ಆ್ಯಪ್ನಗರ

ಪವಾಡ ಬಯಲು: ನಂಬಿಕೆಗೆ ಧಕ್ಕೆ ತರಬೇಡಿ

ನಂಬಿಕೆಗೆ ಧಕ್ಕೆ ತರಬೇಡಿ *ಕಾನೂನಿಗೆ ಧಕ್ಕೆ ತಂದರೆ ಜಿಲ್ಲಾಡಳಿತ, ಪೊಲೀಸ್‌ ವರಿಷ್ಠಾಧಿಕಾರಿಗಳು ಕ್ರಮ: ಸಚಿವ ರೇವಣ್ಣ ವಿಕ ಸುದ್ದಿಲೋಕ ಹಾಸನ ದಶಕಗಳಿಂದ ನಡೆದು ಬಂದಿರುವ ...

Vijaya Karnataka 25 Oct 2018, 5:00 am
ಹಾಸನ: ದಶಕಗಳಿಂದ ನಡೆದು ಬಂದಿರುವ ಸಂಪ್ರದಾಯದ ಅನ್ವಯವೇ ಹಾಸನಾಂಬೆ ದರ್ಶನ ನಡೆಯುತ್ತದೆ. ಭಕ್ತರ ನಂಬಿಕೆಗೆ ಯಾರು ಘಾಸಿ ಉಂಟುಮಾಡಬಾರದು, ಧಕ್ಕೆ ತರಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.
Vijaya Karnataka Web hassan hasanmba darshana bjvs commitee demand minister hd revanna suugest police action
ಪವಾಡ ಬಯಲು: ನಂಬಿಕೆಗೆ ಧಕ್ಕೆ ತರಬೇಡಿ


ಪವಾಡವೋ ಮತ್ತೇನೋ ಗೊತ್ತಿಲ್ಲ. ಧಾರ್ಮಿಕ ವಿಧಿ, ವಿಧಾನದಂತೆ ಪೂಜೆ ನಡೆಯುತ್ತದೆ. ಕಾನೂನಿಗೆ ಧಕ್ಕೆ ತಂದರೆ ಜಿಲ್ಲಾಡಳಿತ, ಪೊಲೀಸ್‌ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಮೂಲಕ ದರ್ಶನದ ವೇಳೆ ಆರದ ದೀಪ, ಬಾಡದ ಹೂವನ್ನು ನಮಗೂ ತೋರಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಭಾರತ ಜ್ಞಾನವಿಜ್ಞಾನ ಪರಿಷತ್ತಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಪರ-ವಿರೋಧ: ದೇಗುಲ ಬಾಗಿಲು ತೆರೆಯುವ ಸಂದರ್ಭ ಪವಾಡ ವೀಕ್ಷಿಸಲು ಅವಕಾಶ ಕಲ್ಪಿಸಬೇಕು ಎಂದು ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೆ, ಪವಾಡ ಬಯಲು ಮಾಡಲು ಅವಕಾಶ ನೀಡಬಾರದು ಎಂದು ದೇವಿಯ ಭಕ್ತರು, ಹಿಂದೂಪರ ಸಂಘಟನೆಗಳು, ಶ್ರೀರಾಮಸೇನೆ, ಕರವೇ ಕೂಡ ಜಿಲ್ಲಾಡಳಿತವನ್ನು ಒತ್ತಾಯಿಸಿವೆ. ಈ ವಿಷಯದಲ್ಲಿ ಮೌನವಾಗಿಯೇ ಇರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರಕಾರದ ಸೂಚನೆ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ನಂಬಿಕೆಗೆ ಬಿಡಿ ಭಕ್ತರ ನಂಬಿಕೆಗೆ ವಿರುದ್ಧವಾಗಿ ಮೌಢ್ಯ, ಮೂಢನಂಬಿಕೆ ಎಂದು ಪ್ರಚೋದಿಸುವುದು ಬೇಡ. ನಮ್ಮ ಪಾಡಿಗೆ ನಮ್ಮನ್ನು ಬಿಡಿ, ಇಷ್ಟವಿದ್ದವರು ದೇಗುಲಕ್ಕೆ ಹೋಗಿ ಕೈಮುಗಿಯುತ್ತಾರೆ ಇಲ್ಲದವರು ಸುಮ್ಮನಿರುತ್ತಾರೆ. ನಂಬಿಕೆ ಭಗ್ನ ಮಾಡುವುದರಿಂದ ಆಗುವ ಲಾಭವೇನು ಎಂದು ಪ್ರಶ್ನಿಸಿದ್ದಾರೆ. ಹಾಸನಾಂಬ ದೇಗುಲ ಬಾಗಿಲು ತೆರೆಯಲು ಆರು ದಿನವಷ್ಟೇ ಬಾಕಿ ಇದ್ದುಶಾಂತಿಯುವಾಗಿ ಹಾಸನಾಂಬ ಉತ್ಸವ ಆಗಬೇಕು ಎಂಬುದಷ್ಟೇ ಜಿಲ್ಲಾಡಳಿತದ ಇಚ್ಛೆಯಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಮುಂದಿನ ನಡೆ: ಈಗಾಗಲೇ ಪ್ರಗತಿಪರರನ್ನು ಒಳಗೊಂಡಂತೆ ಸಭೆ ನಡೆಸಿ ಅಭಿಪ್ರಾಯ ಆಲಿಸಿರುವ ಭಾರತೀಯ ಜ್ಞಾನವಿಜ್ಞಾನ ಪರಿಷತ್‌ ಪವಾಡ ಬಯಲುಗೊಳಿಸಲು ಅವಕಾಶ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಹಿಂದೂಪರ ಸಂಘಟನೆಗಳು, ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಭಕ್ತರ ನಂಬಿಕೆಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಹೀಗಾಗಿ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ