ಆ್ಯಪ್ನಗರ

ಎರಡನೇ ದಿನಕ್ಕೆ ಎಸ್ಸಿ, ಎಸ್ಟಿ ಗುತ್ತಿಗೆದಾರರ ಪ್ರತಿಭಟನೆ

ಎರಡನೇ ದಿನಕ್ಕೆ ಎಸ್ಸಿ, ಎಸ್ಟಿ ಗುತ್ತಿಗೆದಾರರ ಪ್ರತಿಭಟನೆ ವಿಕ ಸುದ್ದಿಲೋಕ ಹೊಳೆನರಸೀಪುರ ಎಸ್ಸಿ, ಎಸ್ಟಿ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಮೀಸಲು ನೀಡಬೇಕು ಎಂದು ...

Vijaya Karnataka 22 Jun 2018, 5:00 am
ಹೊಳೆನರಸೀಪುರ: ಎಸ್ಸಿ, ಎಸ್ಟಿ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಮೀಸಲು ನೀಡಬೇಕು ಎಂದು ಆಗ್ರಹಿಸಿ ಕೈಗೊಂಡಿರುವ ಧರಣಿ ಎರಡನೇ ದಿನವಾದ ಗುರುವಾರವೂ ಮುಂದುವರಿಯಿತು.
Vijaya Karnataka Web st contracters reservation to contracts protest
ಎರಡನೇ ದಿನಕ್ಕೆ ಎಸ್ಸಿ, ಎಸ್ಟಿ ಗುತ್ತಿಗೆದಾರರ ಪ್ರತಿಭಟನೆ


ಪಟ್ಟಣದ ಹೇಮಾವತಿ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆದಾರರು, ತಾಂತ್ರಿಕ ಕಾರಣಗಳಿಂದ ಟೆಂಡರ್‌ ರದ್ದುಗೊಳಿಸಿದೆ ಎಂದು ಹೇಳಿದ್ದ ಹೇಮಾವತಿ ಬಲದಂಡೆ ನಾಲಾ ವಿಭಾಗದ ಎಂಜಿನಿಯರ್‌ ಮೇಲಧಿಕಾರಿಗೆ ಪತ್ರ ಸಹ ಹಾಕಿದ್ದರು. ಇದೇ ಎಂಜಿನಿಯರ್‌ಗಳು ಇತ್ತ ಭರವಸೆ ಮೇರೆಗೆಎಸ್ಸಿ/ಎಸ್ಟಿ ಗುತ್ತಿಗೆದಾರರು ಪ್ರತಿಭಟನೆ ಕೈಬಿಟ್ಟಿದ್ದರು. ನಂತರದಲ್ಲಿ ಟೆಂಡರ್‌ ಯಾವುದೇ ಬದಲಾವಣೆ ಕಾಣದೆ ಆನ್‌ಲೈನ್‌ನಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಪಟ್ಟು ಹಿಡಿದು ಕುಳಿತಿದ್ದಾರೆ.

ಪ್ರತಿಭಟನಾ ನಿರತ ಕೆಡಿಎಸ್‌ಎಸ್‌ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಮಾತನಾಡಿ, ಗೊರೂರು ಹೇಮಾವತಿ ಜಲಾಶಯ ಬಲದಂಡೆ ಮತ್ತು ಶ್ರೀರಾಮದೇವರ ಅಣೆಕಟ್ಟೆಯ ನಾಲೆಗಳಲ್ಲಿ ಹೂಳೆತ್ತುವ ಕಾಮಗಾರಿಗೆ ಟೆಂಡರ್‌ ಕರೆಯಲಾಗಿತ್ತು. ಆದರೆ, ಸರಕಾರದ ಆದೇಶದಂತೆ 50 ಲಕ್ಷ ರೂ.ಅಂದಾಜು ಮೊತ್ತ ಮೀರದ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಶೇ 24.1ರಷ್ಟು ಮೀಸಲಿರಿಸಬೇಕಿತ್ತು. ಆದರೆ, ನೀರಾವರಿ ಇಲಾಖೆ ಎಂಜಿನಿಯರ್‌ಗಳು ಬೇಕೆಂದೆ ಪ್ಯಾಕೇಜ್‌ ಮಾಡಿ 60 ಲಕ್ಷ ಕ್ಕಿಂತ ಹೆಚ್ಚಿನ ಅಂದಾಜು ವೆಚ್ಚದ ಕಾಮಗಾರಿಗಳನ್ನಾಗಿ ಮಾರ್ಪಡಿಸಿದ್ದಾರೆ. ಇದರಲ್ಲಿ ಅನುದಾನ ಮತ್ತು ಕ್ರಿಯಾಯೋಜನೆಯನ್ನು ರಾರ‍ಯಂಡಮ್‌ ಮಾದರಿ ಅನುಸರಿಸಿದಲ್ಲಿ ಗಣಕೀಕೃತವಾಗಿ ಅದೇ ಮೀಸಲಾತಿಯನ್ನು ಶೇಕಡವಾರು ಕಟಾವುಗೊಳಿಸಿ ಉಳಿದದ್ದನ್ನು ವರ್ಗೀಕರಿಸುವ ವ್ಯವಸ್ಥೆ ಇದೆ. ಆದರೆ, ಇವೆಲ್ಲ ನಿಯಮ ಅನುಸರಿಸಿಲ್ಲ. ಬೇಕೆಂದೇ ಎಸ್ಸಿಎಸ್ಟಿ ಗುತ್ತಿಗೆದಾರರನ್ನು ದೂರ ಉಳಿಸಿದ್ದಾರೆ. ಕಳೆದ 4 ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದಾಗ ಎಇಇ ಟೆಂಡರ್‌ ಸರಿಪಡಿಸಿ ಮರು ಪ್ರಕಟಿಸುವುದಾಗಿ ಹೇಳಿದ್ದರು. ಈಗ ಮತ್ತೆ ಅದೇ ರೀತಿ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಒಟ್ಟು 33 ಮಂದಿ ಗುತ್ತಿಗೆದಾರರು ನಿರಶನದಲ್ಲಿ ಪಾಲ್ಗೊಂಡಿದ್ದರು. ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಚಂದ್ರ, ಗೋವಿಂದ, ವೆಂಕಟೇಶ್‌, ಲಕ್ಷ ್ಮಣ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ