ಆ್ಯಪ್ನಗರ

ಶಾಲೆ ಮುಂಭಾಗ, ಬಸ್‌ನಿಲ್ದಾಣದ ಸನಿಹದಲ್ಲೇ ಕಸದ ರಾಶಿ

ಬಸ್‌ ನಿಲ್ದಾಣ, ರಸ್ತೆಯಲೆಲ್ಲಾ ತ್ಯಾಜ್ಯ *ರಾಮನಾಥಪುರ ರಸ್ತೆಗಳು ದುರ್ನಾತ * ಭಕ್ತರು, ಪ್ರವಾಸಿಗರ ಆಕ್ರೋಶ -------------------------- ವಿಕ ಸುದ್ದಿಲೋಕ ...

Vijaya Karnataka 20 Jul 2018, 5:00 am
ಕೊಣನೂರು: ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ರಾಮನಾಥಪುರ ಗ್ರಾಮದಲ್ಲಿ ಸ್ವಚ್ಛತೆ ಎಂಬುದೇ ಕಾಣದಾಗಿದೆ.
Vijaya Karnataka Web hassan konanuru ramantahapura road side waste problem
ಶಾಲೆ ಮುಂಭಾಗ, ಬಸ್‌ನಿಲ್ದಾಣದ ಸನಿಹದಲ್ಲೇ ಕಸದ ರಾಶಿ


ಬಸ್‌ ನಿಲ್ದಾಣ, ಮುಖ್ಯ ರಸ್ತೆಗಳ ಪಕ್ಕ, ಶಾಲಾ ಕಾಲೇಜುಗಳ ಅಕ್ಕಪಕ್ಕ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದ್ದು ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಳೆಗಾಲ ಆರಂಭವಾಗಿದ್ದು ಸಾರ್ವಜನಿಕರು ರೋಗರುಜಿನಗಳು ಬರುತ್ತವೆ ಎಂಬ ಆತಂಕದ ಸ್ಥಿತಿಯಲ್ಲಿ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶಾಲೆಯ ಮುಂಭಾಗದಲ್ಲಿ ಕಸ ಹಾಕುತ್ತಾರೆ. ಪಂಚಾಯಿತಿಯವರು ಏನೇ ಕ್ರಮ ತೆಗೆದುಕೊಂಡರೂ ಅದನ್ನು ಸಾರ್ವಜನಿಕರು ಪಾಲಿಸಿದಾಗ ಮಾತ್ರ ಗ್ರಾಮ ಶುಚಿಯಾಗಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಬಸ್‌ನಿಲ್ದಾಣದ ಸಮೀಪ, ಶಾಲೆಯ ಎದುರು ಭಾಗದಲ್ಲಿನ ಕಸದ ಡಬ್ಬದೊಳಗಿಂದ ಕಸವನ್ನು ತೆಗೆಯದಿರುವುದರಿಂದ ದುರ್ವಾಸನೆ ಹೊರಹೊಮ್ಮುತ್ತಿದೆ. ಬಸ್‌ಗಾಗಿ ಕಾಯುವ ಪ್ರಯಾಣಿಕರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಕಸವೆಲ್ಲಾ ಕೊಳೆತು ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಪಂಚಾಯಿತಿಯವರು ಡಬ್ಬದೊಳಗಿನ ತ್ಯಾಜ್ಯವನ್ನು ಕೂಡಲೇ ತೆರವು ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
--------------
ಗ್ರಾಮ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರ. ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ರೀತಿ ಅನೈರ್ಮಲ್ಯ ವಾತಾವರಣದಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇದೆ. ಮೊದಲು ಸ್ವಚ್ಛತೆ ಮಾಡಿಸಿ ಪ್ರವಾಸಿ ತಾಣವನ್ನು ಸುಂದರವಾಗಿಡಬೇಕು. ಕಾಪಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.
- ಮೋಹನ್‌ ಕುಮಾರ್‌, ಜಿಲ್ಲಾಧ್ಯಕ್ಷ ಅಂಬೇಡ್ಕರ್‌ ಸೇನೆ
--------
ಎಲ್ಲ ಅಂಗಡಿ ಹಾಗೂ ಕ್ಯಾಂಟೀನ್‌ ಮಾಲೀಕರಿಗೆ ಎಚ್ಚರಿಕೆ ನೀಡಿ ಶುಚಿತ್ವ ಕಾಪಾಡುವಂತೆ ಮನವಿ ಮಾಡಿದ್ದೇವೆ. ಪೌರ ಕಾರ್ಮಿಕರಿಗೆ 4 ತಿಂಗಳಿನಿಂದ ಸರಕಾರ ಸಂಬಳ ನೀಡಿಲ್ಲ ಎಂದು ಧರಣಿ ಆರಂಭಿಸುವುದಾಗಿ ತಿಳಿಸಿದ್ದರ ಹಿನ್ನೆಲೆ ಪಂಚಾಯಿತಿಯಲ್ಲಿ ಸಭೆ ಕರೆದು ಮಾತನಾಡಿ ಅವರ ಸಮಸ್ಯೆ ಬಗೆಹರಿಸಲಾಗಿದೆ. ಪೌರ ಕಾರ್ಮಿಕರಿಗೆ ತಿಳಿಸಿ ಇನ್ನೆರಡು ದಿನಗಳಲ್ಲಿ ರಸ್ತೆ ಬದಿಯ, ಶಾಲೆಯ ಮುಂಭಾಗದ ಕಸಗಳನ್ನು ತೆಗೆಸಿ ಶುಚಿತ್ವ ಕಾಪಾಡುತ್ತೇವೆ.
- ವಿಜಯ್‌ ಕುಮಾರ್‌, ಪಿಡಿಒ ರಾಮನಾಥಪುರ
------------
ಪಂಚಾಯಿತಿಯವರು ಏನೇ ಅಭಿವೃದ್ಧಿ ಕೆಲಸ ಕೈಗೊಂಡರೂ ಅದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಹೀಗಾಗಿ ಸಾರ್ವಜನಿಕರು ಪಂಚಾಯಿತಿಯೊಂದಿಗೆ ಕೈಜೋಡಿಸಿದ್ದಲ್ಲಿ ರಾಮನಾಥಪುರ ಗ್ರಾಮವನ್ನು ಸ್ವಚ್ಛ ಪ್ರವಾಸಿ ತಾಣವನ್ನಾಗಿ ಮಾಡಬಹುದು.
-ಯೋಗೇಶ್‌ ಗ್ರಾಪಂ ಅಧ್ಯಕ್ಷ , ರಾಮನಾಥಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ