ಆ್ಯಪ್ನಗರ

ಸಾಲಬಾಧೆ: ನಾಲೆಗೆ ಹಾರಿದ ರೈತ ನಾಪತ್ತೆ

ನಾಲೆಗೆ ಹಾರಿದ ರೈತ ನಾಪತ್ತೆ ವಿಕ ಸುದ್ದಿಲೋಕ ಹೊಳೆನರಸೀಪುರ ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನಾಲೆಗೆ ಹಾರಿದ್ದು, ನಾಪತ್ತೆಯಾಗಿದ್ದಾರೆ...

Vijaya Karnataka 27 Oct 2018, 5:00 am
ಹೊಳೆನರಸೀಪುರ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನಾಲೆಗೆ ಹಾರಿದ್ದು, ನಾಪತ್ತೆಯಾಗಿದ್ದಾರೆ. ಸಂಜೆವರೆಗೂ ಶೋಧ ಕಾರ‍್ಯ ನಡೆಸಿದರೂ ಪತ್ತೆಯಾಗಲಿಲ್ಲ.
Vijaya Karnataka Web hassan holenarasipura hallimysore hobli badakyatanahlli former death
ಸಾಲಬಾಧೆ: ನಾಲೆಗೆ ಹಾರಿದ ರೈತ ನಾಪತ್ತೆ


ತಾಲೂಕಿನ ಬಡಕ್ಯಾತನಹಳ್ಳಿ ಗ್ರಾಮದ ಎಂ.ಪಿ.ರಾಜಶೇಖರ್‌(58) ನಾಪತ್ತೆಯಾದವರು.

ಶುಕ್ರವಾರ ಬೆಳಗ್ಗೆ ಸುಮಾರು 5ರ ವೇಳೆಯಲ್ಲಿ ಹೇಮಾವತಿ ಬಲದಂಡೆ ನಾಲೆಗೆ ಹಾರಿದ್ದನ್ನು ಗ್ರಾಮದ ವಿರೂಪಾಕ್ಷ ಎಂಬುವವರು ಗಮನಿಸಿದ್ದು, ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗ್ರಾಮಸ್ಥರು ಶೋಧ ನಡೆಸಿದರೂ ಪತ್ತೆಯಾಗಲಿಲ್ಲ.

''4 ಎಕರೆ ಸ್ವಂತ ಜಮೀನಿದ್ದು, ಬೇರೊಬ್ಬರ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಹೊಗೆಸೊಪ್ಪು, 2 ಎಕರೆಯಲ್ಲಿ ಶುಂಠಿ ಬೆಳೆದಿದ್ದರು. ಮಳೆ ಅತಿಯಾಗಿ ಶುಂಠಿ ಮತ್ತು ಹೊಗೆಸೊಪ್ಪು ಶೀತದಿಂದ ಕೈಕೊಡುವಂತಾಗಿತ್ತು. ಇದರಿಂದ ಬೆಳೆ ನಷ್ಟವಾದಲ್ಲಿ ಸಾಲ ತೀರಿಸುವ ಬಗೆ ಹೇಗೆ ಎಂಬ ಚಿಂತೆಯಲ್ಲಿದ್ದರು. ಹಳ್ಳಿಮೈಸೂರು ಗ್ರಾಮದ ಬ್ಯಾಂಕಿನಲ್ಲಿ 8 ಲಕ್ಷ ರೂ., ಸೋಮನಹಳ್ಳಿ ಬ್ಯಾಂಕಿನಲ್ಲಿ 5 ಲಕ್ಷ ರೂ., ಕೈಸಾಲ ಸೇರಿ ಒಟ್ಟು 20 ಲಕ್ಷ ರೂ. ಸಾಲ ಮಾಡಿದ್ದರು. ಕಳೆದ ವರ್ಷ ಕೃಷಿ ಭೂಮಿಯಲ್ಲಿ 13 ಬೋರ್‌ವೆಲ್‌ ಕೊರೆಸಿದರೂ ಒಂದೆಡೆಯೂ ನೀರು ಲಭ್ಯವಾಗಿರಲಿಲ್ಲ. ಈ ಕಾರಣದಿಂದ ಸಾಲದ ಹೊರೆ ಅಧಿಕವಾಗಿತ್ತು,'' ಎಂದು ಪುತ್ರ ಮಹೇಶ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹಳ್ಳಿ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ