ಆ್ಯಪ್ನಗರ

ಇಬ್ಬರು ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ ಇತರರಿಗೆ ಬಿಸಿ ಮುಟ್ಟಿಸಿದ ಹಾಸನ ಕೇಂದ್ರ ಸಾರಿಗೆ ನಿಗಮ

ಮುಷ್ಕರಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆ ಇಬ್ಬರು ಕುಶಲಕರ್ಮಿ ಸಿಬ್ಬಂದಿಗಳನ್ನು ಹಾಸನ ಕೇಂದ್ರ ಸಾರಿಗೆ ನಿಗಮ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಸನದ ರಹಮತ್ ಉಲ್ಲಾ ಮತ್ತು ಡಿ ಮಂಜುನಾಥ್ ವರ್ಗಾವಣೆಗೊಂಡ ಸಿಬ್ಬಂದಿಗಳು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 10 Apr 2021, 1:01 pm
ಹಾಸನ: ಮುಷ್ಕರಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆ ಇಬ್ಬರು ಕುಶಲಕರ್ಮಿ ಸಿಬ್ಬಂದಿಗಳನ್ನು ಹಾಸನ ಕೇಂದ್ರ ಸಾರಿಗೆ ನಿಗಮ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಸನದ ರಹಮತ್ ಉಲ್ಲಾ ಮತ್ತು ಡಿ ಮಂಜುನಾಥ್ ವರ್ಗಾವಣೆಗೊಂಡ ಸಿಬ್ಬಂದಿಗಳು. ಹಾಸನದ ಪ್ರಾದೇಶಿಕ ಕಾರ್ಯಗಾರದ ಸಿಬ್ಬಂದಿಗಳಾದ ಇವರನ್ನು ಪುತ್ತೂರಿಗೆ ವರ್ಗಾವಣೆ ಮಾಡಲಾಗಿದೆ.
Vijaya Karnataka Web protest news


ಇಬ್ಬರನ್ನ ವರ್ಗಾವಣೆ ಮಾಡುವ ಮೂಲಕ ಇನ್ನುಳಿದ ಮಂದಿಗೆ ಬಿಸಿ ರಸ್ತೆ ಸಾರಿಗೆ ನಿಗಮ ಮುಟ್ಟಿಸಿದೆ. ಪ್ರತಿ ಘಟಕದಲ್ಲೂ 34 ಮಂದಿಯನ್ನು ವರ್ಗಾವಣೆ ಮಾಡುವ ಮೂಲಕ ಸಿಬ್ಬಂದಿಗಳಿಗೆ ಭಯ ಹುಟಿಸುತ್ತಿರುವ ಅಧಿಕಾರಿಗಳು. ಇನ್ನು ವರ್ಗಾವಣೆ ಬೆನ್ನಲ್ಲಿಯೇ ಒಬ್ಬರಿಗೆ ಒಬ್ಬರು ಗೊತ್ತಿಲ್ಲದಂತೆ ಕೆಲಸ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನಮಗೆ ಮುಷ್ಕರವು ಬೇಡ ಬೇರೆ ಏನು ಬೇಡ ಎಂದು ಕೆಲ ಸಿಬ್ಬಂದಿಗಳು ಸರ್ಕಾರದ ಪರವಾಗಿ ನಿಂತಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಬಸ್‌ ಸಂಚಾರ ಆರಂಭಿಸಿ: ಏಕಾಂಗಿ ಧರಣಿ
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಇಲ್ಲದೇ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ನೌಕರರು ಮುಷ್ಕರ ಹಿಂಪಡೆದು ಬಸ್‌ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಕೆ.ಎಸ್‌. ತೀರ್ಥಪ್ಪ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಹಾಸನದಲ್ಲಿ ಏ.18 ಮತ್ತು 19ರಂದು ನಡೆಯಲಿದೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ!

ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ತುರ್ತು ಕಾರ್ಯಗಳಿಗೆ ಬೇರೆ ಜಿಲ್ಲೆಗೆ ತೆರಳಬೇಕಾದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು. ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನಗರದಲ್ಲಿ ಖಾಸಗಿ ಬಸ್‌ಗಳ ಚಾಲಕರು ಹೆಚ್ಚಿನ ದರ ವಸೂಲು ಮಾಡುತ್ತಿದ್ದಾರೆ. ಬಸ್‌ ಸಮಸ್ಯೆ ನಿವಾರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ