ಸಕಲೇಶಪುರ: ಕಾಡಾನೆ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆಯಲ್ಲಿ ನಾನಾ ಸಂಘಟನೆಗಳು, ಸ್ಥಳೀಯ ಬೆಳೆಗಾರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರವೂ ಮುಂದುವರಿಯಿತು.
ಬೆಳಗ್ಗೆ ಪ್ರತಿಭಟನಾಕಾರರು, ನಾನಾ ಸಂಘಟನೆಗಳ ಕಾರ್ಯಕರ್ತರು ಅರೆಬೆತ್ತಲೆ ಧರಣಿ ನಡೆಸಿದರು. ಕಾಡಾನೆ ಸಮಸ್ಯೆಗೆ ಕೂಡಲೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಬಾಳ್ಳುಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯನ್ನು ನಾಲ್ಕು ಗಂಟೆಗೂ ಹೆಚ್ಚುಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಹಾಗೂ ತಹಸೀಲ್ದಾರ್ ನಾಗಭೂಷಣ್ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿದರು.
ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಕಾಡಾನೆಗಳನ್ನು ಸೆರೆ ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕು. ಒಂದೇ ಬಾರಿಗೆ ಎಲ್ಲ ಕಾಡಾನೆಗಳು ಹಿಡಿಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅನುಮತಿ ಇಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾಡಾನೆಗಳನ್ನು ಹಿಡಿಯಲಾಗುತ್ತಿದೆ. ಕಾಡಾನೆ ಸಮಸ್ಯೆ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿಗಳು ಸಭೆ ಕರೆಯಲಿದ್ದು ಸಭೆಗೆ ರೈತರನ್ನು ಆಹ್ವಾನಿಸಲಾಗುವುದು. ತಾವು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ಮಾತನ್ನು ಒಪ್ಪದ ರೈತರು ಕಾಡಾನೆಗಳಿಂದ ನಮ್ಮ ಬದುಕು ಬೀದಿಗೆ ಬಿದ್ದಿದ್ದು ಕೂಡಲೇ ನಮ್ಮ ಜಮೀನುಗಳಿಗೆ ಭೇಟಿ ನೀಡಬೇಕು ಎಂದು ಒತ್ತಾಯಸಿದರು. ಈ ಹಿನ್ನೆಲೆಯಲ್ಲಿ ಎಸಿ ಹಾಗೂ ತಹಸಿಲ್ದಾರರು ಕಾಡಾನೆ ಹಾವಳಿ ಇರುವ ರಾಜೇಂದ್ರಪುರ, ಬನವಾಸೆ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿ.ಜೆ ಗೋಪಾಲ್, ಬಾಳ್ಳು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಲೋಕೇಶ್, ಬಾಗೆ ರಾಮಕೃಷ್ಣ, ಸೇರಿದಂತೆ ಸ್ಥಳೀಯ ಬೆಳೆಗಾರರು ಹಾಜರಿದ್ದರು.
ಬೆಳಗ್ಗೆ ಪ್ರತಿಭಟನಾಕಾರರು, ನಾನಾ ಸಂಘಟನೆಗಳ ಕಾರ್ಯಕರ್ತರು ಅರೆಬೆತ್ತಲೆ ಧರಣಿ ನಡೆಸಿದರು. ಕಾಡಾನೆ ಸಮಸ್ಯೆಗೆ ಕೂಡಲೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಬಾಳ್ಳುಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯನ್ನು ನಾಲ್ಕು ಗಂಟೆಗೂ ಹೆಚ್ಚುಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಹಾಗೂ ತಹಸೀಲ್ದಾರ್ ನಾಗಭೂಷಣ್ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿದರು.
ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಕಾಡಾನೆಗಳನ್ನು ಸೆರೆ ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕು. ಒಂದೇ ಬಾರಿಗೆ ಎಲ್ಲ ಕಾಡಾನೆಗಳು ಹಿಡಿಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅನುಮತಿ ಇಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಕಾಡಾನೆಗಳನ್ನು ಹಿಡಿಯಲಾಗುತ್ತಿದೆ. ಕಾಡಾನೆ ಸಮಸ್ಯೆ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿಗಳು ಸಭೆ ಕರೆಯಲಿದ್ದು ಸಭೆಗೆ ರೈತರನ್ನು ಆಹ್ವಾನಿಸಲಾಗುವುದು. ತಾವು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ಮಾತನ್ನು ಒಪ್ಪದ ರೈತರು ಕಾಡಾನೆಗಳಿಂದ ನಮ್ಮ ಬದುಕು ಬೀದಿಗೆ ಬಿದ್ದಿದ್ದು ಕೂಡಲೇ ನಮ್ಮ ಜಮೀನುಗಳಿಗೆ ಭೇಟಿ ನೀಡಬೇಕು ಎಂದು ಒತ್ತಾಯಸಿದರು. ಈ ಹಿನ್ನೆಲೆಯಲ್ಲಿ ಎಸಿ ಹಾಗೂ ತಹಸಿಲ್ದಾರರು ಕಾಡಾನೆ ಹಾವಳಿ ಇರುವ ರಾಜೇಂದ್ರಪುರ, ಬನವಾಸೆ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಿ.ಜೆ ಗೋಪಾಲ್, ಬಾಳ್ಳು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಲೋಕೇಶ್, ಬಾಗೆ ರಾಮಕೃಷ್ಣ, ಸೇರಿದಂತೆ ಸ್ಥಳೀಯ ಬೆಳೆಗಾರರು ಹಾಜರಿದ್ದರು.