ಹಿರೀಸಾವೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದು ಚಾಲಕ ಸ್ಥಳದಲ್ಲೆ ಮೃತಪಟ್ಟ, ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮಾದಿಹಳ್ಳಿ ಗೇಟ್ ಭಾನುವಾರ ಬೆಳಗ್ಗೆ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕೂಡ್ಲೂರು ಗ್ರಾಮದ ಪ್ರವೀಣ್ಕುಮಾರ್ (33) ಮೃತರು. ಅಲ್ವಿನ್ ಅಂತೋನಿ (33) , ಜಾನ್ಸನ್ ಸ್ಟೀಫನ್ (22) ಎಂಬುವವರು ಗಾಯಗೊಂಡಿದ್ದಾರೆ.
ಮೃತ ಪ್ರವೀಣ್ಕುಮಾರ್ ಅವರ ಚಿಕ್ಕಪ್ಪನ ಮಗನ ಮದುವೆಗೆ ಹುಣಸೂರಿಗೆ ತೆರಳಲು ಪತ್ನಿ ರಶ್ಮಿ ಅವರನ್ನು ಕೆರದುಕೊಂಡು ಹೋಗಲು ಚನ್ನರಾಯಪಟ್ಟಣ ತಾಲೂಕಿನ ಅಲ್ಫನ್ಸ್ ನಗರಕ್ಕೆ ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ತೆರಳುತ್ತಿದ್ದರು. ಸಂಬಂಧಿಕರಾದ ಹುಣಸೂರು ತಾಲೂಕು ಶಾಂತಿಪುರ ಗ್ರಾಮದ ಅಲ್ವಿನ್ ಅಂತೋನಿ ಮತ್ತು ಹೊಳೇನರಸೀಪುರ ತಾಲೂಕು ಅಂತೋನಿ ನಗರದ (ಕುಂಚೇವು) ಜಾನ್ಸನ್ ಸ್ಟೀಫನ್ ಕಾರಿನಲ್ಲಿದ್ದರು. ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಮಾದಿಹಳ್ಳಿ ಬಳಿ ಕಾರಿಗೆ ನಾಯಿಗಳ ಹಿಂಡು ಅಡ್ಡ ಬಂದಿವೆ. ಇದರಿಂದ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಸಮೀಪದಲ್ಲಿದ್ದ ಹಳ್ಳಕ್ಕೆ ಬಿದ್ದು ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಪ್ರವೀಣ್ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ಸನ್ ಸ್ಟೀಫನ್ಗೆ ತೀವ್ರಗಾಯಗಳಾಗಿವೆ, ಹಿಂಬದಿ ಸೀಟಿನಲ್ಲಿದ್ದ ಅಲ್ವಿನ್ ಅಂತೋನಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನಿಂದ ಜಾನ್ಸನ್ ಸ್ಟೀಫನ್ನನ್ನು ಹಿರೀಸಾವೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹೈವೇ ಆಂಬ್ಯುಲೆನ್ಸ್ ವಾಹನದಲ್ಲಿ ಮೃತ ಪ್ರವೀಣ್ ಕುಮಾರ್ ಶವವನ್ನು ಹಿರೀಸಾವೆ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಅಲ್ವಿನ್ ಅಂತೋನಿ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕೂಡ್ಲೂರು ಗ್ರಾಮದ ಪ್ರವೀಣ್ಕುಮಾರ್ (33) ಮೃತರು. ಅಲ್ವಿನ್ ಅಂತೋನಿ (33) , ಜಾನ್ಸನ್ ಸ್ಟೀಫನ್ (22) ಎಂಬುವವರು ಗಾಯಗೊಂಡಿದ್ದಾರೆ.
ಮೃತ ಪ್ರವೀಣ್ಕುಮಾರ್ ಅವರ ಚಿಕ್ಕಪ್ಪನ ಮಗನ ಮದುವೆಗೆ ಹುಣಸೂರಿಗೆ ತೆರಳಲು ಪತ್ನಿ ರಶ್ಮಿ ಅವರನ್ನು ಕೆರದುಕೊಂಡು ಹೋಗಲು ಚನ್ನರಾಯಪಟ್ಟಣ ತಾಲೂಕಿನ ಅಲ್ಫನ್ಸ್ ನಗರಕ್ಕೆ ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಬೆಂಗಳೂರಿನಿಂದ ತೆರಳುತ್ತಿದ್ದರು. ಸಂಬಂಧಿಕರಾದ ಹುಣಸೂರು ತಾಲೂಕು ಶಾಂತಿಪುರ ಗ್ರಾಮದ ಅಲ್ವಿನ್ ಅಂತೋನಿ ಮತ್ತು ಹೊಳೇನರಸೀಪುರ ತಾಲೂಕು ಅಂತೋನಿ ನಗರದ (ಕುಂಚೇವು) ಜಾನ್ಸನ್ ಸ್ಟೀಫನ್ ಕಾರಿನಲ್ಲಿದ್ದರು. ಬೆಳಗ್ಗೆ 4 ಗಂಟೆ ಸುಮಾರಿನಲ್ಲಿ ಮಾದಿಹಳ್ಳಿ ಬಳಿ ಕಾರಿಗೆ ನಾಯಿಗಳ ಹಿಂಡು ಅಡ್ಡ ಬಂದಿವೆ. ಇದರಿಂದ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆ ಸಮೀಪದಲ್ಲಿದ್ದ ಹಳ್ಳಕ್ಕೆ ಬಿದ್ದು ತೆಂಗಿನ ಮರಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಪ್ರವೀಣ್ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ಸನ್ ಸ್ಟೀಫನ್ಗೆ ತೀವ್ರಗಾಯಗಳಾಗಿವೆ, ಹಿಂಬದಿ ಸೀಟಿನಲ್ಲಿದ್ದ ಅಲ್ವಿನ್ ಅಂತೋನಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳೀಯರ ನೆರವಿನಿಂದ ಜಾನ್ಸನ್ ಸ್ಟೀಫನ್ನನ್ನು ಹಿರೀಸಾವೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹೈವೇ ಆಂಬ್ಯುಲೆನ್ಸ್ ವಾಹನದಲ್ಲಿ ಮೃತ ಪ್ರವೀಣ್ ಕುಮಾರ್ ಶವವನ್ನು ಹಿರೀಸಾವೆ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಅಲ್ವಿನ್ ಅಂತೋನಿ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.