ಆ್ಯಪ್ನಗರ

ಕೃಷಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ 15 ಲಕ್ಷ ರೂ.

ಕೃಷಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ 15 ಲಕ್ಷ ರೂ...

Vijaya Karnataka 21 Jul 2018, 5:00 am
ಹಿರೀಸಾವೆ: ಪ್ರಸಿದ್ಧ ಅಮರಗಿರಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತೆಂಗಿನ ಕಾಯಿ ಸಂತೆ ಪ್ರಾರಂಭಿಸಲು ಕೃಷಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ 15 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು.
Vijaya Karnataka Web hassan hirisave coconut apmc market 15 lakh sanction mla balakrishna
ಕೃಷಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ 15 ಲಕ್ಷ ರೂ.


ನುಗ್ಗೇಹಳ್ಳಿ ಹೋಬಳಿ ಸಂತೆಶಿವರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಜನಸಂಪರ್ಕ ಸಭೆ ಉದ್ಘಾಟಿಸಿದ ನಂತರ ಮಾತನಾಡಿದರು. ರಂಗನಾಥಸ್ವಾಮಿ ಸನ್ನಿಧಿಯಲ್ಲಿ ತೆಂಗಿನ ಕಾಯಿ ಮಾರಾಟ ಸಂತೆ ಪ್ರಾರಂಭಿಸಿದರೆ ಬಾಗೂರು ನುಗ್ಗೇಹಳ್ಳಿ ಹೋಬಳಿ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಕಡುಬಡವರಿಗೆ ಜನತಾ ಮನೆ ನಿರ್ಮಿಸಿಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದ ಅವರು, ಕೊಟ್ಟಿಗೆ, ಕೃಷಿಹೊಂಡ, ಕೃಷಿಬದು ನಿರ್ಮಾಣ ಮಾಡಿಕೊಳ್ಳಲು ಅರ್ಜಿ ನೀಡಿದ ಎಲ್ಲಾ ರೈತರಿಗೆ ಪಕ್ಷಾತೀತವಾಗಿ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಗಂಗೇನಹಳ್ಳಿ ಹೊಸಹಳ್ಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಹಸೀಲ್ದಾರ್‌ ಸೋಮಶೇಖರ್‌, ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್‌.ನಂದಿನಿ, ಎನ್‌.ಆರ್‌.ಐ.ಜಿ.ಸಹಾಯಕ ನಿರ್ದೇಶಕ ಸುದರ್ಶನ್‌, ಉಪ ತಹಸೀಲ್ದಾರ್‌ ತಿಮ್ಮಯ್ಯ, ಕೃಷಿ ಅಧಿಕಾರಿ ಗುರುಸಿದ್ದಪ್ಪ ಬಾದಾಮಿ, ಗ್ರಾ.ಪಂ. ಅಧ್ಯಕ್ಷೆ ಶಮಂತ, ತಾ.ಪಂ.ಸದಸ್ಯ ಅಭಿಲಾಷ್‌, ಪಿಡಿಒ ಹರೀಶ್‌, ಕಾರ್ಯದರ್ಶಿ ಮಲ್ಲೇಶ್‌, ಗ್ರಾ.ಪಂ.ಉಪಾಧ್ಯಕ್ಷ ಶಿವರಾಜ್‌, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್‌, ಕೆಂಪೇಗೌಡ, ಜಯಲಿಂಗೇಗೌಡ, ವಿಜಿಯಮ್ಮ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ