ಆ್ಯಪ್ನಗರ

ಮತಗಟ್ಟೆಗಳ ದುರಸ್ತಿಗೆ ಅನುದಾನ ಬಿಡುಗಡೆ

ಹಾಸನ: ಎಲ್ಲ ಮತಗಟ್ಟೆಗಳನ್ನು ಮತ್ತೊಮ್ಮೆ ಸೂಕ್ಷ ್ಮವಾಗಿ ಪರಿಶೀಲಿಸಿ ಗಾಳಿ, ಬೆಳಕು ರಾರ‍ಯಂಪ್‌, ದೂರವಾಣಿ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇರುವುದನ್ನು ಖಾತರಿ ಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.

Vijaya Karnataka 22 Mar 2019, 5:00 am
ಹಾಸನ: ಎಲ್ಲ ಮತಗಟ್ಟೆಗಳನ್ನು ಮತ್ತೊಮ್ಮೆ ಸೂಕ್ಷ ್ಮವಾಗಿ ಪರಿಶೀಲಿಸಿ ಗಾಳಿ, ಬೆಳಕು ರಾರ‍ಯಂಪ್‌, ದೂರವಾಣಿ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇರುವುದನ್ನು ಖಾತರಿ ಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.
Vijaya Karnataka Web hassan lokasabha election fund relese to election
ಮತಗಟ್ಟೆಗಳ ದುರಸ್ತಿಗೆ ಅನುದಾನ ಬಿಡುಗಡೆ


ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಕ್ತ ,ನ್ಯಾಯಸಮ್ಮತ ಸಲಹೆ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಇತರ ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಾಕಿ ಉಳಿದಿರುವ ನಮೂನೆ 6,7,8, ಅರ್ಜಿಗಳನ್ನು ಇಂದೇ ವಿಲೇವಾರಿ ಮಾಡಿ ವರದಿ ಮಾಡಬೇಕು. ಇದರಲ್ಲಿ ಸಹಾಯಕ ಚುನಾವಣಾಧಿಕಾರಿಗಳದೇ ಸಂಪೂರ್ಣ ಜವಾಬ್ದಾರಿ ಎಂದು ಹೇಳಿದರು.

ಮತಗಟ್ಟೆಗಳಾಗಿರುವ ಶಾಲಾ ಕೊಠಡಿಗಳ ದುರಸ್ತಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದು ಅದನ್ನು ಕೂಡಲೇ ಜಿಪಂ ಎಂಜಿನಿಯರಿಂಗ್‌ ವಿಭಾಗಕ್ಕೆ ವರ್ಗಾಯಿಸುವಂತೆ ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅವರ ಅನುದಾನದಲ್ಲೇ ದುರಸ್ತಿಪಡಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ಪ್ರತಿ ಚುನಾವಣೆಗಳು ಹೊಸದನ್ನು ಕಲಿಸುತ್ತವೆ. ಪ್ರತಿಯೊಬ್ಬರು ಜಾಗೃತರಾಗಿ ಕಾರ‍್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಅಂಚೆ ಮತ ಪತ್ರಗಳ ವಿತರಣೆ, ಕರ್ತವ್ಯ ಪತ್ರಗಳ ವಿತರಣೆ, ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಾಸನ ಲೋಕಸಭಾ ಕ್ಷೇತ್ರ ಬರುವುದರಿಂದ ಅಲ್ಲಿ ಚುನಾವಣಾ ಸಿಬ್ಬಂದಿ ನೇಮಕ, ಅಲ್ಲಿಂದ ಬೇರೆ ಕಡೆ ಕರ್ತವ್ಯಕ್ಕೆ ತೆರಳುವವರಿಗೆ ಅಂಚೆ ಮತಪತ್ರ ನೀಡುವ ಪ್ರಕ್ರಿಯೆ ಕುರಿತು ವಿವರಿಸಿದರು.

ಉಪವಿಭಾಗಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌ ಮಸ್ಟರಿಂಗ್‌ ಡಿ ಮಸ್ಟರಿಂಗ್‌ ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು. ಪ್ರತಿ ಮಸ್ಟರಿಂಗ್‌ ಕೇಂದ್ರದ ಮುಂದೆ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಿ ಅಲ್ಲಿಯೇ ಇಡಿಸಿ ಮತ್ತು ಅಂಚೆ ಮತ ಪತ್ರಗಳನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಚುನಾವಣಾ ಕರ್ತವ್ಯದಲ್ಲಿ ತೊಡಗುವವರಿಗೆ ಸೂಕ್ತ ತರಬೇತಿ ಅಗತ್ಯ ಎಂದು ಹೇಳಿದರು.

ಮಸ್ಟರಿಂಗ್‌ ಕಾರ್ಯ ಅತ್ಯಂತ ವ್ಯವಸ್ಥಿತವಾಗಿ ನಡೆಯಬೇಕು. ಚುನಾವಣಾ ಕರ್ತವ್ಯದಲ್ಲಿ ತೊಡಗುವವರಿಗೆ ತಿಂಡಿ, ಊಟೋಪಚಾರ ವ್ಯವಸ್ಥಿತವಾಗಿರಬೇಕು. ಯಾವುದೇ ಗೊಂದಲಗಳು ಉಂಟಾಗಬಾರದು. ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌ ಸುರಕ್ಷ ತೆ, ಅಣಕು ಮತದಾನ, ವಿದ್ಯುನ್ಮಾನ ಮತಯಂತ್ರಗಳ ಸಮಸ್ಯೆ ಕಂಡು ಬಂದಲ್ಲಿ ಅದನ್ನು ತಕ್ಷ ಣ ಬದಲಾಯಿಸಲು ಮಾಡಿಕೊಳ್ಳಬೇಕಾದ ವ್ಯವಸ್ಥೆ ಬಗ್ಗೆ ವಿವರಿಸಿದರು.

1.61 ಕೋಟಿ ಮದ್ಯ ವಶ: ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಗೌಡ ಅಬಕಾರಿ ದಾಳಿಗಳ ಬಗ್ಗೆ ಮಾಹಿತಿ ನೀಡಿದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಬಕಾರಿ ಅಕ್ರಮಗಳ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ. ಮಾ 10 ರಿಂದ ಈವರೆಗೆ 209 ದಾಳಿಗಳನ್ನು ನಡೆಸಲಾಗಿದ್ದ 1,61,01,894 ರೂ.ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾ.10 ರಿಂದ ಈವರೆಗೆ 70 ಮಂದಿ ವಿರುದ್ಧ ಅಬಕಾರಿ ಹೀನ ಅಪರಾಧ ಕೃತ್ಯಗಳ ಪ್ರಕರಣ ದಾಖಲಿಸಲಾಗಿದೆ. 26,159.75 ಲೀಟರ್‌ ಅಕ್ರಮ ಮಧ್ಯ 872.95 ಲೀಟರ್‌ ಬಿಯರ್‌, 84 ಲೀಟರ್‌ ಕಳ್ಳಬಟ್ಟಿ ವಶಪಡಿಸಿಕೊಳ್ಳಲಾಗಿದೆ. 1 ಪ್ರಕರಣದಲ್ಲಿ ಮದ್ಯ ಮಾರಾಟ ಲೈಸೆನ್ಸ್‌ ಅಮಾನತ್ತುಪಡಿಸಲಾಗಿದೆ. 1 ನಾಲ್ಕು ಚಕ್ರದ ವಾಹನ, 3 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪ್ರಿಯಾಂಗ, ಉಪವಿಭಾಗಾಧಿಕಾರಿ ಡಾ.ಕವಿತಾ ರಾಜಾರಾಂ, ವಿವಿಧ ವಿಧಾನಸಭಾ ಕ್ಷೇತ್ರದ ಎಆರ್‌ಓಗಳು, ಲೆಕ್ಕ ಪತ್ರ ತಂಡದ ಮುಖ್ಯಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ