ಆ್ಯಪ್ನಗರ

ಹಿರೀಸಾವೆ: ಹಳ್ಳಕ್ಕೆ ಬಿದ್ದ ಕಾರು: ಚಾಲಕ ಸ್ಥಳದಲ್ಲೇ ಸಾವು

ಹಳ್ಳಕ್ಕೆ ಬಿದ್ದ ಕಾರು: ಚಾಲಕ ಸ್ಥಳದಲ್ಲೇ ಸಾವು * ನಾಯಿಗಳ ಹಿಂಡು ಅಡ್ಡ ಬಂದು ನಿಯಂತ್ರಣ ತಪ್ಪಿದ ಕಾರು * ಇಬ್ಬರು ಗಾಯ, ಪ್ರಾಣಾಪಾಯದಿಂದ ಪಾರು ------------ ವಿಕ ...

Vijaya Karnataka 15 Oct 2018, 5:00 am
ಹಿರೀಸಾವೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲೆ ಮೃತಪಟ್ಟ, ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮಾದಿಹಳ್ಳಿ ಗೇಟ್‌ ಭಾನುವಾರ ಬೆಳಗ್ಗೆ ನಡೆದಿದೆ.
Vijaya Karnataka Web hassan hirisave mdihalli national highway 75 car accident driver death two person injure
ಹಿರೀಸಾವೆ: ಹಳ್ಳಕ್ಕೆ ಬಿದ್ದ ಕಾರು: ಚಾಲಕ ಸ್ಥಳದಲ್ಲೇ ಸಾವು


ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕೂಡ್ಲೂರು ಗ್ರಾಮದ ಪ್ರವೀಣ್‌ಕುಮಾರ್‌ (33) ಮೃತರು. ಅಲ್ವಿನ್‌ ಅಂತೋನಿ (33) , ಜಾನ್ಸನ್‌ ಸ್ಟೀಫನ್‌ (22) ಎಂಬುವವರು ಗಾಯಗೊಂಡಿದ್ದಾರೆ.

ಮೃತ ಪ್ರವೀಣ್‌ಕುಮಾರ್‌ ಅವರ ಚಿಕ್ಕಪ್ಪನ ಮಗನ ಮದುವೆಗೆ ಹುಣಸೂರಿಗೆ ತೆರಳಲು ಪತ್ನಿ ರಶ್ಮಿ ಅವರನ್ನು ಕೆರದುಕೊಂಡು ಹೋಗಲು ಚನ್ನರಾಯಪಟ್ಟಣ ತಾಲೂಕಿನ ಅಲ್ಫನ್ಸ್‌ ನಗರಕ್ಕೆ ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ತೆರಳುತ್ತಿದ್ದರು. ಸಂಬಂಧಿಕರಾದ ಹುಣಸೂರು ತಾಲೂಕು ಶಾಂತಿಪುರ ಗ್ರಾಮದ ಅಲ್ವಿನ್‌ ಅಂತೋನಿ ಮತ್ತು ಹೊಳೇನರಸೀಪುರ ತಾಲೂಕು ಅಂತೋನಿ ನಗರದ (ಕುಂಚೇವು) ಜಾನ್ಸನ್‌ ಸ್ಟೀಫನ್‌ ಕಾರಿನಲ್ಲಿದ್ದರು. ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಮಾದಿಹಳ್ಳಿ ಬಳಿ ಕಾರಿಗೆ ನಾಯಿಗಳ ಹಿಂಡು ಅಡ್ಡ ಬಂದಿವೆ. ಇದರಿಂದ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಸಮೀಪದಲ್ಲಿದ್ದ ಹಳ್ಳಕ್ಕೆ ಬಿದ್ದು ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಪ್ರವೀಣ್‌ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ಸನ್‌ ಸ್ಟೀಫನ್‌ಗೆ ತೀವ್ರಗಾಯಗಳಾಗಿವೆ, ಹಿಂಬದಿ ಸೀಟಿನಲ್ಲಿದ್ದ ಅಲ್ವಿನ್‌ ಅಂತೋನಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನಿಂದ ಜಾನ್ಸನ್‌ ಸ್ಟೀಫನ್‌ನನ್ನು ಹಿರೀಸಾವೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹೈವೇ ಆಂಬ್ಯುಲೆನ್ಸ್‌ ವಾಹನದಲ್ಲಿ ಮೃತ ಪ್ರವೀಣ್‌ ಕುಮಾರ್‌ ಶವವನ್ನು ಹಿರೀಸಾವೆ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಅಲ್ವಿನ್‌ ಅಂತೋನಿ ಹಿರೀಸಾವೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ