ಹಾಸನ: ಸಿನಿಮಾ ತಾರೆಯರನ್ನು ಕೇಳಿ ಮತ ಕೊಡುವುದಾಗಿದ್ದರೆ ನಟ ಅಂಬರೀಷ್ ಮೂರು ಬಾರಿ ಏಕೆ ಸೋಲುತ್ತಿದ್ದರು? ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ನೋಡುವ ದೃಷ್ಟಿಕೋನವೇ ಬೇರೆ. ನಟರಿಗೆ ಕೊಡುವ ಗೌರವವೇ ಬೇರೆ. ಹಾಗೆಯೇ ಚುನಾವಣಾ ರಾಜಕಾರಣವೇ ಬೆರೆ. ಯಾರು ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಅವರನ್ನು ಚುನಾಯಿಸುತ್ತಾರೆ ಎಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ, ಯಶ್ಗೆ ಟಾಂಗ್ ನೀಡಿದರು.
ಸುಮಲತಾ ಬಗ್ಗೆ ಹೇಳಿಕೆ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಮಾಧ್ಯಮವೊಂದು ಸುಮಲತಾ ಮಂಡ್ಯ ಗೌಡ್ತಿ ಎಂಬ ಹೆಸರಿನ ಎಫಿಸೋಡ್ ಮಾಡುತ್ತಿತ್ತು. ಈ ಬಗ್ಗೆ ಅವರು ನನ್ನ ಪ್ರತಿಕ್ರಿಯೆ ಕೇಳಿದರು. ಆಗ ನಾನು ಸುಮಲತಾ ನಮ್ಮ ಸೊಸೆ. ಅವರು ನಮ್ಮ ಯಜಮಾನತಿ ಅಲ್ಲ. ಅವರು ಆಂಧ್ಯದಿಂದ ಬಂದವರು. ಇನ್ನು ನಟ ಅಂಬರೀಷ್ ರಾಜಕೀಯ ನನಗೇ ಸಾಕು. ನನ್ನ ಮಗನಿಗೆ ಬೇಡ ಎಂದಿದ್ದರು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೆ. ಸುಮಲತಾ ನಾಯ್ಡು ಎಂಬ ಹೇಳಿಕೆಗೆ ಶಿವರಾಮೇಗೌಡ ಅವರನ್ನೇ ನೀವು ಕೇಳಬೇಕು ಎಂದರು.
ರಾಜ್ಯ ರಾಜಕಾರಣದಲ್ಲಿ ದೇವೇಗೌಡರಿಗೆ ಶಕ್ತಿ ತುಂಬಲು ನಿರ್ಧರಿಸಿದ್ದೇವೆ. ಚುನಾವಣೆಯಲ್ಲಿ ಶಿಕ್ಷ ಕ ಹಾಗೂ ನೌಕರ ಸಮುದಾಯ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ನಂತರ ಶಿಕ್ಷ ಕ ವೃಂದಕ್ಕೆ ಹಲವು ಸೌಲಭ್ಯಗಳನ್ನು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಮುಂದಿದ್ದು ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕರಿಸಲು ನಿರ್ಧರಿಸಿದ್ದೇವೆ ಎಂದರು.
ಸಿಎಂ ಮಂಡಿಸಿದ ಬಜೆಟ್ ಕೇವಲ ಮಂಡ್ಯ- ಹಾಸನ ಜಿಲ್ಲೆಗಳಿಗೆ ಸೇರಿದೆ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದ್ದವರಿಗೆ ಮತ ಕೇಳಲು ಯಾವ ನೈತಿಕತೆ ಇದೆ. ಇಂದು ದೇಶದಲ್ಲಿ ಅಪರೂಪದ ಚುನಾವಣೆ ಎದುರಾಗಿದೆ ಎಂದರು.
ರಾಮಸ್ವಾಮಿ, ಕೃಷ್ಣಗೌಡ, ಬೀರಾದರ್, ನಾರಾಯಣ್ ಹಾಜರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ನೋಡುವ ದೃಷ್ಟಿಕೋನವೇ ಬೇರೆ. ನಟರಿಗೆ ಕೊಡುವ ಗೌರವವೇ ಬೇರೆ. ಹಾಗೆಯೇ ಚುನಾವಣಾ ರಾಜಕಾರಣವೇ ಬೆರೆ. ಯಾರು ಜನರ ಕಷ್ಟಕ್ಕೆ ಸ್ಪಂದಿಸುತ್ತಾರೋ ಅವರನ್ನು ಚುನಾಯಿಸುತ್ತಾರೆ ಎಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ, ಯಶ್ಗೆ ಟಾಂಗ್ ನೀಡಿದರು.
ಸುಮಲತಾ ಬಗ್ಗೆ ಹೇಳಿಕೆ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಮಾಧ್ಯಮವೊಂದು ಸುಮಲತಾ ಮಂಡ್ಯ ಗೌಡ್ತಿ ಎಂಬ ಹೆಸರಿನ ಎಫಿಸೋಡ್ ಮಾಡುತ್ತಿತ್ತು. ಈ ಬಗ್ಗೆ ಅವರು ನನ್ನ ಪ್ರತಿಕ್ರಿಯೆ ಕೇಳಿದರು. ಆಗ ನಾನು ಸುಮಲತಾ ನಮ್ಮ ಸೊಸೆ. ಅವರು ನಮ್ಮ ಯಜಮಾನತಿ ಅಲ್ಲ. ಅವರು ಆಂಧ್ಯದಿಂದ ಬಂದವರು. ಇನ್ನು ನಟ ಅಂಬರೀಷ್ ರಾಜಕೀಯ ನನಗೇ ಸಾಕು. ನನ್ನ ಮಗನಿಗೆ ಬೇಡ ಎಂದಿದ್ದರು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೆ. ಸುಮಲತಾ ನಾಯ್ಡು ಎಂಬ ಹೇಳಿಕೆಗೆ ಶಿವರಾಮೇಗೌಡ ಅವರನ್ನೇ ನೀವು ಕೇಳಬೇಕು ಎಂದರು.
ರಾಜ್ಯ ರಾಜಕಾರಣದಲ್ಲಿ ದೇವೇಗೌಡರಿಗೆ ಶಕ್ತಿ ತುಂಬಲು ನಿರ್ಧರಿಸಿದ್ದೇವೆ. ಚುನಾವಣೆಯಲ್ಲಿ ಶಿಕ್ಷ ಕ ಹಾಗೂ ನೌಕರ ಸಮುದಾಯ ಮೈತ್ರಿ ಅಭ್ಯರ್ಥಿಗೆ ಬೆಂಬಲ ಘೋಷಿಸುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ನಂತರ ಶಿಕ್ಷ ಕ ವೃಂದಕ್ಕೆ ಹಲವು ಸೌಲಭ್ಯಗಳನ್ನು ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನಮ್ಮ ಮುಂದಿದ್ದು ಈ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕರಿಸಲು ನಿರ್ಧರಿಸಿದ್ದೇವೆ ಎಂದರು.
ಸಿಎಂ ಮಂಡಿಸಿದ ಬಜೆಟ್ ಕೇವಲ ಮಂಡ್ಯ- ಹಾಸನ ಜಿಲ್ಲೆಗಳಿಗೆ ಸೇರಿದೆ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದ್ದವರಿಗೆ ಮತ ಕೇಳಲು ಯಾವ ನೈತಿಕತೆ ಇದೆ. ಇಂದು ದೇಶದಲ್ಲಿ ಅಪರೂಪದ ಚುನಾವಣೆ ಎದುರಾಗಿದೆ ಎಂದರು.
ರಾಮಸ್ವಾಮಿ, ಕೃಷ್ಣಗೌಡ, ಬೀರಾದರ್, ನಾರಾಯಣ್ ಹಾಜರಿದ್ದರು.