ಆ್ಯಪ್ನಗರ

ಬಿಸಿಲೆ ಘಾಟ್‌ ಮಾರ್ಗದಲ್ಲಿ ಮಂಗಳೂರಿನಿಂದ ಮೈಸೂರಿಗೆ ಬಸ್‌

ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬಿಸಿಲೆ ಘಾಟ್‌ ಮಾರ್ಗದಲ್ಲಿ ಸದ್ಯ ಇರುವ ಕಚ್ಚಾ ರಸ್ತೆಯಲ್ಲೇ ಮಂಗಳೂರಿಂದ ಮೈಸೂರಿಗೆ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಾಗಿದೆ.

Vijaya Karnataka 6 Oct 2018, 7:44 am
ವನಗೂರು (ಸಕಲೇಶಪುರ): ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬಿಸಿಲೆ ಘಾಟ್‌ ಮಾರ್ಗದಲ್ಲಿ ಸದ್ಯ ಇರುವ ಕಚ್ಚಾ ರಸ್ತೆಯಲ್ಲೇ ಮಂಗಳೂರಿಂದ ಮೈಸೂರಿಗೆ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಾಗಿದೆ.
Vijaya Karnataka Web bus


ಪ್ರವಾಹದ ಬಳಿಕ ಬಸ್‌ ಸಂಚಾರ ಸ್ಥಗಿತಗೊಂಡಿದ್ದ ಈ ಮಾರ್ಗದಲ್ಲಿ ಅಲ್ಪ ಸ್ವಲ್ಪ ರಸ್ತೆ ದುರಸ್ತಿಯಾದ ಬಳಿಕ ಈ ಹಿಂದೆಯೇ ಧರ್ಮಸ್ಥಳಕ್ಕೆ ಎರಡು ಬಸ್‌ ಸಂಚಾರ ಆರಂಭಿಸಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳೂರಿಂದ ಮೈಸೂರಿಗೆ ಹೊಸ ಬಸ್‌ ಸಂಚಾರ ಆರಂಭಿಸಲಾಗಿದೆ.

ಶುಕ್ರವಾರದಿಂದ ಸಂಚಾರ ಆರಂಭವಾಗಿದ್ದು, ಮಂಗಳೂರಿನಿಂದ ಹೊರಡುವ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 9.45ಕ್ಕೆ ಹೊರಡುವ ಬಸ್‌, ಬಿ.ಸಿ.ರೋಡ್‌, ಪುತ್ತೂರು, ಬೆಳ್ಳಾರೆ, ಪಂಜ ಮೂಲಕ ಸುಬ್ರಹ್ಮಣ್ಯ ತಲುಪಿ ಮಧ್ಯಾಹ್ನ 2 ಗಂಟೆಗೆ ಬಿಸಿಲೆ ಘಾಟ್‌ ಮೂಲಕ ವನಗೂರು-ತಂಬಲಿಗೇರಿ, ಕೊಡಗಿನ ಕೂತಿ ಮೂಲಕ ಸೋಮವಾರಪೇಟೆ, ಕುಶಾಲನಗರ ಮಾರ್ಗವಾಗಿ ಮೈಸೂರು ತಲುಪುತ್ತದೆ. ಮೈಸೂರಿನಿಂದ ಪ್ರತಿದಿನ ಬೆಳಗ್ಗೆ 6ಕ್ಕೆ ಅದೇ ಮಾರ್ಗವಾಗಿ ಬಸ್‌ ಮಂಗಳೂರು ತಲುಪಲಿದೆ ಎಂದು ಬಿ.ಸಿ.ರೋಡ್‌ ಘಟಕದ ವ್ಯವಸ್ಥಾಪಕರು ತಿಳಿಸಿದ್ದಾರೆ. ಶುಕ್ರವಾರ ಗ್ರಾಮಕ್ಕೆ ಆಗಮಿಸಿದ ಬಸ್ಸನ್ನು ವನಗೂರು ಗ್ರಾಮಸ್ಥರು ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ