ಹಾಸನ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮುಂದುವರಿಯಲು ಮುಖ್ಯಮಂತ್ರಿ ಅವರೇ ಕಾರಣ !
ಹೀಗೆ ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇರವಾಗಿ ಆರೋಪಿಸಿದ್ದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪೂರ ನಾಗೇಂದ್ರ.
ನಗರದ ಸಂಸ್ಕೃತ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ 'ಕೃಷಿ ಸಾಲ ಮನ್ನಾ ಬಿಕ್ಕಟ್ಟು' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನಾ ಚುನಾವಣಾ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುವ ಬದಲು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಮಾತ್ರ ಮನ್ನಾ ಮಾಡುವುದಾಗಿ ಹೇಳಿದ್ದರೆ ರೈತರು ಸಾಲಮನ್ನಾ ಮಾಡಿದ ಬಳಿಕವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ರೈತರ ಆತ್ಮಹತ್ಯೆ ಮುಂದುವರಿದಿದೆ. ಇದಕ್ಕೆ ಅವರೇ ಕಾರಣರಲ್ಲವೇ ಎಂದು ದೂರಿದರು.
ಹೆದ್ದಾರಿ ಬಂದ್: ಚುನಾವಣೆಗೆ ಮುನ್ನಾ ಪ್ರಚಾರಕ್ಕೆ ಹೋದಲೆಲ್ಲಾ ತಾವು ಸಿಎಂ ಆದರೇ 24 ಗಂಟೆಯ ಒಳಗೆ ರೈತ 54 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದರು. ಹೀಗಾಗಿ ರೈತರು ಕುಮಾರಸ್ವಾಮಿ ಅವರ ಕೊಟ್ಟ ಭರವಸೆಯನ್ನು ನಂಬಿದ್ದರು. ಆದರೆ, ಸಿಎಂ ಮಂಡಿಸಿದ ಬಜೆಟ್ನಲ್ಲಿ ರೈತರ 2 ಲಕ್ಷ ರೂ ಸಾಲ ಮನ್ನಾವನ್ನು ಮಾತ್ರ ಮನ್ನಾ ಮಾಡಿದ್ದು ಅದಕ್ಕೂ ನೂರೆಂಟು ನಿಯಮಗಳನ್ನು ಹಾಕಿರುವುದಕ್ಕೆ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ವೇಳೆ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಬದಲಾಗಿ ರೈತರ 1 ಇಲ್ಲವೇ 2 ಲಕ್ಷ ರೂ.ಮಿತಿಯ ಸಾಲಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರೆ ರೈತರು ಇಂದು ಸಾಲಮನ್ನಾ ಮಾಡಿದ ಬಳಿಕವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿ ಅವರೇ ಕಾರಣ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬಜೆಟ್ನಲ್ಲಿ 2 ಲಕ್ಷಕ್ಕೆ ರೈತರ ಸಾಲಮನ್ನಾ ಮಿತಿಗೊಳಿಸಿರುವುದನ್ನು ವಿರೋಧಿಸಿ ರೈತ ಸಂಘ ಜು.21 ರಂದು ಹೊಸಪೇಟೆ ಬಿಳಿ ಇರುವ ಹಿಟ್ನಾಲ್ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಚಳವಳಿ ನಡೆಸಲಿದೆ ಎಂದು ಹೇಳಿದರು.
ಸಂಘ ಒಡಕು: ರೈತ ಸಂಘದ ಮೂಲ ಉದ್ದೇಶವನ್ನೆ ಎಲ್ಲರೂ ಮರೆತ್ತಿದ್ದು, ಜಾತಿ, ಅಧಿಕಾರದ ಆಸೆಯನ್ನು ಮುಂದಿಟ್ಟು ರೈತ ಸಂಘವನ್ನು ಒಡೆಯಲಾಗುತ್ತಿದೆ. ರೈತ ಸಂಘದ ಸಭೆಗೆ ಹಣಕೊಟ್ಟು ರೈತರು ಕರೆತರುವ ಬದಲು ಬದ್ಧತೆ ಇರುವವರನ್ನು ಮಾತ್ರ ಸಭೆ, ಸಮಾವೇಶಕ್ಕೆ ಕರೆ ತರುವ ಕೆಲಸ ಆಗಬೇಕು. ಹಸಿರು ಸೇನೆ ಮತ್ತು ರೈತ ಸಂಘಕ್ಕೆ ದಿನ ನಿತ್ಯ ಹಲವು ದೌರ್ಜನ್ಯ ನಡೆಯುತ್ತಲೇ ಇದೆ. ಕೆಲವರು ರೈತ ಸಂಘದ ಹೆಸರನ್ನು ಬಳಸಿಕೊಂಡು ಸರಕಾರಿ ಕಚೇರಿ ಹಾಗೂ ಇನ್ನಿತರ ಕಡೆಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ರೈತ ಸಂಘ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಕೃಷಿ ತಜ್ಞ ಸುಂದರೇಶ್ ಮಾತನಾಡಿ, ದೇಶದಲ್ಲಿ ಉದ್ಯಮಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇರುವ ಎಲ್ಲ ಸಮಸ್ಯೆಗಳು ರೈತರದ್ದು. ಉದ್ಯಮಿಗಳಿಗೆ ಮಳೆ ಬಂದರೂ, ಬಾರದಿದ್ದರು ಅವರ ವಹಿವಾಟು ನಡೆಯುತ್ತೆ. ಆದರೆ, ರೈತರಿಗೆ ಮಳೆ ಬಾರದಿದ್ದರೂ ಕಷ್ಟ, ಅತಿಯಾಗಿ ಮಳೆ ಬಂದರೂ ಕಷ್ಟ. ಸರಕಾರಗಳು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಉದ್ಯಮಿಗಳ ಆಸ್ತಿ ಲಕ್ಷ ಕೋಟಿ ಇದೆ. ಆದರೆ, ನಮ್ಮ ರಾಜ್ಯದ ಬಜೆಟ್ ಇರುವುದು ಕೇವಲ 2 ಲಕ್ಷ ಕೋಟಿ ರೂ. ನಮ್ಮ ರಾಜ್ಯದ ಬಜೆಟ್ಗಿಂತ ಹೆಚ್ಚು ಆಸ್ತಿಯನ್ನು ಉದ್ಯಮಿಗಳು ಹೊಂದಿದ್ದಾರೆ. ಉದ್ಯಮಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ನೀಡುತ್ತವೆ. ಸರಕಾರಗಳು ರೈತರು ಬೆಳೆಯುವ ಬೆಳೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಬೇಕು ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಇದ್ದರು.
ಹೀಗೆ ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನೇರವಾಗಿ ಆರೋಪಿಸಿದ್ದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪೂರ ನಾಗೇಂದ್ರ.
ನಗರದ ಸಂಸ್ಕೃತ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ 'ಕೃಷಿ ಸಾಲ ಮನ್ನಾ ಬಿಕ್ಕಟ್ಟು' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನಾ ಚುನಾವಣಾ ಪ್ರಚಾರದ ವೇಳೆ ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತ ಸಂಪೂರ್ಣ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳುವ ಬದಲು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಮಾತ್ರ ಮನ್ನಾ ಮಾಡುವುದಾಗಿ ಹೇಳಿದ್ದರೆ ರೈತರು ಸಾಲಮನ್ನಾ ಮಾಡಿದ ಬಳಿಕವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ರೈತರ ಆತ್ಮಹತ್ಯೆ ಮುಂದುವರಿದಿದೆ. ಇದಕ್ಕೆ ಅವರೇ ಕಾರಣರಲ್ಲವೇ ಎಂದು ದೂರಿದರು.
ಹೆದ್ದಾರಿ ಬಂದ್: ಚುನಾವಣೆಗೆ ಮುನ್ನಾ ಪ್ರಚಾರಕ್ಕೆ ಹೋದಲೆಲ್ಲಾ ತಾವು ಸಿಎಂ ಆದರೇ 24 ಗಂಟೆಯ ಒಳಗೆ ರೈತ 54 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದಿದ್ದರು. ಹೀಗಾಗಿ ರೈತರು ಕುಮಾರಸ್ವಾಮಿ ಅವರ ಕೊಟ್ಟ ಭರವಸೆಯನ್ನು ನಂಬಿದ್ದರು. ಆದರೆ, ಸಿಎಂ ಮಂಡಿಸಿದ ಬಜೆಟ್ನಲ್ಲಿ ರೈತರ 2 ಲಕ್ಷ ರೂ ಸಾಲ ಮನ್ನಾವನ್ನು ಮಾತ್ರ ಮನ್ನಾ ಮಾಡಿದ್ದು ಅದಕ್ಕೂ ನೂರೆಂಟು ನಿಯಮಗಳನ್ನು ಹಾಕಿರುವುದಕ್ಕೆ ಬೇಸತ್ತು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದ ವೇಳೆ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಬದಲಾಗಿ ರೈತರ 1 ಇಲ್ಲವೇ 2 ಲಕ್ಷ ರೂ.ಮಿತಿಯ ಸಾಲಮನ್ನಾ ಮಾಡುವುದಾಗಿ ಹೇಳಿಕೆ ನೀಡಿದ್ದರೆ ರೈತರು ಇಂದು ಸಾಲಮನ್ನಾ ಮಾಡಿದ ಬಳಿಕವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ರೈತರ ಆತ್ಮಹತ್ಯೆಗೆ ಸಿಎಂ ಕುಮಾರಸ್ವಾಮಿ ಅವರೇ ಕಾರಣ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬಜೆಟ್ನಲ್ಲಿ 2 ಲಕ್ಷಕ್ಕೆ ರೈತರ ಸಾಲಮನ್ನಾ ಮಿತಿಗೊಳಿಸಿರುವುದನ್ನು ವಿರೋಧಿಸಿ ರೈತ ಸಂಘ ಜು.21 ರಂದು ಹೊಸಪೇಟೆ ಬಿಳಿ ಇರುವ ಹಿಟ್ನಾಲ್ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಚಳವಳಿ ನಡೆಸಲಿದೆ ಎಂದು ಹೇಳಿದರು.
ಸಂಘ ಒಡಕು: ರೈತ ಸಂಘದ ಮೂಲ ಉದ್ದೇಶವನ್ನೆ ಎಲ್ಲರೂ ಮರೆತ್ತಿದ್ದು, ಜಾತಿ, ಅಧಿಕಾರದ ಆಸೆಯನ್ನು ಮುಂದಿಟ್ಟು ರೈತ ಸಂಘವನ್ನು ಒಡೆಯಲಾಗುತ್ತಿದೆ. ರೈತ ಸಂಘದ ಸಭೆಗೆ ಹಣಕೊಟ್ಟು ರೈತರು ಕರೆತರುವ ಬದಲು ಬದ್ಧತೆ ಇರುವವರನ್ನು ಮಾತ್ರ ಸಭೆ, ಸಮಾವೇಶಕ್ಕೆ ಕರೆ ತರುವ ಕೆಲಸ ಆಗಬೇಕು. ಹಸಿರು ಸೇನೆ ಮತ್ತು ರೈತ ಸಂಘಕ್ಕೆ ದಿನ ನಿತ್ಯ ಹಲವು ದೌರ್ಜನ್ಯ ನಡೆಯುತ್ತಲೇ ಇದೆ. ಕೆಲವರು ರೈತ ಸಂಘದ ಹೆಸರನ್ನು ಬಳಸಿಕೊಂಡು ಸರಕಾರಿ ಕಚೇರಿ ಹಾಗೂ ಇನ್ನಿತರ ಕಡೆಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ರೈತ ಸಂಘ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಕೃಷಿ ತಜ್ಞ ಸುಂದರೇಶ್ ಮಾತನಾಡಿ, ದೇಶದಲ್ಲಿ ಉದ್ಯಮಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇರುವ ಎಲ್ಲ ಸಮಸ್ಯೆಗಳು ರೈತರದ್ದು. ಉದ್ಯಮಿಗಳಿಗೆ ಮಳೆ ಬಂದರೂ, ಬಾರದಿದ್ದರು ಅವರ ವಹಿವಾಟು ನಡೆಯುತ್ತೆ. ಆದರೆ, ರೈತರಿಗೆ ಮಳೆ ಬಾರದಿದ್ದರೂ ಕಷ್ಟ, ಅತಿಯಾಗಿ ಮಳೆ ಬಂದರೂ ಕಷ್ಟ. ಸರಕಾರಗಳು ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಉದ್ಯಮಿಗಳ ಆಸ್ತಿ ಲಕ್ಷ ಕೋಟಿ ಇದೆ. ಆದರೆ, ನಮ್ಮ ರಾಜ್ಯದ ಬಜೆಟ್ ಇರುವುದು ಕೇವಲ 2 ಲಕ್ಷ ಕೋಟಿ ರೂ. ನಮ್ಮ ರಾಜ್ಯದ ಬಜೆಟ್ಗಿಂತ ಹೆಚ್ಚು ಆಸ್ತಿಯನ್ನು ಉದ್ಯಮಿಗಳು ಹೊಂದಿದ್ದಾರೆ. ಉದ್ಯಮಿಗಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ನೀಡುತ್ತವೆ. ಸರಕಾರಗಳು ರೈತರು ಬೆಳೆಯುವ ಬೆಳೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ಆರ್ಥಿಕವಾಗಿ ಪ್ರಬಲರನ್ನಾಗಿ ಮಾಡಬೇಕು ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಇದ್ದರು.