ಆ್ಯಪ್ನಗರ

ಅಬಕಾರಿ ಅಕ್ರಮ ತಡೆಗೆ ವಿಶೇಷ ತಂಡ

ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಮಟ್ಟ, ಉಪ ವಿಭಾಗ ಹಾಗೂ ವಲಯ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

Vijaya Karnataka 15 Mar 2019, 5:00 am
ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ ವೇಳೆ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾಮಟ್ಟ, ಉಪ ವಿಭಾಗ ಹಾಗೂ ವಲಯ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
Vijaya Karnataka Web hassan lokasabha election excise squad team
ಅಬಕಾರಿ ಅಕ್ರಮ ತಡೆಗೆ ವಿಶೇಷ ತಂಡ


ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯನ್ನು ದಿನದ 24 ಗಂಟೆಯೂ ಕರ್ತವ್ಯಕ್ಕೆ ನಿಯೋಜಿಸಿ ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಲಾಗಿದೆ.

ಜಿಲ್ಲೆಯಲ್ಲಿ ನಕಲಿ, ಅಕ್ರಮ ಮದ್ಯ, ಕಳ್ಳಭಟ್ಟಿ ತಯಾರಿಕೆ, ದಾಸ್ತಾನು, ಸಾಗಾಟ, ಮಾರಾಟ, ಹಂಚಿಕೆ ಮುಂತಾದವುಗಳನ್ನು ನಿಗ್ರಹಿಸುವ ಕೆಲಸವನ್ನು ಈ ತಂಡಗಳಿಗೆ ವಹಿಸಿದ್ದು, ಅಬಕಾರಿ ಅಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಬರುವ ದೂರು,ಮಾಹಿತಿಯನ್ನು ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟಗಳಲ್ಲಿ ಕಂಟ್ರೋಲ್‌ ರೂಂಗಳನ್ನು ತೆರೆಯಲಾಗಿರುತ್ತದೆ. ಹಾಸನ ತಾಲೂಕು, ಜಿಲ್ಲಾ ಮಟ್ಟದ ಕಂಟ್ರೋಲ್‌ ರೂಂ 08172-268535, ಬೇಲೂರು 08177-223003, ಚನ್ನರಾಯಪಟ್ಟಣ 08176-256084, ಅರಸೀಕೆರೆ 08174-231058, ಅರಕಲಗೂಡು 08175-221924 ಹಾಗೂ ಸಕಲೇಶಪುರ 08173-245963, ಹೊಳೆನರಸೀಪುರ 08175-272329.

ನಕಲಿ, ಅಕ್ರಮ ಮದ್ಯ, ಕಳ್ಳಭಟ್ಟಿ ತಯಾರಿಕೆ, ದಾಸ್ತಾನು, ಸಾಗಾಟ, ಮಾರಾಟ, ಹಂಚಿಕೆ ಮುಂತಾದ ಅಬಕಾರಿ ಅಕ್ರಮಗಳು, ಮಾಹಿತಿಗಳು ಲಭ್ಯವಾದಲ್ಲಿ ಅಬಕಾರಿ ಕಂಟ್ರೋಲ್‌ ರೂಂಗೆ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ