ಆ್ಯಪ್ನಗರ

ಮಳೆಹಾನಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

ಮಳೆಹಾನಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ * 900 ಕೋಟಿ ಅನುದಾನ ಬಿಡುಗಡೆಗೆ ತಂಡಕ್ಕೆ ಒತ್ತಾಯ ------------ ವಿಕ ಸುದ್ದಿಲೋಕ ವನಗೂರು (ಸಕಲೇಶಪುರ) ಕಳೆದ ನಾಲ್ಕು ...

Vijaya Karnataka 15 Sep 2018, 5:00 am
ವನಗೂರು (ಸಕಲೇಶಪುರ): ಕಳೆದ ನಾಲ್ಕು ತಿಂಗಳಿನಿಂದ ಸುರಿದ ಭಾರಿ ಮಳೆಗೆ ಸಕಲೇಶಪುರ ತಾಲೂಕು ಅಕ್ಷ ರಶಃ ನಲುಗಿ ಹೋಗಿರುವುದನ್ನು ಖುದ್ದು ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ ಅಚ್ಚರಿ ವ್ಯಕ್ತಪಡಿಸಿತು.
Vijaya Karnataka Web hassan sakaleshapura vanguru rain damage central team inspection
ಮಳೆಹಾನಿ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ


ತಾಲೂಕಿನ ಶಿರಾಡಿ ಘಾಟ್‌, ಬಿಸ್ಲೆ, ಅಜ್ಜನಹಳ್ಳಿ, ಮಾಗೇರಿ ಸುತ್ತಮುತ್ತ ಭಾರಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಸತತ ಸುರಿದ ಮಳೆಗೆ ತಾಲೂಕಿನ ಸಾವಿರಾರು ಹೆಕ್ಟೇರ್‌ ಕಾಫಿ, ಏಲಕ್ಕಿ, ಕಾಳು ಮೆಣಸು ಸಂಪೂರ್ಣ ನೆಲಕಚ್ಚಿದ್ದು ಭತ್ತದ ಗದ್ದೆಗಳು ಸಹ ನೀರಿನಲ್ಲಿ ಮುಚ್ಚಿ ಹೋಗಿದ್ದವು. ಈ ಪ್ರದೇಶಕ್ಕೆ ಕೇಂದ್ರ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು. ರಸ್ತೆ, ಜಮೀನು ಜತೆ ಯಡಕುಮರಿ ರೈಲ್ವೆ ಮಾರ್ಗವನ್ನು ವೀಕ್ಷಿಸಿದರು. ತಾಲೂಕಿನ ಮಂಗಳೂರಿನಿಂದ ಆಗಮಿಸಿದ ಕೇಂದ್ರ ತಂಡ ಶಿರಾಡಿ ಘಾಟ್‌ ಮೂಲಕ ಸಂಚರಿಸಿ,ಟ್ಯಾಂಕರ್‌ ಅಪಘಾತ ಪ್ರದೇಶ ಆಡ್ಲಹಳ್ಳಿಗೆ ತೆರಳಿ ಪರಿಶೀಲನೆ ನಡೆಸಿದರು. ಸಮೀಪದ ಗ್ರಾಮಗಳಾದ ಮಾರನಹಳ್ಳಿ, ಅಳುವಳ್ಳಿ, ಕಡ್ರಹಳ್ಳಿಯ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಯಸಳೂರು ಹೋಬಳಿಯ ಗೊದ್ದು, ಮಾಗೇರಿ, ಹಿಜ್ಜನಹಳ್ಳಿ, ಬಾಣಗೇರಿ ಗ್ರಾಮಗಳಲ್ಲಿ ಹಾನಿಗೊಳಗಾದ ಕೃಷಿ ಪ್ರದೇಶವನ್ನು ಕೇಂದ್ರ ತಂಡ ಪರಿಶೀಲನೆ ನಡೆಸಿತು. ಹಿಜ್ಜನಹಳ್ಳಿ ರಸ್ತೆ ಭೂಕುಸಿತ ನೋಡಿದ ಕೇಂದ್ರ ಅಧಿಕಾರಿ ಇದೇ ಮೊದಲ ಭಾರಿ ಈ ಭಾಗಕ್ಕೆ ಭೇಟಿ ನೀಡುತ್ತಿದ್ದೇನೆ. ಇಷ್ಟು ದೊಡ್ಡ ಭೂಕುಸಿತ ನೋಡುತ್ತ ಇರುವುದು ಇದೇ ಮೊದಲು ಎಂದು ದಿಗ್ಬ್ರಮೆ ವ್ಯಕ್ತಪಡಿಸಿದರು. ಇಲ್ಲಿನ ರೈತರು ಜಮೀನು ಕಳೆದು ಕೊಂಡಿದ್ದು,ಇಲ್ಲಿನ ನೈಜ ಪರಿಸ್ಥಿತಿಯನ್ನೂ ಪ್ರಧಾನಿ ಮೋದಿಯವರಿಗೆ ತಿಳಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು. ಸಂಜೆ .30ಕ್ಕೆ ಬಿಸಿಲೆ ಘಾಟ್‌ಗೆ ಭೇಟಿ ನೀಡಿದ ತಂಡ ಬಿಸಿಲೆ,ಮಂಕನಹಳ್ಳಿ ಹಾಗೂ ಭಾರಿ ಭೂಕುಸಿತದಿಂದ ಕಡಿತವಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಸಿಲಿತು.

900 ಕೋಟಿ ಅನುದಾನಕ್ಕೆ ಒತ್ತಾಯ:

ಶಾಸಕ ಎಚ್‌.ಕೆ.ಕುಮಾರಸ್ವಾಮಿ ತಾಲೂಕಿನಲ್ಲಿ ಕಾಫಿ,ಮೆಣಸು, ಭತ್ತ ಸೇರಿ 260 ಕೋಟಿಗೂ ಅಧಿಕ ನಷ್ಟವಾಗಿದ್ದು 900ಕೋಟಿ ನಷ್ಟದ ಮಾಹಿತಿಯನ್ನು ಕೇಂದ್ರ ತಂಡಕ್ಕೆ ನೀಡಿದ್ದೇವೆ. ಕೇಂದ್ರಕ್ಕೆ ನೈಜ ಪರಿಸ್ಥಿತಿಯನ್ನು ತಿಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು ಎಂದು ತಿಳಿಸಿದರು.

ಎನ್‌.ಡಿ.ಆರ್‌.ಎಫ್‌(ರಾಷ್ಟ್ರೀಯ ವಿಕೋಪ ನಿರ್ವಹಣಾ ದಳ)ಪರಿಹಾರ ನಿಧಿನಿಯಮಾವಳಿಯಿಂದ ಅನುದಾನ ತೊಡಕು ಆಗಿದ್ದು ಸಮಸ್ಯೆ ಬಗೆಹರಿಸಬೇಕೆಂದು ಶಾಸಕರ ಮುಂದಾಳತ್ವದಲ್ಲಿ ಸ್ಥಳೀಯರು ಕೇಂದ್ರ ತಂಡಕ್ಕೆ ವಿನಂತಿಸಿದರು. ಎನ್‌.ಡಿ.ಆರ್‌,ಎಫ್‌ ನಿಯಮದ ಪ್ರಕಾರ 36 ಕೋಟಿ ಅನುದಾನ ಸಿಗಲಿಲಿದ್ದು, ಇದು ತಾಲೂಕಿಗೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ,ನಿಯಮ ಬದಲಾಯಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲಿಂದ ನೇರವಾಗಿ ಸಕಲೇಶಪುರ ಪಟ್ಟಣಕ್ಕೆ ಆಗಮಿಸಿದ ತಂಡಕ್ಕೆ ಶಾಸಕ ಎಚ್‌.ಕೆ.ಕುಮಾರಸ್ವಾಮಿ,ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ್‌ ರೆಡ್ಡಿ ಬರಮಾಡಿಕೊಂಡರು. ರಾತ್ರಿ ಸಭೆ ಬಿಸ್ಲೆ ಸುತ್ತಮುತ್ತ ಭೇಟಿ ನೀಡಿದ ತಂಡ ರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿತು. ಜಿಲ್ಲಾಧಿಕಾರಿ ಹಾನಿ ಪ್ರದೇಶದ ಬಗ್ಗೆ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
----------------
ಸಕಲೇಶಪುರ ತಾಲೂಕಿನಲ್ಲಿ ಹಾನಿ ಬಗ್ಗೆ ಕೇಂದ್ರ ಅಧಿಕಾರಿಗಳಿಗೆ ಅಂಕಿ ಅಂಶಗಳ ನಷ್ಟ ಮಾಹಿತಿ ನೀಡಲಾಗಿದೆ. ಇಲ್ಲಿನ ನೈಜ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸುವುದಾಗಿ ಕೇಂದ್ರ ತಂಡ ಭರವಸೆ ನೀಡಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಚರ್ಚಿಸಲಿದ್ದಾರೆ.
-ಎಚ್‌.ಕೆ.ಕುಮಾರಸ್ವಾಮಿ ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ