ಹಾಸನ: ಜಿಲ್ಲೆಯಲ್ಲಿ ಆಲೂ ಬೆಳೆಗಾರರು ಅಂಗಮಾರಿ ರೋಗದಿಂದ ಬೇಸತ್ತಿದ್ದರೆ, ಮತ್ತೊಂದೆಡೆ ಮೆಕ್ಕ್ಕೆಜೋಳ ಬೆಳೆದ ರೈತರು ಕೀಟಬಾಧೆಗೆ ನಲುಗಿದ್ದಾರೆ.
ಜೂನ್ ತಿಂಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಆಲೂ ಬೆಳೆ ಜಿಲ್ಲೆಯ ಹಲವೆಡೆ ರೋಗಕ್ಕೆ ತುತ್ತಾಗಿದೆ. ಹೇಗೋ ಮಳೆ ಜೋಳ ಬೆಳೆದ ರೈತರನ್ನು ಕೈಹಿಡಿಯಿತು ಎಂದು ಖುಷಿಯಲ್ಲಿದ್ದ ಬೆಳೆಗಾರರಿಗೆ ಕಾಂಡಕೊರಕ ಕೀಟ ಬಾಧೆ ಆತಂಕ ಸೃಷ್ಟಿಸಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಮುಂಗಾರಿನಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಮುಂಗಾರಿನಲ್ಲಿ ಸುರಿದ ಮಳೆ ಹರ್ಷವನ್ನುಂಟು ಮಾಡಿತ್ತು. ಇದರಿಂದ ಜೂನ್ ಆರಂಭದಲ್ಲಿ ರೈತರು ಆಲೂ ಬೆಳೆಯನ್ನು ಬಿತ್ತನೆ ಮಾಡಿದ ರೈತರಿಗೆ ಮಳೆರಾಯ ನಿರಾಸೆಯನ್ನುಂಟು ಮಾಡಿದ. ಜೂನ್ ಆರಂಭದಲ್ಲಿ ಸುರಿದ ಅತಿಯಾದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಆಲೂ ಬೆಳೆ ಭೂಮಿಯಲ್ಲಿಯೇ ಕೊಳೆತು ಹೋಯಿತು. ಇದರಿಂದ ಬಿತ್ತನೆ ಮಾಡಿದ ಆಲೂ ಬೆಳೆಯ ಬದಲಾಗಿ ಮೆಕ್ಕೆ ಜೋಳವನ್ನು ಹಾಕಿದ್ದ ರೈತರು, ಬೆಳೆಯನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದರು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಜೋಳಕ್ಕೆ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.
4 ಸಾವಿರ ಹೆಕ್ಟೇರ್ ಕಡಿಮೆ: ರೋಗ ಹತೋಟಿಗೆ ಔಷಧಿ ಸಿಂಪರಣೆಗಾಗಿ ರೈತರು ಮತ್ತಷ್ಟು ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ 79,900 ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬಿತ್ತನೆ ಗುರಿ ಹೊಂದಲಾಗಿತ್ತಾದರೂ ಅಧಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ಕೇವಲ 40,789 ಹೆಕ್ಟೆರ್ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಈ ಅವಧಿಗೆ 45,963 ಹೆಕ್ಟೆರ್ನಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೊಲಿಸಿದರೆ ಶೇ.10 ರಷ್ಟು ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಈಗ ಮಳೆ ಬಿಡುವು ನೀಡಿರುವುದರಿಂದ ಜಮೀನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ಧಗೊಳಿಸಲಾಗುತ್ತಿದೆ. ಆದರೆ, ಕಾಂಡಕೊರಕ ಕೀಟ ಬಿತ್ತನೆಗೆ ಸಿದ್ಧಗೊಂಡಿರುವ ರೈತರಲ್ಲಿ ಆತಂಕ ಮೂಡಿಸಿದೆ.
ಕಾಂಡಕೊರಕ (ಹಸಿರು ಹುಳ) ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಹಸಿರು ಬಣ್ಣದ ಈ ಹುಳು ಆರಂಭದಲ್ಲಿ ಅತಿ ಚಿಕ್ಕದಾಗಿದ್ದು, ಮೆಕ್ಕೆ ಜೋಳದ ಸುಳಿ ತಲುಪಿ ದೇಹಾದಾಢ್ರ್ಯ ವೃದ್ಧಿಸಿಕೊಳ್ಳುತ್ತದೆ. ಒಂದು ಹುಳು ಒಂದೇ ಗಿಡ ನಾಶಪಡಿಸುತ್ತದೆ. ಮತ್ತೊಂದು ಗಿಡವೇರಿ ಎಲೆ ಕಚ್ಚುವಷ್ಟು ಸಾಮರ್ಥ್ಯವನ್ನು ಅದು ಹೊಂದಿಲ್ಲ. ಆದರೆ, ಮೊಟ್ಟೆಯಿಡುವ ಮೂಲಕ ಮತ್ತೊಂದು ಮರಿಗೆ ಜನ್ಮ ನೀಡುವ ವಿಶೇಷತೆ ಹೊಂದಿದೆ. ಆದ್ದರಿಂದ ದಿನವೊಂದಕ್ಕೆ ನೂರಾರು ಹುಳುಗಳು ಹುಟ್ಟುತ್ತವೆ.
ಕಡಿಮೆ ದರಕ್ಕೆ ಲಭ್ಯವಾಗುತ್ತಿದೆ ಎಂಬ ಕಾರಣಕ್ಕೆ ಯೂರಿಯಾ ಗೊಬ್ಬರವನ್ನು ಪ್ರಮಾಣ ಮೀರಿ ಹಾಕುತ್ತಿರುವುದರಿಂದ ಮೆಕ್ಕೆಜೋಳ ಶಕ್ತಿ ಕಳೆದುಕೊಂಡು ಹುಳುಗಳ ಉತ್ಪತ್ತಿಗೆ ನೆರವಾಗಿದೆ. ಗಿಡದ ಬುಡದಲ್ಲಿ ಅಧಿಕ ಮಣ್ಣು ನಿಲ್ಲುತ್ತಿರುವುದು ಹುಳುಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿದೆ. ಇದರಿಂದ ಬೆಳೆಗೆ ಭಾರಿ ಹೊಡೆತ ಬಿದ್ದಿದೆ. ಕಾಂಡಕೊರಕ ಹುಳುಗಳ ಹತೋಟಿಗೆ ಕ್ರಮವಾಗಿ ಕ್ಲೋರೋಫೈರಿಪಾಸ್ ಅಥವಾ ಕ್ವಿನಾಲಾಫಸ್ ಔಷಧಿಗಳನ್ನು ಪ್ರತಿ ಲೀಟರಿಗೆ 2 ಮಿ.ಲೀ.ನಂತೆ ಸುಳಿಗೆ ಸಂಜೆ ವೇಳೆ ಸಿಂಪಡಿಸಬೇಕು. ಔಷಧಿ ಸಿಂಪಡಣೆಗೆ ನೀರಿನ ಕೊರತೆ ಇದ್ದಲ್ಲಿ ರೈತರು ಅತಿ ಸುಲಭವಾಗಿ ಕಾರ್ಬೋಫ್ಯೂರಾನ್ ಕಾಳುಗಳನ್ನು ಕಾಂಡ ಕೊರೆದ ಗಿಡಗಳ ಸುಳಿಗೆ 4-5 ಕಾಳು ಹಾಕಬೇಕು ಎನ್ನುತ್ತಾರೆ ಕೃಷಿ ತಜ್ಞರು.
....
7 ಬ್ಯಾಗ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ಆದರೆ ಹಸಿರುಹುಳ ಬಾಧಿಸಿದ ಪರಿಣಾಮ ಬೆಳೆ ಹದತಪ್ಪಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಔಷಧಿ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಕ್ರಿಮಿನಾಶಕ ಔಷಧಿಗೆ 1,200 ರೂ. ಹಾಗೂ ಕೂಲಿಯವರಿಗೆ ಸಾವಿರ ರೂ. ಖರ್ಚು ಮಾಡಿದರೂ ಏನು ಪ್ರಯೋಜನವಾಗಿಲ್ಲ.
- ಮಂಜುಳಾ, ಅಗಿಲೆ, ರೈತ ಮಹಿಳೆ
....
ಕಾಂಡಕೊರಕ ಕೀಟಬಾಧೆ ಬಗ್ಗೆ ರೈತರು ಆತಂಕಪಡಬೇಕಿಲ್ಲ. ಒಂದು ಬಾರಿ ಔಷಧಿ ಸಿಂಪಡಿಸಿದರೆ ಕೀಟ ಸಂಪೂರ್ಣ ನಾಶ ಹೊಂದುತ್ತದೆ. ಮಳೆ ಅಧಿಕವಾದ ಪರಿಣಾಮ ಬಿತ್ತನೆ ಚಟುವಟಿಕೆ ನಿಧಾನವಾಗಿದ್ದು, ಕೆಲವೆಡೆ ಈಗ ಬಿತ್ತನೆ ಮಾಡಲಾಗುತ್ತಿದೆ.
- ಮೋಹನ್, ಕೃಷಿ ಇಲಾಖೆ ತಾಂತ್ರಿಕ ಸಲಹೆಗಾರ
ಜೂನ್ ತಿಂಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಆಲೂ ಬೆಳೆ ಜಿಲ್ಲೆಯ ಹಲವೆಡೆ ರೋಗಕ್ಕೆ ತುತ್ತಾಗಿದೆ. ಹೇಗೋ ಮಳೆ ಜೋಳ ಬೆಳೆದ ರೈತರನ್ನು ಕೈಹಿಡಿಯಿತು ಎಂದು ಖುಷಿಯಲ್ಲಿದ್ದ ಬೆಳೆಗಾರರಿಗೆ ಕಾಂಡಕೊರಕ ಕೀಟ ಬಾಧೆ ಆತಂಕ ಸೃಷ್ಟಿಸಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಮುಂಗಾರಿನಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಮುಂಗಾರಿನಲ್ಲಿ ಸುರಿದ ಮಳೆ ಹರ್ಷವನ್ನುಂಟು ಮಾಡಿತ್ತು. ಇದರಿಂದ ಜೂನ್ ಆರಂಭದಲ್ಲಿ ರೈತರು ಆಲೂ ಬೆಳೆಯನ್ನು ಬಿತ್ತನೆ ಮಾಡಿದ ರೈತರಿಗೆ ಮಳೆರಾಯ ನಿರಾಸೆಯನ್ನುಂಟು ಮಾಡಿದ. ಜೂನ್ ಆರಂಭದಲ್ಲಿ ಸುರಿದ ಅತಿಯಾದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಆಲೂ ಬೆಳೆ ಭೂಮಿಯಲ್ಲಿಯೇ ಕೊಳೆತು ಹೋಯಿತು. ಇದರಿಂದ ಬಿತ್ತನೆ ಮಾಡಿದ ಆಲೂ ಬೆಳೆಯ ಬದಲಾಗಿ ಮೆಕ್ಕೆ ಜೋಳವನ್ನು ಹಾಕಿದ್ದ ರೈತರು, ಬೆಳೆಯನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದ್ದರು. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಜೋಳಕ್ಕೆ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.
4 ಸಾವಿರ ಹೆಕ್ಟೇರ್ ಕಡಿಮೆ: ರೋಗ ಹತೋಟಿಗೆ ಔಷಧಿ ಸಿಂಪರಣೆಗಾಗಿ ರೈತರು ಮತ್ತಷ್ಟು ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾದ್ಯಂತ 79,900 ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬಿತ್ತನೆ ಗುರಿ ಹೊಂದಲಾಗಿತ್ತಾದರೂ ಅಧಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮ ಕೇವಲ 40,789 ಹೆಕ್ಟೆರ್ನಲ್ಲಿ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಈ ಅವಧಿಗೆ 45,963 ಹೆಕ್ಟೆರ್ನಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೊಲಿಸಿದರೆ ಶೇ.10 ರಷ್ಟು ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಈಗ ಮಳೆ ಬಿಡುವು ನೀಡಿರುವುದರಿಂದ ಜಮೀನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ಧಗೊಳಿಸಲಾಗುತ್ತಿದೆ. ಆದರೆ, ಕಾಂಡಕೊರಕ ಕೀಟ ಬಿತ್ತನೆಗೆ ಸಿದ್ಧಗೊಂಡಿರುವ ರೈತರಲ್ಲಿ ಆತಂಕ ಮೂಡಿಸಿದೆ.
ಕಾಂಡಕೊರಕ (ಹಸಿರು ಹುಳ) ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಹಸಿರು ಬಣ್ಣದ ಈ ಹುಳು ಆರಂಭದಲ್ಲಿ ಅತಿ ಚಿಕ್ಕದಾಗಿದ್ದು, ಮೆಕ್ಕೆ ಜೋಳದ ಸುಳಿ ತಲುಪಿ ದೇಹಾದಾಢ್ರ್ಯ ವೃದ್ಧಿಸಿಕೊಳ್ಳುತ್ತದೆ. ಒಂದು ಹುಳು ಒಂದೇ ಗಿಡ ನಾಶಪಡಿಸುತ್ತದೆ. ಮತ್ತೊಂದು ಗಿಡವೇರಿ ಎಲೆ ಕಚ್ಚುವಷ್ಟು ಸಾಮರ್ಥ್ಯವನ್ನು ಅದು ಹೊಂದಿಲ್ಲ. ಆದರೆ, ಮೊಟ್ಟೆಯಿಡುವ ಮೂಲಕ ಮತ್ತೊಂದು ಮರಿಗೆ ಜನ್ಮ ನೀಡುವ ವಿಶೇಷತೆ ಹೊಂದಿದೆ. ಆದ್ದರಿಂದ ದಿನವೊಂದಕ್ಕೆ ನೂರಾರು ಹುಳುಗಳು ಹುಟ್ಟುತ್ತವೆ.
ಕಡಿಮೆ ದರಕ್ಕೆ ಲಭ್ಯವಾಗುತ್ತಿದೆ ಎಂಬ ಕಾರಣಕ್ಕೆ ಯೂರಿಯಾ ಗೊಬ್ಬರವನ್ನು ಪ್ರಮಾಣ ಮೀರಿ ಹಾಕುತ್ತಿರುವುದರಿಂದ ಮೆಕ್ಕೆಜೋಳ ಶಕ್ತಿ ಕಳೆದುಕೊಂಡು ಹುಳುಗಳ ಉತ್ಪತ್ತಿಗೆ ನೆರವಾಗಿದೆ. ಗಿಡದ ಬುಡದಲ್ಲಿ ಅಧಿಕ ಮಣ್ಣು ನಿಲ್ಲುತ್ತಿರುವುದು ಹುಳುಗಳ ಸಂತಾನೋತ್ಪತ್ತಿಗೆ ಅನುಕೂಲವಾಗಿದೆ. ಇದರಿಂದ ಬೆಳೆಗೆ ಭಾರಿ ಹೊಡೆತ ಬಿದ್ದಿದೆ. ಕಾಂಡಕೊರಕ ಹುಳುಗಳ ಹತೋಟಿಗೆ ಕ್ರಮವಾಗಿ ಕ್ಲೋರೋಫೈರಿಪಾಸ್ ಅಥವಾ ಕ್ವಿನಾಲಾಫಸ್ ಔಷಧಿಗಳನ್ನು ಪ್ರತಿ ಲೀಟರಿಗೆ 2 ಮಿ.ಲೀ.ನಂತೆ ಸುಳಿಗೆ ಸಂಜೆ ವೇಳೆ ಸಿಂಪಡಿಸಬೇಕು. ಔಷಧಿ ಸಿಂಪಡಣೆಗೆ ನೀರಿನ ಕೊರತೆ ಇದ್ದಲ್ಲಿ ರೈತರು ಅತಿ ಸುಲಭವಾಗಿ ಕಾರ್ಬೋಫ್ಯೂರಾನ್ ಕಾಳುಗಳನ್ನು ಕಾಂಡ ಕೊರೆದ ಗಿಡಗಳ ಸುಳಿಗೆ 4-5 ಕಾಳು ಹಾಕಬೇಕು ಎನ್ನುತ್ತಾರೆ ಕೃಷಿ ತಜ್ಞರು.
....
7 ಬ್ಯಾಗ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆವು. ಆದರೆ ಹಸಿರುಹುಳ ಬಾಧಿಸಿದ ಪರಿಣಾಮ ಬೆಳೆ ಹದತಪ್ಪಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಔಷಧಿ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಕ್ರಿಮಿನಾಶಕ ಔಷಧಿಗೆ 1,200 ರೂ. ಹಾಗೂ ಕೂಲಿಯವರಿಗೆ ಸಾವಿರ ರೂ. ಖರ್ಚು ಮಾಡಿದರೂ ಏನು ಪ್ರಯೋಜನವಾಗಿಲ್ಲ.
- ಮಂಜುಳಾ, ಅಗಿಲೆ, ರೈತ ಮಹಿಳೆ
....
ಕಾಂಡಕೊರಕ ಕೀಟಬಾಧೆ ಬಗ್ಗೆ ರೈತರು ಆತಂಕಪಡಬೇಕಿಲ್ಲ. ಒಂದು ಬಾರಿ ಔಷಧಿ ಸಿಂಪಡಿಸಿದರೆ ಕೀಟ ಸಂಪೂರ್ಣ ನಾಶ ಹೊಂದುತ್ತದೆ. ಮಳೆ ಅಧಿಕವಾದ ಪರಿಣಾಮ ಬಿತ್ತನೆ ಚಟುವಟಿಕೆ ನಿಧಾನವಾಗಿದ್ದು, ಕೆಲವೆಡೆ ಈಗ ಬಿತ್ತನೆ ಮಾಡಲಾಗುತ್ತಿದೆ.
- ಮೋಹನ್, ಕೃಷಿ ಇಲಾಖೆ ತಾಂತ್ರಿಕ ಸಲಹೆಗಾರ