ಆ್ಯಪ್ನಗರ

ಚಿರತೆ ದಾಳಿ: 7 ಕುರಿ, 5 ಮೇಕೆ ಬಲಿ

ಹೊಳೆನರಸೀಪುರ/ಮಳವಳ್ಳಿ: ಹೊಳೆನರಸೀಪುರ ಮತ್ತು ಮಳವಳ್ಳಿ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಚಿರತೆ ದಾಳಿಗೆ ಏಳು ಕುರಿಗಳು ಮತ್ತು ಐದು ಮೇಕೆಗಳು ಬಲಿಯಾಗಿವೆ.

Vijaya Karnataka 10 Jan 2019, 5:00 am
ಹೊಳೆನರಸೀಪುರ/ಮಳವಳ್ಳಿ: ಹೊಳೆನರಸೀಪುರ ಮತ್ತು ಮಳವಳ್ಳಿ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಚಿರತೆ ದಾಳಿಗೆ ಏಳು ಕುರಿಗಳು ಮತ್ತು ಐದು ಮೇಕೆಗಳು ಬಲಿಯಾಗಿವೆ.
Vijaya Karnataka Web hassan lepoard attack sheeps death
ಚಿರತೆ ದಾಳಿ: 7 ಕುರಿ, 5 ಮೇಕೆ ಬಲಿ


ಪ್ರಕರಣ 1: ಹೊಳೆನರಸೀಪುರ ತಾಲೂಕಿನ ನಗರ್ತಿ ಗ್ರಾಮದಲ್ಲಿ ಚಿರತೆ ದಾಳಿಗೆ 7 ಕುರಿಗಳು ಮೃತಪಟ್ಟಿದ್ದು, ಮೂರು ಕುರಿಗಳು ತೀವ್ರವಾಗಿ ಗಾಯಗೊಂಡಿದೆ.

ಗ್ರಾಮದ ವೆಂಕಟೇಶ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು, ಮನೆಯ ಹಿತ್ತಲಿನಲ್ಲಿ ಕೂಡಿ ಹಾಕಿದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಈ ಹಿಂದೆಯೂ ಚಿರತೆಯ ಕಾಟಕ್ಕೆ ಕರುವೊಂದು ಬಲಿಯಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ. ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಪ್ರಕರಣ 2: ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಚಿರತೆ ದಾಳಿಗೆ ಐದು ಮೇಕೆಗಳು ಬಲಿಯಾಗಿವೆ.

ಗ್ರಾಮದ ರೈತ ಮಾದೇಶ್‌ಗೆ ಸೇರಿದ ಮೇಕೆಗಳಾಗಿದ್ದು, ಮಂಗಳವಾರ ಎಂದಿನಂತೆ ಮೇಕೆಗಳನ್ನು ಮೇಯಿಸಿ ತಮ್ಮ ಮನೆಯ ಹಿತ್ತಲಲ್ಲಿ ಬಿಟ್ಟಿದ್ದರು. ರಾತ್ರಿ ವೇಳೆ ದಾಳಿ ಮಾಡಿದ ಚಿರತೆ ಐದು ಮೇಕೆಗಳನ್ನು ಕೊಂದು ಕೆಲವು ಭಾಗಗಳನ್ನು ತಿಂದು ಹಾಕಿದೆ.

ಈ ಚಿರತೆಯು ಎರಡು ತಿಂಗಳಿನಿಂದಲೂ ಗ್ರಾಮದ ಸುತ್ತಮುತ್ತ್ತ ಕಾಣಿಸಿಕೊಳ್ಳುತ್ತಿವೆ ಎಂದು ಅರಣ್ಯ ಇಲಾಖೆಗೆ ಎಷ್ಟು ಬಾರಿ ದೂರು ನೀಡಿದರು ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಚಿರತೆ ಸೆರೆಗೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ