ಆ್ಯಪ್ನಗರ

ರೇವಣ್ಣ ಹಾಸನಗೆ ಬಂದು ಸ್ಪರ್ಧಿಸಿದ್ರೂ ನಾನು 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ, 1 ವೋಟ್‌ ಕಡಿಮೆ ಆದ್ರೂ ರೀ ಎಲೆಕ್ಸನ್‌: ಪ್ರೀತಂ ಗೌಡ

ಅಧಿಕಾರಿಗಳನ್ನ ಹೆದುರಿಸೋದು, ಡಿಸಿಗೆ ಎಕವಚನದಲ್ಲಿ‌ ಮಾತಾಡೋದು. ಏಳು ಕ್ಲಾಸ್ , ಹತ್ತನೇ ಕ್ಲಾಸ್ ಓದಿದ್ರೆ ಇದೇ ಸಮಸ್ಯೆ. ಯಾಕೆಂದ್ರೆ ಓದೋದ್ರಲ್ಲ ಏನ್ ಕಷ್ಟ ಇರುತ್ತೆ ಅಂತಾ ಗೊತ್ತಿರಲ್ಲ‌ ಎಂದು ರೇವಣ್ಣಂಗೆ ಟಾಂಗ್‌ ಕೊಟ್ಟರು ಪ್ರೀತಂ ಗೌಡ,

Vijaya Karnataka Web 30 Apr 2022, 3:00 pm
ಹಾಸನ: ಹಾಸನ ಜನ ಮೇಲೆ ನನಗೆ ವಿಶ್ವಾಸವಿದೆ. ಎಚ್‌ಡಿ ರೇವಣ್ಣ ಇಲ್ಲಿ ಬಂದು ನಿಂತ್ರೂ 50,000 ಲೀಡ್‌ನಲ್ಲಿ ಗೆಲ್ತೇನೆ. ಇವತ್ತೇ ಹೇಳ್ತೀನಿ ಬರ್ಕೊಳಿ . ಮೇ 2023 ಕ್ಕೆ ರಿಸಲ್ಟ್ ಬರುತ್ತೆ. ಲೀಡ್ ನಲ್ಲಿ 50000 ಕ್ಕಿಂತ ಒಂದ್ ವೋಟ್ ಕಡಿಮೆ ಬಂದ್ರೆ ಅವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ರೀ ಎಲೆಕ್ಷನ್ ಗೆ ಹೋಗ್ತೇನೆ ಎಂದು ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.
Vijaya Karnataka Web ಪ್ರೀತಂ ಗೌಡ
ಪ್ರೀತಂ ಗೌಡ


ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂ ಗೌಡ ಜೆಡಿಎಸ್‌ ದಳಪತಿ ಎಚ್‌ಡಿ ರೇವಣ್ಣಗೆ ಸವಾಲು ಹಾಕಿದರು.

ಹಾಸನ: ವ್ಯವಸ್ಥೆಗೆ ಸವಾಲು ಹಾಕೋ ರೇವಣ್ಣಂಗೆ ಸರಕಾರವೇ ಉತ್ತರ ಕೊಡುತ್ತೆ ಎಂದ ಪ್ರೀತಂ ಗೌಡ

ಬಡ್ಡಿ ಸಮೇತ ತೀರಿಸ್ತೇನೆ ಎಂದು ರೇವಣ್ಣ ಹೇಳಿದ್ದಾರೆ. ಬಡ್ಡಿ ಅಲ್ಲ, ಅಸಲು ಎಲ್ಲಿದೆ ಅಂತಾ ಹುಡುಕಿಕೊಂಡು ಬರೋದಕ್ಕೆ ಹೇಳಿ. ಚುನಾವಣೆ ನಿಲ್ತಿನಿ ಅಂತಾ ಹೇಳಿಬಿಡ್ಲಿ ನೋಡೋಣ. ಅಸಲು ಬಡ್ಡಿ ಯಾರ್ ಕೊಡ್ತಾರೆ ಯಾರ್ ತೀರಿಸ್ತಾರೆ ಅಂತಾ ಅಮೇಲೆ ಮಾತಾಡೋಣ ಎಂದರು.

ಅವರು ಬಂದು ನಿಂತು ಎರಡನ ಸ್ಥಾನಕ್ಕೆ ಬರೋದಕ್ಕೆ ಹೇಳಿ. ಕಾಂಗ್ರೆಸ್‌ಗಿಂತ ಹಿಂದಿನ ಪ್ಲೇಸ್‌ಗೆ ಹೋಗ್ತಾರೆ. ರೇವಣ್ಣಗೆ ಮೂರು ನಾಮನೇ ಗ್ಯಾರಂಟಿ. ರೇವಣ್ಣ ಬಂದು‌ ನಿಲ್ಲಬೇಕು ಬೇರೆ ಅಭ್ಯರ್ಥಿ‌ವಿಚಾರ ಹೇಳ್ತಿಲ್ಲ. ರೇವಣ್ಣಗೆ ಇದು ಚಾಲೆಂಜ್ ಎಂದು ಪ್ರೀತಂ ಗೌಡ ತಿಳಿಸಿದರು.

49,999 ಮುನ್ನಡೆ ಬಂದ್ರೂ ರಿಸೈನ್ ಮಾಡಿ ರೀ ಎಲೆಕ್ಷನ್‌ಗೆ ಹೋಗ್ತೇನೆ. ತಾಕತ್ ಇದ್ರೆ ಬಂದು‌ ನಿಲ್ಲೋದಕ್ಕೆ ಹೇಳಿ. ಇಲ್ಲವಾದ್ರೆ ಗೌರವದಿಂದ ಹೊಳೆನರಸೀಪುರ ಕ್ಷೇತ್ರದ ಕೆಲಸ ನೋಡ್ಕೊಂಡು ಇರೋದಕ್ಕೆ ಹೇಳಿ. ಇದೇನು ಹುಡುಗಾಟನ ಇದು, ಜನರಿಗೆ ಎಂಟರ್ ಟೈನ್ ಮೆಂಟ್ ಕೊಡೋದಕ್ಕೆ. ಗೌರವ ಇದೆ. ಅದನ್ನು ಉಳಿಸಿಕೊಳ್ಳಿ ಎಂದು ಹೇಳಿದರು.

ಗ್ರಾಮ ಪಂಚಾಯತ್ ಮೆಂಬರ್‌ಗಳೇ ಇವರಿಗಿಂತ ಹೆಚ್ಚು ತೂಕವಾಗಿ ನಡೆದುಕೊಳ್ತಾರೆ. ಸುಮ್ಮನೆ ಜನ ಕೇಳ್ತಾರೆ ಅಂತಾ ಅಧಿಕಾರಿಗಳನ್ನ ಹೆದುರಿಸೋದು, ಡಿಸಿಗೆ ಎಕವಚನದಲ್ಲಿ‌ ಮಾತಾಡೋದು. ಏಳು ಕ್ಲಾಸ್ , ಹತ್ತನೇ ಕ್ಲಾಸ್ ಓದಿದ್ರೆ ಇದೇ ಸಮಸ್ಯೆ. ಯಾಕೆಂದ್ರೆ ಓದೋದ್ರಲ್ಲ ಏನ್ ಕಷ್ಟ ಇರುತ್ತೆ ಅಂತಾ ಗೊತ್ತಿರಲ್ಲ‌ ಎಂದು ರೇವಣ್ಣಂಗೆ ಟಾಂಗ್‌ ಕೊಟ್ಟರು ಪ್ರೀತಂ ಗೌಡ.

ಸಿದ್ದರಾಮಯ್ಯ ಬೆಂಬಲವಿಲ್ಲದಿದ್ದರೆ ಎಚ್‌ಡಿಕೆ ಸಿಎಂ, ಪ್ರಜ್ವಲ್‌ ರೇವಣ್ಣ ಎಂಪಿ ಆಗ್ತಿರಲಿಲ್ಲ: ಎಂಎ ಗೋಪಾಲಸ್ವಾಮಿ

ಒಬ್ಬ ಐಎಎಸ್‌ ಅಧಿಕಾರಿ, ಒಬ್ಬ ಗವರ್ನಮೆಂಟ್ ಅಧಿಕಾರಿ‌ ಆಗಬೇಕಂದ್ರೆ ಅದ್ರಲ್ಲಿರೋ ಕಷ್ಟ ಏನು ಅಂತಾ ಇವರಿಗೇನು ಗೊತ್ತು. ಅದೇನು ಗೊತ್ತಿಲ್ಲದೇ ಇರೋದಕ್ಕೆ ದನದ ಡಾಕ್ಟರ್ ಅವರು ಇವರು ಅಂತಾ ಬೈಯ್ಯೋದು ಎಂದು ರೇವಣ್ಣ ವಿರುದ್ಧ ಪ್ರೀತಂಗೌಡ ಹಿಗ್ಗಾಮುಗ್ಗಾ ವಾಗ್ದಾಳಿ‌ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ