ಆ್ಯಪ್ನಗರ

ಹೇಮಾವತಿ ಎಡದಂಡೆ ನಾಲೆ ಅವ್ಯವಹಾರ: ನಾಳೆಯಿಂದ ತನಿಖಾ ತಂಡ ಪರಿಶೀಲನೆ

ಹೇಮಾವತಿ ಎಡದಂಡೆ ನಾಲೆ ಅವ್ಯವಹಾರ ನಾಳೆಯಿಂದ ತನಿಖಾ ತಂಡ ಪರಿಶೀಲನೆ ವಿಕ ಸುದ್ದಿಲೋಕ ಹಾಸನ ಹೇಮಾವತಿ ಎಡದಂಡೆ ಕಾಲುವೆ 0 ಕಿಮೀ ನಿಂದ 73 ಕಿಮೀ...

Vijaya Karnataka 27 May 2018, 5:00 am
ಹಾಸನ: ಹೇಮಾವತಿ ಎಡದಂಡೆ ಕಾಲುವೆ 0 ಕಿ.ಮೀ. ನಿಂದ 73 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು 2 ದಿನದಲ್ಲಿ ತನಿಖಾ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದು ವಕೀಲ ಸುನಿಲ್‌ ಕುಮಾರ್‌ ತಿಳಿಸಿದರು.
Vijaya Karnataka Web hassan hemavati left canel work illigual investigate team visit
ಹೇಮಾವತಿ ಎಡದಂಡೆ ನಾಲೆ ಅವ್ಯವಹಾರ: ನಾಳೆಯಿಂದ ತನಿಖಾ ತಂಡ ಪರಿಶೀಲನೆ


ಎಡದಂಡೆ ಕಾಲುವೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಸರಕಾರದ ಮುಖ್ಯ ಕಾರ್ಯದರ್ಶಿಗಳು ಮೂರು ತಿಂಗಳೊಳಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೇ 28ಕ್ಕೆ ಜಿಲ್ಲೆಗೆ ಆಗಮಿಸಲಿರುವ ವಿಚಕ್ಷ ಣಾದಳದ ಅಧಿಕಾರಿಗಳು ಜೂನ್‌ 2 ರವರೆಗೆ ಲೋಪವಾಗಿರುವ ಕಾಮಗಾರಿಯ ಪರಿಶೀಲನೆ ನಡೆಸಲಿದ್ದಾರೆ. ಹೇಮಾವತಿ ಎಡದಂಡೆ ನಾಲೆಯಿಂದ ಗೊರೂರುವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜೂನ್‌ 28ರಂದು ಬೆಳಗ್ಗೆ 10 ಗಂಟೆಗೆ ಸ್ಥಳಕ್ಕೆ ಆಗಮಿಸುವ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ವಕೀಲರಾದ ಶ್ರೀನಿವಾಸಮೂರ್ತಿ, ಡಿ. ಶಿವಕುಮಾರ್‌, ಕಿರಣ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ