ಆ್ಯಪ್ನಗರ

ಟ್ಯಾಂಕರ್‌ಗೆ ಕಾರುಡಿಕ್ಕಿ: ಯುವಕ ಸಾವು

ವಿಕ ಸುದ್ದಿಲೋಕ ಹಾಸನ ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ಟ್ಯಾಂಕರ್‌ಗೆ ಕಾರುಡಿಕ್ಕಿಯಾಗಿ ಯುವಕ ಮೃತಪಟ್ಟು ನಾಲ್ವರು ಗಂಭಿರ ಗಾಯಗೊಂಡಿರುವ ಘಟನೆ ಶಾಂತಿಗ್ರಾಮ ಸಮೀಪದ ...

Vijaya Karnataka 29 Sep 2018, 5:00 am
ಹಾಸನ: ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ಟ್ಯಾಂಕರ್‌ಗೆ ಕಾರುಡಿಕ್ಕಿಯಾಗಿ ಯುವಕ ಮೃತಪಟ್ಟು ನಾಲ್ವರು ಗಂಭಿರ ಗಾಯಗೊಂಡಿರುವ ಘಟನೆ ಶಾಂತಿಗ್ರಾಮ ಸಮೀಪದ ಗಾಡೇನಹಳ್ಳಿಯ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
Vijaya Karnataka Web hassan shantigarama national highway car hit tyanker one death four persons injure
ಟ್ಯಾಂಕರ್‌ಗೆ ಕಾರುಡಿಕ್ಕಿ: ಯುವಕ ಸಾವು


ಕಾರ್ತಿಕ್‌ (26) ಮೃತ ಯುವಕ. ಶಂಕರಮಠ ರಸ್ತೆಯಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ ಈತ ಗೊರೂರು ಸಮೀಪದ ವಡ್ಡರಹಳ್ಳಿಯ ನಿವಾಸಿ ಎಂದು ಗುರುತಿಸಲಾಗಿದೆ. ಭರತ್‌, ಲಿಖಿತ್‌, ರಕ್ಷಿತ್‌, ಹರ್ಷಿತ್‌ ಎಂಬ ನಾಲ್ವರು ಯುವಕರು (21ರಿಂದ 23 ವರ್ಷ) ಗಂಭೀರ ಗಾಯಗೊಂಡಿದ್ದಾರೆ. ಎಲ್ಲರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 11.45ರಿಂದ 12 ಗಂಟೆ ವೇಳೆಯಲ್ಲಿ ಸುರಿಯುತ್ತಿದ್ದ ಮಳೆ ನಡುವೆ ವೇಗವಾಗಿ ಕಾರು ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ