ಆ್ಯಪ್ನಗರ

ಹಿರೀಸಾವೆ: ಇಂದಿನಿಂದ ಕಬ್ಬಳಿ ಜಾತ್ರಾ ಮಹೋತ್ಸವ

ಹಿರೀಸಾವೆ: ಕಬ್ಬಳಿಯಲ್ಲಿ ನ.17 ರಿಂದ 24ರವರೆಗೆ ನಡೆಯುವ ಬಸವೇಶ್ವರಸ್ವಾಮಿ 87ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

Vijaya Karnataka 17 Nov 2018, 5:00 am
ಹಿರೀಸಾವೆ: ಕಬ್ಬಳಿಯಲ್ಲಿ ನ.17 ರಿಂದ 24ರವರೆಗೆ ನಡೆಯುವ ಬಸವೇಶ್ವರಸ್ವಾಮಿ 87ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
Vijaya Karnataka Web hassan hirisave kabbali basaveswara fair festival november 17th
ಹಿರೀಸಾವೆ: ಇಂದಿನಿಂದ ಕಬ್ಬಳಿ ಜಾತ್ರಾ ಮಹೋತ್ಸವ


ಮೂಕಿಕೆರೆ ಗ್ರಾಮದಿಂದ ಕಬ್ಬಳಿ, ಗುಂಗರುಮೆಳೆ ಗೇಟ್‌ವರೆಗೆ ರಸ್ತೆ ಬದಿಯಲ್ಲಿ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಲಾಗಿದೆ. ಟ್ರ್ಯಾಕ್ಟರ್‌ ಮೂಲಕ ರಸ್ತೆ ಬದಿಯುದ್ದಕ್ಕೂ ಮಣ್ಣು ಸುರಿಸಿ ಗುಂಡಿಗಳನ್ನು ಮುಚ್ಚಲಾಗಿದೆ. ಜಲ್ಲಿ ಕಿತ್ತು ಗುಂಡಿ ಬಿದ್ದಿರುವ ಡಾಂಬರ್‌ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ.

ಬಸವೇಶ್ವರಸ್ವಾಮಿ ದೇಗುಲದ ಕಾಂಪೌಂಡ್‌ನ ಹೊರ ಭಾಗದಲ್ಲಿರುವ ಪ್ರದಕ್ಷ ಣೆಯ ರಸ್ತೆಯನ್ನು ರೋಲರ್‌ ಯಂತ್ರದ ಮೂಲಕ ಸಮತಟ್ಟುಗೊಳಿಸಲಾಗಿದೆ. ಸಾವಿರಾರು ಭಕ್ತರು ಒಮ್ಮೆಲೆ ಪ್ರಸಾದ ಸ್ವೀಕರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ದಾಸೋಹಕ್ಕೆ ಸ್ಥಳವಕಾಶ ಮಾಡಲಾಗಿದೆ. ವಾರದಿಂದ ದೇಗುಲದ ಸುತ್ತುಗೋಡೆ ಹಾಗೂ ಕಾಂಪೌಂಡ್‌ಗೆ ಬಣ್ಣ ಬಳಿಯುವ ಕಾರ‍್ಯ ಜರುಗಿದೆ. ಬಸವೇಶ್ವರಸ್ವಾಮಿ ದೇಗುಲ, ಕಾಂಪೌಂಡ್‌, ಹೊರವಲಯದ ರಸ್ತೆ ಬದಿಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ನೂರಾರು ಸ್ವಯಂ ಸೇವಕರನ್ನು ಈಗಾಗಲೇ ಕ್ಷೇತ್ರದಲ್ಲಿ ನಿಯೋಜಿಸಲಾಗಿದೆ. ಕುಡಿಯುವ ನೀರು, ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಿದ್ದು, ಶಾಸಕರಾದ ಸಿ.ಎನ್‌.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ, ಭಾರತ ತೆಂಗು ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿ ರಂಗೇಗೌಡ ಪಾಲ್ಗೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ