ಆ್ಯಪ್ನಗರ

ಸಕಲೇಶಪುರ: ಸಡಗರದ ಗುಂಡುಬ್ರಹ್ಮ ದೇವರ ಉದ್ದಿ ಜಾತ್ರೆ

ಸಕಲೇಶಪುರ: ತಾಲೂಕಿನ ಹಾನುಬಾಳು ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗುಂಡು ಬ್ರಹ್ಮ ದೇವರ ಉದ್ದಿಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು.

Vijaya Karnataka 10 Nov 2018, 5:00 am
ಸಕಲೇಶಪುರ: ತಾಲೂಕಿನ ಹಾನುಬಾಳು ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗುಂಡು ಬ್ರಹ್ಮ ದೇವರ ಉದ್ದಿಜಾತ್ರೆ ಶುಕ್ರವಾರ ಸಂಭ್ರಮದಿಂದ ನಡೆಯಿತು.
Vijaya Karnataka Web hassan sakaleshapura hanubalu deepavali festival fair festival
ಸಕಲೇಶಪುರ: ಸಡಗರದ ಗುಂಡುಬ್ರಹ್ಮ ದೇವರ ಉದ್ದಿ ಜಾತ್ರೆ


ವೆಂಕಟಹಳ್ಳಿಯ ಉದ್ದಿ ಜಾತ್ರೆ ಗುಡ್ಡದಲ್ಲಿ ಸಂಪ್ರದಾಯದಂತೆ ಬಲಿಪಾಡ್ಯಮಿ ಮರುದಿನ ನಡೆಯುತ್ತದೆ. ಹಾನುಬಾಳು, ಅಗನಿ, ಮಕ್ಕಿಹಳ್ಳಿ(ವೆಂಕಟಹಳ್ಳಿ) ಸೇರಿದಂತೆ ಮೂರು ಗ್ರಾಮದ ಗುಂಟು ಬ್ರಹ್ಮ ಸಹೋದರ ದೇವರ ಉತ್ಸವ ಮೂರ್ತಿಗಳನ್ನು ಚೆಂಡು ಹೂವಿನ ಅಲಂಕಾರ, ಮಲೆನಾಡಿನ ಕರಡಿ ವಾದ್ಯ ಹಾಗೂ ಕುಂಬ ಕಳಸದೊಂದಿಗೆ ಅಡ್ಡಪಲ್ಲಕಿಯಲ್ಲಿ ಮೆರವಣಿ ಮಾಡಿ ಉದ್ದಿ ಜಾತ್ರೆ ಗುಡ್ಡಕ್ಕೆ ಹೊತ್ತು ತರಲಾಯಿತು. ಇಲ್ಲಿನ ದೇವರ ಉತ್ಸವ ಕಟ್ಟೆಯಲ್ಲಿ ಮೂರು ಗ್ರಾಮ ದೇವತೆಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ನವ ದಂಪತಿಗಳು, ಹರಕೆ ಹೊತ್ತವರು ಪೂಜೆ ಸಲ್ಲಿಸಿದರು. ಶುಕ್ರವಾರ ರಾತ್ರಿ ಮೂರು ಗ್ರಾಮದ ದೇವಸ್ಥಾನಗಳಲ್ಲಿ ಕೆಂಡೋತ್ಸವ ನಡೆಯಿತು.

ಸತ್ತಿಗೆ: ಉತ್ಸವದ ಸಂಪ್ರದಾಯದಂತೆ ಮಕ್ಕಿಹಳ್ಳಿ, ಅಗನಿ ಹಾಗೂ ಹಾನುಬಾಳು ಗ್ರಾಮಸ್ಥರು ಭಾರಿ ಎತ್ತರದ(ಉದ್ದ) ಬಿದಿರಿನ ಸತ್ತಿಗೆಗಳನ್ನು ಅಲಂಕರಿಸಿ ಹೊತ್ತು ತಂದಿದ್ದು ಜಾತ್ರೆಗೆ ವಿಷೇಶ ಕಳೆ ತಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ