ಆ್ಯಪ್ನಗರ

ಆತ್ಮಸಾಕ್ಷಿಗೆ ತಕ್ಕಂತೆ ನಡೆದರೆ ಅದೇ ಮಾಹಾಪೂಜೆ: ಸಿದ್ದು

ಸಿದ್ದು ಧಿ-ಹಾಡ್ಯ ಗ್ರಾಮದಲ್ಲಿ ಈಶ್ವರ ಮತ್ತು ವೀರಭದ್ರೇಶ್ವರ ದೇವಾಲಯ ಉದ್ಘಾಟನೆ ವಿಕ ಸುದ್ದಿಲೋಕ ಹೊಳೆನರಸೀಪುರ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಅದೇ ಮಾಹಾಪೂಜೆ ...

Vijaya Karnataka 25 Aug 2018, 5:00 am
ಹೊಳೆನರಸೀಪುರ: ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಅದೇ ಮಾಹಾಪೂಜೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Vijaya Karnataka Web hassan holenarasipura haday lord shiva temple inaguration
ಆತ್ಮಸಾಕ್ಷಿಗೆ ತಕ್ಕಂತೆ ನಡೆದರೆ ಅದೇ ಮಾಹಾಪೂಜೆ: ಸಿದ್ದು


ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಹಾಡ್ಯ ಗ್ರಾಮದಲ್ಲಿ ಈಶ್ವರ ಮತ್ತು ವೀರಭದ್ರೇಶ್ವರ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ಜನರ ಆಶೋತ್ತರಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅದರಲ್ಲೂ ರಾಜಕಾರಣದಲ್ಲಿ ಇರಬೇಕೆಂದಿದ್ದರೆ ಜನರೇ ದೇವರು ಎಂದು ನಂಬಿ ನಡೆಯಬೇಕು. ನಿಮ್ಮಗಳ ಆಶೀರ್ವಾದ ಇಲ್ಲ ಅಂದರೆ ವಿಧಾನಸೌಧದ ಮೆಟ್ಟಿಲು ಏರುವುದು ಸಾಧ್ಯವಾಗದು,'' ಎಂದರು.

''ಅನಾದಿಕಾಲದಿಂದ ದೇವರಿಗೆ ಪೂಜೆ ಪುನಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಹಿಂದೆ ಅನನ್ಯ ಭಕ್ತಿ ಇದ್ದವರು ದೇವರನ್ನು ನೋಡಿದ್ದರಂತೆ. ಆದರೆ ನಮ್ಮ ಕಣ್ಣಿಗೆ ಎಂದೂ ಕಾಣಿಸಿಲ್ಲ. ಏಕೆಂದರೆ ನಾವು ಅಷ್ಟರ ಮಟ್ಟಿಗೆ ಭಕ್ತಿಯಿಂದ ಪೂಜಿಸಲು ಶಕ್ತರಲ್ಲ. ದೇವರಿದ್ದಾನೆ, ಆದರೆ ಮುಕ್ಕೋಟಿ ದೇವರು ಇಲ್ಲ. ಇರುವನೊಬ್ಬನೇ, ನಾಮ ಹಲವು. ಭಕ್ತಿ, ನಂಬಿಕೆಗಳಷ್ಟೆ ದೇವರಿಗೆ ಅರ್ಪಣೆ,'' ಎಂದರು.

ಮಾಜಿ ಸಚಿವ ಎ.ಮಂಜು ಮಾತನಾಡಿ, ''ಬಡವರಿಗೆ ಬರಗಾಲದಲ್ಲೂ ಅಕ್ಕಿ ನೀಡಿದ ಸಿಎಂ ಸಿದ್ದರಾಮಯ್ಯ ಬಗ್ಗೆ ಜನರಲ್ಲಿ ಕೃತಜ್ಞತಾ ಮಾತುಗಳಿತ್ತು. ಆದರೆ, ಇಡೀ ರಾಜ್ಯದಲ್ಲೇ ಬಹುತೇಕ ಜನರು ಸುಳ್ಳಿನ ರಾಜಕಾರಣಕ್ಕೆ ಮರುಳಾದರು. ಜನರ ನಂಬಿಕೆಗೆ ತಕ್ಕಂತೆ ನಡೆದ ಸಂತೃಪ್ತಿ ಇದೆ. ಚಿಕ್ಕವನಾಗಿದ್ದಾಗ ಡಿ.ದೇವರಾಜ್‌ ಅರಸ್‌ ಅವರನ್ನು ನೋಡಿದ್ದೆ, ಅವರ ನಂತರ ಅವರ ಗುಣಗಳನ್ನು ಸಿದ್ದರಾಮಯ್ಯರಲ್ಲಿ ನೋಡಿದೆ,''ಎಂದರು.

ಕೆ.ಆರ್‌.ನಗರದ ಕಾಗಿನೆಲೆ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ''ರಾಜಕೀಯದಲ್ಲಿ ನ್ಯಾಯ, ನಿಷ್ಠೆ ಇದ್ದರೆ ರಾಜ್ಯದ ಜನತೆ ಸುಖ, ಶಾಂತಿ , ನೆಮ್ಮದಿಯ ಬದುಕಿನಲ್ಲಿ ಇರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ರಾಜಕಾರಣ ಮಾಡಬೇಕಿದೆ,''ಎಂದರು.

ಟಿ.ಮಾಯಗೌಡನಹಳ್ಳಿ ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯಸ್ವಾಮಿ, ತೇಜೂರಿನ ಶ್ರೀ ಕಲ್ಯಾಣಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್‌ ಮುಖಂಡ ಬಾಗೂರು ಮಂಜೇಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಾವಗಲ್‌ ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಬಾಗೀವಾಳು ಮಂಜುನಾಥ್‌, ಗ್ರಾಪಂ ಅಧ್ಯಕ್ಷೆ ಅವಯ್ಯಮ್ಮ, ಕುರುಬರ ಸಂಘದ ಅಧ್ಯಕ್ಷ ಶಿವರಾಮು, ಬಿಗ್‌ಬಾಸ್‌ ರಿಯಾಲಿಟಿ ಶೋನ ವಿಜೇತ ಪ್ರಥಮ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ