ಕಲಾ ತಂಡಗಳ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಬೀದಿ ನಾಟಕ ಕಲಾ ತಂಡ ಪ್ರತಿಭಟನೆ *ಜಾರ್ಖಂಡ್ನಲ್ಲಿ ಕಲಾ ತಂಡದ ಮೇಲೆ ನಡೆದಿರುವ ಹಲ್ಲೆಗೆ ಖಂಡನೆ ------------- ವಿಕ ಸುದ್ದಿಲೋಕ ಹಾಸನ ಜಾರ್ಖಂಡ್ನ ಚೋಚಾಂಗ್ ...
Vijaya Karnataka 29 Jun 2018, 5:00 am
ಹಾಸನ: ಜಾರ್ಖಂಡ್ನ ಚೋಚಾಂಗ್ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವಿರುದ್ಧ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸುತ್ತಿದ್ದ ಕಲಾ ತಂಡದ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆರು ಪುರುಷ ಕಲಾವಿದರ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಐವರು ಮಹಿಳಾ ಕಲಾವಿದರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಪ್ಪಿತಸ್ಥ ದುಷ್ಕರ್ಮಿಗಳಿಗೆ ಶಿಕ್ಷೆ ನೀಡಬೇಕು. ಅನ್ಯಾಯಕ್ಕೊಳಗಾದವರಿಗೆ ಸೂಕ್ತ ರಕ್ಷ ಣೆ ಕಲ್ಪಿಸಬೇಕು. ಪ್ರಚಾರ ಮಾಧ್ಯಮಗಳಲ್ಲಿ ಬೀದಿ ನಾಟಕ ಪ್ರಮುಖವಾಗಿದೆ. ದೇಶದ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತಿಭಟನಾ ರಂಗಭೂಮಿಯಾಗಿ ಬೆಳೆದು ಬಂದ ಇತಿಹಾಸವಿದೆ. ಬೀದಿನಾಟಕ ಜನವಿರೋಧಿ ನೀತಿ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ, ಇಂತಹ ಕಲಾವಿದರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.
ದೇಶದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕ ಕಲಾವಿದರು ಕಳೆದ 35 ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಕೆಲವು ಸಲ ಕನಿಷ್ಠ ಗೌರವಧನ ಇಲ್ಲದೆ ಕೆಲಸ ಮಾಡುತ್ತೇವೆ. ಸರಕಾರದ ವಿವಿಧ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಲು ಕಲಾವಿದರ ಬೀದಿ ನಾಟಕವು ನೆರವಾಗಿದೆ. ಆದರೆ, ಕಲಾವಿದರ ರಕ್ಷ ಣೆಗೆ ಯಾವ ಸರಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಜಾರ್ಖಂಡ್ನ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಬಿ.ಟಿ. ಮಾನವ, ಪಿ. ಚಿನ್ನರಾಯಿ, ಲೋಕೇಶ್, ರಾಜಣ್ಣ ಹಾಗೂ ಇತರು ಹಾಜರಿದ್ದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆರು ಪುರುಷ ಕಲಾವಿದರ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಐವರು ಮಹಿಳಾ ಕಲಾವಿದರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ತಪ್ಪಿತಸ್ಥ ದುಷ್ಕರ್ಮಿಗಳಿಗೆ ಶಿಕ್ಷೆ ನೀಡಬೇಕು. ಅನ್ಯಾಯಕ್ಕೊಳಗಾದವರಿಗೆ ಸೂಕ್ತ ರಕ್ಷ ಣೆ ಕಲ್ಪಿಸಬೇಕು. ಪ್ರಚಾರ ಮಾಧ್ಯಮಗಳಲ್ಲಿ ಬೀದಿ ನಾಟಕ ಪ್ರಮುಖವಾಗಿದೆ. ದೇಶದ ಸ್ವಾತಂತ್ರ್ಯ ಪೂರ್ವದಲ್ಲೇ ಪ್ರತಿಭಟನಾ ರಂಗಭೂಮಿಯಾಗಿ ಬೆಳೆದು ಬಂದ ಇತಿಹಾಸವಿದೆ. ಬೀದಿನಾಟಕ ಜನವಿರೋಧಿ ನೀತಿ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ, ಇಂತಹ ಕಲಾವಿದರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು.
ದೇಶದ ಮೂಲೆ ಮೂಲೆಗಳಲ್ಲಿ ಬೀದಿ ನಾಟಕ ಕಲಾವಿದರು ಕಳೆದ 35 ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಕೆಲವು ಸಲ ಕನಿಷ್ಠ ಗೌರವಧನ ಇಲ್ಲದೆ ಕೆಲಸ ಮಾಡುತ್ತೇವೆ. ಸರಕಾರದ ವಿವಿಧ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಲು ಕಲಾವಿದರ ಬೀದಿ ನಾಟಕವು ನೆರವಾಗಿದೆ. ಆದರೆ, ಕಲಾವಿದರ ರಕ್ಷ ಣೆಗೆ ಯಾವ ಸರಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ. ಜಾರ್ಖಂಡ್ನ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಗ್ಯಾರಂಟಿ ರಾಮಣ್ಣ, ಬಿ.ಟಿ. ಮಾನವ, ಪಿ. ಚಿನ್ನರಾಯಿ, ಲೋಕೇಶ್, ರಾಜಣ್ಣ ಹಾಗೂ ಇತರು ಹಾಜರಿದ್ದರು.