ಆ್ಯಪ್ನಗರ

ಮೊಬೈಲ್‌ ಅಂಗಡಿ ಕಳವು: ಆರೋಪಿ ಸೆರೆ

ಹಾಸನ: ಚಲನಚಿತ್ರವೊಂದರಿಂದ ಪ್ರೇರಿತನಾಗಿ ಶಾಂತಿಗ್ರಾಮದ ಮೂರು ಮೊಬೈಲ್‌ ಅಂಗಡಿಯಲ್ಲಿ 2 ಲಕ್ಷ ರೂ.ಬೆಲೆಯ ಮೊಬೈಲ್‌ ಕಳವು ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದ ಬೆಂಗಳೂರಿನ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Vijaya Karnataka 3 Feb 2019, 5:00 am
ಹಾಸನ: ಚಲನಚಿತ್ರವೊಂದರಿಂದ ಪ್ರೇರಿತನಾಗಿ ಶಾಂತಿಗ್ರಾಮದ ಮೂರು ಮೊಬೈಲ್‌ ಅಂಗಡಿಯಲ್ಲಿ 2 ಲಕ್ಷ ರೂ.ಬೆಲೆಯ ಮೊಬೈಲ್‌ ಕಳವು ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದ ಬೆಂಗಳೂರಿನ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
Vijaya Karnataka Web hassan moblie shop theft student arrest
ಮೊಬೈಲ್‌ ಅಂಗಡಿ ಕಳವು: ಆರೋಪಿ ಸೆರೆ


ಗಣೇಶ(18) ಬಂಧಿತ. ಈತನೊಂದಿಗೆ ಸಹಕರಿಸಿದ ಅಪ್ರಾಪ್ತನನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಗಳೂರು ಕಾಕ್ಸ್‌ಟೌನ್‌ ಜೀವನಹಳ್ಳಿಯ ಗಣೇಶ್‌ಗೆ ಮೋಜಿಗಾಗಿ ಹಣಬೇಕಿತ್ತು. ಒಮ್ಮೆ ತನ್ನ ಚಿಕ್ಕಮ್ಮನ ಮನೆ ಶಾಂತಿಗ್ರಾಮಕ್ಕೆ ಬಂದಿದ್ದ ವೇಳೆ ಮೊಬೈಲ್‌ ಅಂಗಡಿ ಕಳವಿಗೆ ಸ್ಕೆಚ್‌ ಹಾಕಿ 2018ರ ನ.16 ರಂದು ರಾತ್ರಿ ಶಾಂತಿಗ್ರಾಮದ ಬಸ್‌ನಿಲ್ದಾಣದ ಬಳಿಯ ಮೂರು ಮೊಬೈಲ್‌ ಅಂಗಡಿ ಬೀಗಮುರಿದು 42 ಮೊಬೈಲ್‌ ಹಾಗೂ ಬಿಡಿಭಾಗ, ಡಿವಿಆರ್‌ ಇತರೆ ವಸ್ತುಗಳನ್ನು ಕದ್ದು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಡಾ.ಪ್ರಕಾಶ್‌ಗೌಡ ತಿಳಿಸಿದರು.

ಆರೋಪಿಯನ್ನು ಬಂಧಿಸಲು ಶಾಂತಿಗ್ರಾಮ ಠಾಣೆ ಪೊಲೀಸರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಬೆಂಗಳೂರು-ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಕಳವು ಪ್ರಕರಣ ಭೇದಿಸುವಲ್ಲಿ ಡಿವೈಎಸ್‌ಪಿ ಪುಟ್ಟಸ್ವಾಮಿಗೌಡ, ಸಿಪಿಐ ವಸಂತ್‌, ಎಸ್‌ಐ ಕೃಷ್ಣ, ಪೇದೆ ಸುಬ್ರಹ್ಮಣ್ಯ, ದೇವರಾಜ್‌, ಮಂಜುನಾಥ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ