ಆ್ಯಪ್ನಗರ

ಕೆರೆಗಳಿಗೆ ಕೃಪೆ ತೋರದ ವರುಣ

ಕೆರೆಗಳಿಗೆ ಕೃಪೆ ತೋರದ ವರುಣ * 145 ಕೆರೆಗಳು ಖಾಲಿ ಖಾಲಿ * ಜಿಪಂ ವ್ಯಾಪ್ತಿಯಲ್ಲಿ 2738, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 170 ...

Vijaya Karnataka 25 Aug 2018, 5:00 am
ಹಾಸನ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದರೂ 145 ಕೆರೆಗಳ ಒಡಲು ತುಂಬಿಲ್ಲ. ಇದರೊಂದಿಗೆ ಶೇ.30ಕ್ಕಿಂತ ಕಡಿಮೆ ನೀರಿನ ಸಂಗ್ರಹ ಇರುವ 74 ಕೆರೆಗಳು ಇವೆ ಎಂಬುದು ಮತ್ತೊಂದು ಸಂಗತಿ.
Vijaya Karnataka Web hassan heavy rain over all district 145 lake dry with out water
ಕೆರೆಗಳಿಗೆ ಕೃಪೆ ತೋರದ ವರುಣ


ಜಿಪಂ ವ್ಯಾಪ್ತಿಯಲ್ಲಿ 2738 ಕೆರೆಗಳು ಇವೆ. ಈ ಪೈಕಿ 137 ಕೆರೆಗಳಲ್ಲಿ ನೀರೇ ಇಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ 43 ಕೆರೆಗಳು ಬಣಗುಡುತ್ತಿವೆ. 8 ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಎಲ್ಲೆಡೆ ಜಲಪ್ರವಾಹ ಜನತೆಯನ್ನು ಹೈರಾಣಾಗಿಸಿದ್ದರೆ, ಜಿಲ್ಲೆಯಲ್ಲಿ ಕೆರೆಗೆ ನೀರು ತುಂಬಿಸಿ ಎಂಬ ಕೂಗು ಕೇಳಿಬರುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 170 ಕೆರೆಗಳಿದ್ದು 5230.75 ಎಂಸಿಎಫ್‌ಟಿ ಸಾಮರ್ಥ್ಯ‌ ಹೊಂದಿದ್ದು, 11,812.54 ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಶೇ.30ಕ್ಕಿಂತ ಕಡಿಮೆ: ಜಿಲ್ಲೆಯಲ್ಲಿ ಇರುವ 2738 ಕೆರೆಗಳಲ್ಲಿ 74 ಕೆರೆಗಳು ಶೇ.30ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಶೇ.30ರಿಂದ ಶೇ.50ರ ವರಗೆ 31 ಕೆರೆಗಳಲ್ಲಿ ನೀರಿನ ಸಂಗ್ರಹವಿದೆ. ಪೂರ್ತಿ ತುಂಬದ ಎಂಟು ಕೆರೆಗಳು ಇದ್ದರೆ ನೀರನ್ನೇ ಕಾಣದ 43 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಹಾಸನ ತಾಲೂಕಿನ 35 ಕೆರೆಗಳಲ್ಲಿ ಮೂರು ಕೆರೆಗಳು ಭರ್ತಿಯಾಗಿಯೇ ಇಲ್ಲ. ಬೇಲೂರು ತಾಲೂಕಿನ 38 ಕೆರೆಯಲ್ಲಿ 14, ಅರಸೀಕೆರೆ ತಾಲೂಕಿನ 35 ಕೆರೆಗಳಲ್ಲಿ 8 ಹಾಗೂ ಚನ್ನರಾಯಪಟ್ಟಣ ತಾಲೂಕಿನ 24 ಕೆರೆಗಳಲ್ಲಿ 18 ಕೆರೆಗಳಲ್ಲಿ ಆಗಸ್ಟ್‌ 3ರ ತನಕ ಒಂದಿಂಚು ನೀರು ಸಂಗ್ರಹಣೆಯಾಗಿಲ್ಲ.

ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಾಸನ ವಿಭಾಗದಲ್ಲಿ 897 ಕೆರೆಗಳು ಶೇ.75 ರಷ್ಟು ನೀರು ತುಂಬಿವೆ. ಆಲೂರು ತಾಲೂಕಿನ 782 ಕೆರೆಗಳು ಶೇ.50ರಿಂದ ಶೇ.70 ಪ್ರಮಾಣದಲ್ಲಿ ನೀರು ತುಂಬಿದೆ. ಬೇಲೂರು ತಾಲೂಕಿನ 768 ಕೆರೆಗಳಲ್ಲಿ ಶೇ.50ಕ್ಕಿಂತ ಕಡಿಮೆ, ಅರಕಲಗೂಡು ತಾಲೂಕಿನ 154 ಕೆರೆಗಳು ಶೇ. 20ಕ್ಕಿಂತ ಕಡಿಮೆ ಪ್ರಮಾಣದ ನೀರಿನ ಸಂಗ್ರಹ ಹೊಂದಿದೆ. ಒಂದಿಂಚು ನೀರಿಲ್ಲದ 137 ಕೆರೆಗಳು ಜಿಪಂ ವ್ಯಾಪ್ತಿಯಲ್ಲಿವೆ.

ತೂಬುಗಳೇ ಮಾಯಾ: ನಗರ, ತಾಲೂಕುಗಳು ಅಭಿವೃದ್ಧಿಕಂಡಂತೆ ಕೆರೆಗಳು ಮಾಯವಾಗಿವೆ. ಇದ್ದ ಕೆರೆಯ ಅಚ್ಚುಕಟ್ಟು ಪ್ರದೇಶ ಲೇಔಟ್‌ಗಳಾಗಿ ಪರಿವರ್ತನೆಗೊಂಡಿದೆ. ತೂಬುಗಳು ಮಾಯವಾಗಿದೆ. ಕೆರೆಗೆ ನೀರು ಹರಿದು ಬರುತ್ತಿದ್ದ ಮೂಲ ನಾಶವಾಗಿರುವುದೇ ಕೆರೆ ತುಂಬದಿರಲು ಪ್ರಮುಖ ಕಾರಣವಾಗಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.
----------------
ಕಲ್ಯಾಣಿಗಳ ಮಹತ್ವವನ್ನು ಸಾಂಪ್ರದಾಯಿಕವಾಗಿ, ವೈಜ್ಞಾನಿಕವಾಗಿ ಅರಿತಿರಲಿಲ್ಲ. ಮಳೆ ಇಲ್ಲ, ಕಲ್ಯಾಣಿಗಳಿಂದ ಪ್ರಯೋಜನವಿಲ್ಲ ಎಂದು ಭಾವಿಸಿದ್ದರಿಂದ ನೀರು ಬತ್ತಿಹೋಗಿತ್ತು. ಈಗಿನ ಇಂಗು ಗುಂಡಿಗಳೇ ಹಿಂದಿನ ಕಲ್ಯಾಣಿಗಳು. ಅದೇ ರೀತಿ ಕೆರೆಗಳಲ್ಲಿ ನೀರು ತುಂಬುವುದಿಲ್ಲ ಎಂದು ಒತ್ತುವರಿ ಮಾಡಿದ್ದಾರೆ. ಇದರ ಪರಿಣಾಮವೇ ಕೆರೆಗೆ ನೀರು ಬಾರದಿರಲು ಕಾರಣ.
- ಡಾ.ನಾಗರಾಜ್‌, ಉಪವಿಭಾಗಾಧಿಕಾರಿ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ