಅನುಗ್ರಹವೂ ಮುಖ್ಯ. ಭಗವಂತನ ಆಶೀರ್ವಾದ ಪಡೆದು ಇಲ್ಲಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದೇನೆ. ಅಲ್ಲಿಂದ ಮಂಗಳವಾರ ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿ ಫಾರಂಗೂ ಪೂಜೆ: ಸ್ಥಳೀಯ ಸಂಸ್ಥೆ ಚುನಾವಣೆ ಆ.29 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ನ ಬಿಫಾರಂಗಳನ್ನು ಒಂದು ಬಾಕ್ಸ್‌ನಲ್ಲಿಟ್ಟು ತಂದು ದೇವೇಶ್ವರನ ಗರ್ಭಗುಡಿಯಲ್ಲಿ ಇಟ್ಟು ಅರ್ಚಕರಿಂದ ಪೂಜೆ ಮಾಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ