ಆ್ಯಪ್ನಗರ

ರೆಸಾರ್ಟ್‌ಗೆ ನಿತ್ಯ 4.50 ಕೋಟಿ ಕೊಡ್ತಿರೋರು ಯಾರು?

ಹಾಸನ: ಆಪರೇಷನ್‌ ಕಮಲ, ರೆಸಾರ್ಟ್‌ಯಾತ್ರೆ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ. ಆರು ತಿಂಗಳಿಂದ ಇಂತಹ ಪ್ರಯತ್ನ ಮಾಡುತ್ತಲೇ ಇದೆ. ದೇವರು ಎಂಬುವವನು ಒಬ್ಬನಿದ್ದಾನೆ. ಅದಕ್ಕೆಲ್ಲ ಉತ್ತರ ಕೊಡುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 17 Jan 2019, 5:00 am
ಹಾಸನ: ಆಪರೇಷನ್‌ ಕಮಲ, ರೆಸಾರ್ಟ್‌ಯಾತ್ರೆ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ. ಆರು ತಿಂಗಳಿಂದ ಇಂತಹ ಪ್ರಯತ್ನ ಮಾಡುತ್ತಲೇ ಇದೆ. ದೇವರು ಎಂಬುವವನು ಒಬ್ಬನಿದ್ದಾನೆ. ಅದಕ್ಕೆಲ್ಲ ಉತ್ತರ ಕೊಡುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web hassan minister hd revanna allegation operation kamala
ರೆಸಾರ್ಟ್‌ಗೆ ನಿತ್ಯ 4.50 ಕೋಟಿ ಕೊಡ್ತಿರೋರು ಯಾರು?


ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಐಷಾರಾಮಿ ಹೋಟೆಲ್‌ಗೆ ಹೋಗಿ ಕುಳಿತಿರುವುದಕ್ಕೆ ನಿತ್ಯ 4.50 ಕೋಟಿ ರೂ.ಪಾವತಿಸಬೇಕು. ಆ ಹಣ ಕೊಡುತ್ತಿರುವವರು ಯಾರು. ಅದನ್ನೇ ಬರದ ತಾಲೂಕಿಗೆ ಬಳಸಲು ಆಗುತ್ತಿರಲಿಲ್ಲವೇ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನರ ಹಿತ ಕಾಯುವ ಕೆಲಸ ಮಾಡುವುದನ್ನು ಬಿಟ್ಟು ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುತ್ತಿದ್ದಾರೆ. ಜನತೆಯೇ ಅವರಿಗೆ ಬುದ್ಧಿ ಕಲಿಸುತ್ತಾರೆ. ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ ಯೋಜನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಇದ್ದಾರೆಯೇ? ಬರದ ಬಗ್ಗೆ ಬಿಜೆಪಿ ಮುಖಂಡರು ಪ್ರವಾಸ ಮಾಡಿದರಲ್ಲಾ ಏನೇನಾಗಿದೆ ಎಂದು ತಿಳಿಸಬಾರದೆ? ಇದೇ ರೀತಿ ಆದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 40 ಸೀಟು ಗೆಲ್ಲಲ್ಲ ಎಂದರು.

ಪಿಕ್‌ನಿಕ್‌: ಪ್ರಥಮ ಬಾರಿ ಶಾಸಕರಾದವರನ್ನು ಬಿಜೆಪಿಯವರು ಪಿಕ್‌ನಿಕ್‌ ಕರೆದುಕೊಂಡು ಹೋಗಿ ದಿಲ್ಲಿ, ಬಾಂಬೆ, ಹರಿಯಾಣ ನೋಡಿ ಎಂದು ತೋರಿಸುತ್ತಿದ್ದಾರೆ. ಹಿಂದೆಲ್ಲ ನಮ್‌ಕಡೆ ಬಾಂಬೆ ಮಿಟಾಯಿ ಮಾರಲು ಬಂದವರು ಡಬ್ಬದಲ್ಲಿ ತೋರಿಸುತ್ತಿದ್ದರು. ಬಿಜೆಪಿಯವರು ಕರೆದುಕೊಂಡು ಹೋಗಿ ತೋರಿಸುತ್ತಿದ್ದಾರೆ. ಇದರಿಂದ ಯಾವ ಪ್ರಯೋಜನ ಕೂಡ ಆಗಲ್ಲ ಎಂದರು.

ಕಾಂಗ್ರೆಸ್‌ನವರು ಯಾರು ಹೋಗಲ್ಲ, ಅದೇನಿದ್ದರೂ, ಆ ಪಕ್ಷದ ಮುಖಂಡರಾದ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ದಿನೇಶ್‌ಗುಂಡುರಾವ್‌ ನೋಡಿಕೊಳ್ಳುತ್ತಾರೆ. ಶಾಸಕರಿಗೆ ಟಿಫ್ಸ್‌ ಕೊಡುತ್ತಾರಂತೆ ಎಂಬುದೆಲ್ಲ ತನಗೆ ಗೊತ್ತಿಲ್ಲ. ನಮ್ಮ ಶಾಸಕರು ಯಾರೂ ಪಕ್ಷಬಿಟ್ಟು ಹೋಗಲ್ಲ. ನಾನಂತೂ ಕೂಲ್‌ ಆಗಿದ್ದೇನೆ. ಸರಕಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

60 ಕೋಟಿ ಆಮಿಷ: ತುಮಕೂರು ಶಾಸಕ ಗೌರಿಶಂಕರ್‌ಗೆ 60 ಕೋಟಿ, ಸಚಿವ ಸ್ಥಾನ ನೀಡುವುದಾಗಿ ಸ್ವತಃ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಕರೆ ಮಾಡಿದ್ದರು ಎಂಬ ಮಾಹಿತಿ ಇದೆ. ಗೌರಿಶಂಕರ್‌ಗೆ ನಾನು ಕರೆ ಮಾಡಿದ್ದಾಗ ಈ ವಿಷಯ ತಿಳಿಸಿದರು. 60 ಅಲ್ಲ 600 ಕೋಟಿ ಕೊಟ್ಟರೂ ನಾನು ಹೋಗಲ್ಲ ಎಂದು ಹೇಳಿದರು. ಯಾವ ಶಾಸಕರು ಹೋಗಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್‌.ಲಿಂಗೇಶ್‌ ಮಾತನಾಡಿ, ಹರಿಹರ ಬ್ರಹ್ಮ ಬಂದರೂ ಜೆಡಿಎಸ್‌ ಹಾಗೂ ದೇವೇಗೌಡರ ಕುಟುಂಬವನ್ನು ಬಿಟ್ಟು ಎಲ್ಲಿಗೂ ಹೋಗಲ್ಲ, ನಮಗೆ ಯಾರು ಕರೆ ಮಾಡಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ