ಹಾಸನ: ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡು ಚಿಕಿತ್ಸೆ phaಲಕಾರಿಯಾಗದೆ ಮೃತಪಟ್ಟ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ನಗರದ ವಿದ್ಯಾನಗರ ಬಡಾವಣೆ ವಾಸಿ ರೋಹಿತ್ (23) ಮೇ 31ರ ಗುರುವಾರ ಎಂಜಿ ರಸ್ತೆಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿದ್ದರು. ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಎಂ.ಎಚ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯ ಲಾಗಿತ್ತು. ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಬುಧ ವಾರ ಮೃತಪಟ್ಟಿದ್ದು, ಕೂಡಲೇ ಮೃತನ ಕಣ್ಣುಘಿ, ಕಿಡ್ನಿಘಿ ಮತ್ತಿತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ತಂದೆ ಮೋಹನ್ಕುಮಾರ್ ಹಾಗೂ ತಾಯಿ ಪಂಕಜಾ ಪುತ್ರ ಶೋಕದ ನಡುವೆ ಸಾಮಾಜಿಕ ಕಳಕಳಿ ಮೆರೆದಿ ದ್ದಾರೆ. ಮೃತ ರೋಹಿತ್ ಪಾರ್ಥಿವ ಶರೀರವನ್ನು ನಗರಕ್ಕೆ ತಂದು ಗುರುವಾರ ಇಲ್ಲಿನ ಬಿಟ್ಟಗೌಡನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗು ವುದು ಎಂದು ಕುಟುಂಬವರ್ಗ ತಿಳಿಸಿದೆ.