ಆ್ಯಪ್ನಗರ

ಟೋಪಿಬಿಡಿ, ಹೆಲ್ಮೆಟ್‌ ಧರಿಸಿ

ಹಾಸನ: ನಾಮ್‌ಕೆವಾಸ್ತೆಗೆ ಹೆಲ್ಮೆಟ್‌ ಮಾದರಿ ಟೋಪಿಯೊಂದಿದ್ದರೆ ಸಾಕು, ಪೊಲೀಸರು ನಮ್ಮನ್ನು ಹಿಡಿಯಲ್ಲ ಎಂಬುದನ್ನು ಮರೆಯಿರಿ. ಇನ್ಮುಂದೆ ದೃಢೀಕೃತ ಹೆಲ್ಮೆಟ್‌ ಧರಿಸಿರಿ ಎಂಬ ಸಂದೇಶವನ್ನು ಪೊಲೀಸ್‌ ಇಲಾಖೆ ಸಾರಲು ಮುಂದಾಗಿದೆ.

Vijaya Karnataka 7 Feb 2019, 5:00 am
ಹಾಸನ: ನಾಮ್‌ಕೆವಾಸ್ತೆಗೆ ಹೆಲ್ಮೆಟ್‌ ಮಾದರಿ ಟೋಪಿಯೊಂದಿದ್ದರೆ ಸಾಕು, ಪೊಲೀಸರು ನಮ್ಮನ್ನು ಹಿಡಿಯಲ್ಲ ಎಂಬುದನ್ನು ಮರೆಯಿರಿ. ಇನ್ಮುಂದೆ ದೃಢೀಕೃತ ಹೆಲ್ಮೆಟ್‌ ಧರಿಸಿರಿ ಎಂಬ ಸಂದೇಶವನ್ನು ಪೊಲೀಸ್‌ ಇಲಾಖೆ ಸಾರಲು ಮುಂದಾಗಿದೆ.
Vijaya Karnataka Web hassan sp helmet awarness campain
ಟೋಪಿಬಿಡಿ, ಹೆಲ್ಮೆಟ್‌ ಧರಿಸಿ


ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿ ವರ್ಷ ಪೂರ್ಣಗೊಂಡರೂ ಶೇ.60 ರಷ್ಟು ಬೈಕ್‌ ಸವಾರರು ಇಂದಿಗೂ ಕಳಪೆ ದರ್ಜೆಯ ಹೆಲ್ಮೆಟ್‌ ಮಾದರಿಯ ಟೋಪಿಯೊಂದನ್ನು ಧರಿಸಿ ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿರುವ ಪೊಲೀಸ್‌ ಇಲಾಖೆ ಕೆಲ ದಿನದಲ್ಲೇ ದೃಢೀಕೃತ ಹೆಲ್ಮೆಟ್‌ ಧರಿಸದೆ ಇರುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಜಿಲ್ಲಾ ಕೇಂದ್ರ ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಅರಕಲಗೂಡು, ಹೊಳೆನರಸೀಪುರ ತಾಲೂಕಿನಲ್ಲಿ 2.95 ಲಕ್ಷ ಬೈಕ್‌ಗಳಿದ್ದರೆ, ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ 55,028 ನೋಂದಣಿಯಾಗಿರುವ ಬೈಕ್‌ಗಳಿವೆ. ಇಷ್ಟು ಸಾಲದು ಎಂಬಂತೆ ಜಿಲ್ಲಾ ಕೇಂದ್ರದಲ್ಲೇ ಪ್ರತಿನಿತ್ಯ 50ರಿಂದ 60 ನಾನಾ ಬಗೆಯ ದ್ವಿಚಕ್ರವಾಹನ ನೋಂದಣಿಯಾಗಿ ರಸ್ತೆಗೆ ಇಳಿಯುತ್ತವೆ. ಹೀಗೆ ಲಕ್ಷಾಂತರ ಸಂಖ್ಯೆಯ ದ್ವಿಚಕ್ರ ವಾಹನಗಳ ಸವಾರರಲ್ಲಿ ನಗರ, ಪಟ್ಟಣ ಪ್ರದೇಶ ಹೊರತುಪಡಿಸಿದರೆ ಉಳಿದೆಡೆ ಹೆಲ್ಮೆಟ್‌ ಧರಿಸುವ ಪರಿಪಾಠ ಅತ್ಯಂತ ಕಡಿಮೆ.

ಸಪ್ತಾಹ: ಈ ಎಲ್ಲ ಕಾರಣದಿಂ ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲಾದ್ಯಂತ ಸಂಭವಿಸಿದ ನಾನಾ ಅಪಘಾತದಲ್ಲಿ 1,854ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಗಾಯಾಳುಗಳಾಗಿ ಕೈ,ಕಾಲು, ಮೂಳೆ ಮುರಿತ ಮತ್ತಿತರ ತೀವ್ರ ಸ್ವರೂಪದ ಪೆಟ್ಟು ತಿಂದು ಇಂದಿಗೂ ಸಾವು-ಬದುಕಿನ ನಡುವೆ ಹೋರಾಟ ನಡೆಸುವವರು ಸಾವಿರಾರು ಜನರಿದ್ದಾರೆ. ಈ ಎಲ್ಲ ಅಂಕಿ, ಅಂಶವನ್ನು ದಾಖಲಿಸಿಕೊಂಡಿರುವ ಪೊಲೀಸ್‌ ಇಲಾಖೆ ಅಪಘಾತ ತಡೆಯೊಂದೆ ಸಾವಿನ ತಡೆಗೆ ಮಾರ್ಗ ಎಂಬ ಸಂಗತಿ ಮನಗಂಡು ಜಿಲ್ಲಾದ್ಯಂತ ಹತ್ತು ದಿನಗಳ ಕಾಲ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿದೆ.

ಪ್ರಮುಖವಾಗಿ ದ್ವಿಚಕ್ರವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಸಂಭವಿಸಿ-ಸಾವು, ನೋವು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೈಕ್‌ಸವಾರರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಸಪ್ತಾಹಕ್ಕೆ ಮುನ್ನ ಪ್ರಮುಖ ರಸ್ತೆಗಳಲ್ಲಿ , ವೃತ್ತಗಳಲ್ಲಿ ಹೆಲ್ಮೆಟ್‌ ಧರಿಸದೆ ಸಂಚರಿಸುವವರನ್ನು ಹಿಡಿದು ದಂಡ ವಿಧಿಸುವುದನ್ನು ಕಡ್ಡಾಯವಾಗಿ ಮಾಡಿಕೊಂಡ ಬಂದ ಪೊಲೀಸರು ಇದೀಗ ಅಂಗೀಕೃತ ಹೆಲ್ಮೆಟ್‌ ಕಡ್ಡಾಯಕ್ಕೆ ಮುಂದಾಗಿದ್ದಾರೆ.

ಜಾಗೃತಿ: ಹೆಲ್ಮೆಟ್‌ ರಹಿತ ಸಂಚಾರ...ಜೀವಕ್ಕೆ ಸಂಚಾಕಾರ...ನಾಮ್‌ಕೆವಾಸ್ತೆ ಹೆಲ್ಮೆಟ್‌ ಧರಿಸುವುದು ಬಿಡಿ, ಅಂಗೀಕೃತ ಹೆಲ್ಮೆಟ್‌ ಧರಿಸಿ ಸುರಕ್ಷಿತವಾಗಿ ಪಯಣಿಸಿ ಹೀಗೆ ಹತ್ತಾರು ಘೋಷಣೆಯಷ್ಟೇ ಅಲ್ಲದೆ ಗುಲಾಬಿ ಕೈಗಿಡುವ ಮೂಲಕ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಜಿಲ್ಲಾದ್ಯಂತ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ಎಸ್‌ಪಿ ಪ್ರಕಾಶ್‌ಗೌಡ ಹಾಗೂ ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ರಸ್ತೆಗಿಳಿದು ಜಾಗೃತಿ, ಬೈಕ್‌ ಜಾಥಾ ನಡೆಸುತ್ತಿದ್ದಾರೆ. ಇಷ್ಟುದಿನ ಬರೀ ದಂಡ ಹಾಕುತ್ತಾ ಬೈಕ್‌ ಸವಾರರ ಅಸಮಾಧಾನ, ವಾಗ್ವಾದ ನಡೆಸುತ್ತಿದ್ದ ಪೊಲೀಸರು ಇದೀಗ ಕೈಗೊಂದು ಗುಲಾಬಿನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
-----------
ಫೆ.10ರ ವರಗೆ ಜಾಗೃತಿ
ಸಂಚಾರಿ ಸುರಕ್ಷತಾ ಸಪ್ತಾಹವನ್ನು ಜಿಲ್ಲಾದ್ಯಂತ ಆಚರಿಸಲಾಗುತ್ತಿದೆ. ಫೆ.10ರ ಬಳಿಕ ಅಂಗೀಕೃತ ಹೆಲ್ಮೆಟ್‌ ಕಡ್ಡಾಯ ಮಾಡುತ್ತೇವೆ. ಕಳೆದ ನಾಲ್ಕು ದಿನದಲ್ಲಿ 1,500ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು ಮೃತಪಡುತ್ತಿರುವ ಕಾರಣ ಬೈಕ್‌ ಸವಾರರಿಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.
- ಡಾ.ಪ್ರಕಾಶ್‌ಗೌಡ ಎಸ್‌ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ