ಆ್ಯಪ್ನಗರ

ಬಾರದ ಕಂಪನಿಗಳು: ನಿರಾಸೆ ಮೂಡಿಸಿದ ಉದ್ಯೋಗಮೇಳ

ಹಾಸನ: ನಿರುದ್ಯೋಗಿಗಳ ಪಾಲಿಗೆ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಬೃಹತ್‌ ಉದ್ಯೋಗ ಮೇಳ ಸಾಕಷ್ಟು ನಿರಾಸೆ ಮೂಡಿಸಿತು.

Vijaya Karnataka 25 Feb 2019, 5:00 am
ಹಾಸನ: ನಿರುದ್ಯೋಗಿಗಳ ಪಾಲಿಗೆ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಸಿದ್ದ ಬೃಹತ್‌ ಉದ್ಯೋಗ ಮೇಳ ಸಾಕಷ್ಟು ನಿರಾಸೆ ಮೂಡಿಸಿತು.
Vijaya Karnataka Web hassan job fair number of companies absent
ಬಾರದ ಕಂಪನಿಗಳು: ನಿರಾಸೆ ಮೂಡಿಸಿದ ಉದ್ಯೋಗಮೇಳ


ಮೇಳದಲ್ಲಿ ಇನ್ಫೋಸಿಸ್‌, ಟಾಟಾ ಕಂಪನಿಯಂತಹ ಪ್ರಸಿದ್ಧ ಕಂಪನಿ ಭಾಗವಹಿಸುತ್ತದೆ ಎಂದು ಆಯೋಜಕರು ತಿಳಿಸಿದ್ದರು. ಸ್ಥಳೀಯ ಕಂಪನಿ ಜತೆಗೆ ಮಾರ್ಕೆಟಿಂಗ್‌ ಸಂಸ್ಥೆಗಳು ಭಾಗವಹಿಸಿ ಸಂದರ್ಶನಕ್ಕೆ ಹಾಜರಾಗಿದ್ದ 4,731 ಅಭ್ಯರ್ಥಿಗಳಲ್ಲಿ 600 ಜನಕ್ಕೆ ಉದ್ಯೋಗ ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ. 900 ಅಭ್ಯರ್ಥಿಗಳಿಗೆ ಅಂತಿಮ ಪ್ರಕ್ರಿಯೆ ನಡೆಯುತ್ತಿದ್ದು ಒಟ್ಟು 1500 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಂತಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಉದ್ಯೋಗ ನೇಮಕ ಆದೇಶ ಪತ್ರವನ್ನು ಪಡೆಯದೆ ಕೆಲವರು ಹೋಗಿರುವುದನ್ನು ಗಮನಿಸಿದರೆ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂಬುದು ಅರ್ಥವಾಗುತ್ತದೆ. ಈ ಸಂಗತಿ ಮನಗಂಡೇ ಏಪ್ರಿಲ್‌,ಮೇ ತಿಂಗಳಲ್ಲಿ ಮತ್ತೊಮ್ಮೆ ಉದ್ಯೋಗ ಮೇಳ ಮಾಡೋಣ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಎರಡು ದಿನದ ಉದ್ಯೋಗಮೇಳವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು. ನೂರಾರು ಕಂಪನಿಗಳು ಭಾಗವಹಿಸುತ್ತವೆ ಎಂದು ಸಚಿವ ರೇವಣ್ಣ ತಿಳಿಸಿದ್ದರು. ಈ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಲಾಗಿತ್ತು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಉಚಿತ ಬಸ್‌ ವ್ಯವಸ್ಥೆ, ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಿಲ್ಲಾ ಕ್ರೀಡಾಂಗಣದಲ್ಲಿ ನೂರಾರು ಮಳಿಗೆ ತೆರೆಯಲಾಗಿತ್ತು.

ಮೊದಲ ದಿನವಾದ ಶನಿವಾರ ಉದ್ಯೋಗದ ಕನಸಿನೊಂದಿಗೆ ಒಂದಿಷ್ಟು ಅಭ್ಯರ್ಥಿಗಳು ಆಗಮಿಸಿದ್ದರು. ಭಾನುವಾರ ಕಂಪನಿಗಳು ಬೆರಳೆಣಿಕೆಯಷ್ಟಿದ್ದರೆ, ಅಭ್ಯರ್ಥಿಗಳು ಅಷ್ಟೇ ನಿರೀಕ್ಷಿತ ಪ್ರಮಾಣದಲ್ಲಿ ಬಾರಲಿಲ್ಲ. ಬಹುನಿರೀಕ್ಷಿತ ಬೃಹತ್‌ ಕಂಪನಿಗಳ ಮೇಳದಲ್ಲಿ ಭಾಗವಹಿಸದೆ ಇರುವುದು ಒಂದು ಕಾರಣವಾದರೆ, ಭಾಗವಹಿಸಿದ್ದ ಸ್ಥಳೀಯ ಹಿಮತ್‌ಸಿಂಗ್‌ ಕಾ ಕಂಪನಿ ಸೇರಿದಂತೆ ಮಾರ್ಕೆಂಟಿಂಗ್‌ ಸಂಸ್ಥೆಗಳು, ಸೆಕ್ಯೂರಿಟಿ ಏಜೆನ್ಸಿಗಳು ಭಾಗವಹಿಸಿದ್ದುದು ಅಲ್ಲದೆ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ ನಿಮಗೆ ಕರೆ ಮಾಡುತ್ತೇವೆ, ತಿಳಿಸುತ್ತೇವೆ ಎಂಬ ಉತ್ತರವೇ ನೀಡಲಾಗುತ್ತಿತ್ತು ಎಂದು ಅಭ್ಯರ್ಥಿಗಳು ದೂರಿದರು.

ನಾಮ್‌ಕೆವಾಸ್ತೆ: ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಹಿಂತಿರುಗಿದ್ದೇನೆ. ಉದ್ಯೋಗಕ್ಕಾಗಿ ಬಂದರೆ 28ರಿಂದ 30 ವರ್ಷದ ಒಳಗಿನದವರಿಗೆ ಮಾತ್ರ ಎನ್ನುತ್ತಾರೆ. ಕಡೆಗೆ ಒಂದು ಕಂಪನಿ ಕೇಳಿದರೆ ಪ್ಲಾಸ್ಟಿಕ್‌ ಡಬ್ಬ ಮನೆ, ಮನೆಗೆ ಹೋಗಿ ಮಾರಾಟ ಮಾಡಬೇಕು ಎಂದು ಹೇಳಿದರೆ ಇದೆಲ್ಲ ಕಣ್ಣೋರೆಸುವ ನಾಟಕ ಎಂದು ಮಾಜಿ ಯೋಧ ಬಸವಾಪಟ್ಟಣ ಸತೀಶ್‌ ಆಕ್ರೋಶ ವ್ಯಕ್ತಪಡಿಸಿದರು.

ಕರೆ ಮಾಡುತ್ತೀವಿ: ಬಿಕಾಂ ವ್ಯಾಸಂಗ ಮಾಡಿದ್ದೇವೆ. ಮೂರು, ನಾಲ್ಕು ಕಡೆ ಹೋಗಿ ವ್ಯಾಸಂಗದ ಮಾಹಿತಿ, ದಾಖಲೆ ನೀಡಿದೆ ಕರೆ ಮಾಡಿ ತಿಳಿಸುತ್ತೇವೆ ಎಂದಷ್ಟೇ ಹೇಳಿದರೂ ಉದ್ಯೋಗ ಸಿಗಲಿಲ್ಲ ಎಂಬುದು ಉದ್ಯೋಗ ಆಕಾಂಕ್ಷಿ ದೀಪಾ ಅಳಲು.

ಎಂಟಲ್ಲ ಹನ್ನೆರಡು: ಸೆಕ್ಯೂರಿಟಿ ಕೆಲಸ ಕೊಡುತ್ತೀವಿ ಎಂದು ಎಂಟು ಗಂಟೆ, ಸಂಬಂಳ ಎಷ್ಟು ಎಂದರೆ ಎಂಟು ಸಾವಿರ, 12 ಗಂಟೆ ಕೆಲಸ ಎನ್ನುತ್ತಾರೆ. ಗದ್ದೆ, ತೋಟದ ಕೆಲಸಕ್ಕೆ ಹೋದರೆ ದಿನಕ್ಕೆ 450ರಿಂದ 500 ಕೊಡುತ್ತಾರೆ. ಇಲ್ಲಿ ನೋಡಿದರೆ ಹೆಚ್ಚು ಕೆಲಸ, ಕಡಿಮೆ ಸಂಬಳ ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಹುಡುಕುತ್ತಾ ಹೋದರೆ ಹೆಜ್ಜೆ, ಹೆಜ್ಜೆಗೂ ಅಪಸ್ವರದ ಮಾತುಕೇಳ ಮೇಳದಲ್ಲಿ ಕೇಳಿ ಬಂತು. ಜಿಲ್ಲಾಡಳಿತ, ಸಚಿವರು ಆಸಕ್ತಿಯಿಂದ ಮೇಳ ಆಯೋಜಿಸಿದ್ದರೂ ಪ್ರಸಿದ್ಧ ಕಂಪನಿಗಳು ಎರಡನೇ ದಿನ ಭಾಗವಹಿಸದಿರುವುದು ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿತು.
----------------
ರಾಜ್ಯದ ನಾನಾ ಜಿಲ್ಲೆಯಲ್ಲಿ ಏಕಕಾಲಕ್ಕೆ ಮೇಳ ನಡೆಯುತ್ತಿರುವ ಕಾರಣ ಕಂಪನಿಗಳು, ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಮೇ ತಿಂಗಳ ಬಳಿಕ ಮತ್ತೊಮ್ಮೆ ಮೇಳ ಮಾಡಲಾಗುವುದು.
-ಎಚ್‌.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವ
----------------
ನಿರೀಕ್ಷಿತ ಮಟ್ಟದಲ್ಲಿ ಕಂಪನಿಗಳು ಬಂದಿಲ್ಲ. ಅಭ್ಯರ್ಥಿಗಳು ಅಷ್ಟೇ. ಇನ್ನು ನಾಲ್ಕೈದು ದಿನ ಮುಂಚೆ ಮೇಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮತ್ತೊಮ್ಮೆ ಸಚಿವರ ಅಣತಿಯಂತೆ ಮೇಳ ಮಾಡುತ್ತೇವೆ.
- ವಿಜಯಲಕ್ಷ್ಮಿ ಉದ್ಯೋಗಾಧಿಕಾರಿ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ