ಆ್ಯಪ್ನಗರ

ನೀರಿನ ದಾಹ ತಣಿಸುವ ಚೆಕ್‌ಡ್ಯಾಂ

ಹಾಸನ : ಬೇಸಿಗೆ ವೇಳೆ ಹಾಗೂ ಪ್ರಸ್ತುತ ಜಾನುವಾರುಗಳ ನೀರಿನ ದಾಹ ತಣಿಸುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 400 ಗ್ರಾಮಗಳಲ್ಲಿ ತಲಾ ಎರಡರಂತೆ 800 ನೀರಿನ ತೊಟ್ಟಿ, ಐದು ಚೆಕ್‌ಡ್ಯಾಂಗಳನ್ನು ನಿರ್ಮಿಸಿರುವುದು ರೈತರು ನಿಟ್ಟುಸಿರು ಬಿಡುವಂತಾಗಿದೆ.

Vijaya Karnataka 5 Nov 2018, 5:00 am
ಹಾಸನ : ಬೇಸಿಗೆ ವೇಳೆ ಹಾಗೂ ಪ್ರಸ್ತುತ ಜಾನುವಾರುಗಳ ನೀರಿನ ದಾಹ ತಣಿಸುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 400 ಗ್ರಾಮಗಳಲ್ಲಿ ತಲಾ ಎರಡರಂತೆ 800 ನೀರಿನ ತೊಟ್ಟಿ, ಐದು ಚೆಕ್‌ಡ್ಯಾಂಗಳನ್ನು ನಿರ್ಮಿಸಿರುವುದು ರೈತರು ನಿಟ್ಟುಸಿರು ಬಿಡುವಂತಾಗಿದೆ.
Vijaya Karnataka Web hassan water tank check dam water supply cattels 400 villages
ನೀರಿನ ದಾಹ ತಣಿಸುವ ಚೆಕ್‌ಡ್ಯಾಂ


ಗ್ರಾಮೀಣ ಪ್ರದೇಶದಲ್ಲಿ ನೀರಿನ ಮೂಲವಾದ ಕೆರೆ, ಕಟ್ಟೆಗಳಲ್ಲಿ ಆರು ತಿಂಗಳು ನೀರು ತುಂಬಿರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅಂತರ್ಜಲಮಟ್ಟ ಕುಸಿತಕಂಡಿದೆ. ಈ ಬಾರಿ ಉತ್ತಮ ಮಳೆಯಾದರೂ ಭರ್ತಿಯಾಗಿದ್ದ ಹಲವು ಕೆರೆಗಳಲ್ಲಿ ಈಗಾಗಲೇ ನೀರಿನ ಮಟ್ಟ ಅರ್ಧಕ್ಕೆ ಕುಸಿದಿದೆ. ಮಳೆ ಕೊರತೆ ಪ್ರದೇಶದಲ್ಲಿ ಕೆರೆಗಳು ಭರ್ತಿಯಾಗಿಯೇ ಇಲ್ಲ. ಐದು ವರ್ಷ ಬರಗಾಲದ ಸ್ಥಿತಿಯಲ್ಲಿ ನೀರಿನ ಸಮಸ್ಯೆ ಮನಗಂಡಿದ್ದ ಅಧಿಕಾರಿಗಳು ಶಾಶ್ವತವಾಗಿ ನೀರಿನ ಸೆಲೆ ಇರುವಂತೆ ಮಾಡಬೇಕು ಎಂಬ ಸದುದ್ದೇಶದಿಂದ ತಲಾ 5 ಲಕ್ಷ ರೂ.ವೆಚ್ಚದಲ್ಲಿ ಲಕ್ಷ್ಮೇಸಾಗರ, ಬೂವನಹಳ್ಳಿ, ಸಮುದ್ರವಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬೂವನಹಳ್ಳಿ, ಜಾಗರವಳ್ಳಿ,ಗಾಡೇನಹಳ್ಳಿ,ಲಕ್ಷ್ಮೇಸಾಗರ,ಸಮುದ್ರವಳ್ಳಿಯಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುವಂತೆ ಮುನ್ನೆಚ್ಚರಿಕೆ ವಹಿಸಿದ್ದರಿಂದ ಪ್ರಸ್ತುತ ನೀರು ತುಂಬಿದೆ. ಜಾನುವಾರುಗಳಿಗಷ್ಟೇ ಅಲ್ಲದೆ ರೈತಾಪಿವರ್ಗಕ್ಕೂ ಅನುಕೂಲವಾಗಿದೆ.

ಭೂಸವಕಳಿ, ಅಂತರ್ಜಲವೃದ್ಧಿ, ಜಾನುವಾರುಗಳಿಗೆ ಕುಡಿಯುವ ನೀರು ಹೀಗೆ ಮೂರು ಚಿಂತನೆಯಿಂದ ರೂಪುಗೊಂಡ ಯೋಜನೆ ಯಶಸ್ಸು ಕಂಡಿದೆ. ಆರರಿಂದ ಎಂಟು ಅಡಿ ಆಳ, 20 ಮೀಟರ್‌ಗಿಂತ ಹೆಚ್ಚಿನ ದೂರದ ಪುಟ್ಟ ಕರೆಯಂತಹ ಚೆಕ್‌ಡ್ಯಾಂಗಳನ್ನು ಅಂದಾಜು 5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಂಡು 4.79 ಲಕ್ಷದಲ್ಲೇ ಪೂರ್ಣಗೊಳಿಸಿರುವುದು ಮತ್ತೊಂದು ವಿಶೇಷ. 775 ಮಾನವ ದಿನಗಳು, 1.82 ಲಕ್ಷ ಕೂಲಿ ಹಣ ಪಾವತಿಸಿದ್ದರೆ ಉಳಿಕೆ ಸಿಮೆಂಟ್‌, ಕಬ್ಬಿಣ, ಮರಳು ಮತ್ತಿತರ ಸಾಮಗ್ರಿಗೆ ಹಣ ಬಳಕೆಯಾಗಿದೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜೇಗೌಡ.

ನೀರಿನ ತೊಟ್ಟಿ: ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಯನ್ನು ತಲಾ 42 ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. 69 ಮಾನವ ದಿನ ಹಾಗೂ 16,284 ಕೂಲಿ ಹೊರತುಪಡಿಸಿ ಉಳಿಕೆ ಹಣವನ್ನು ಸಿಮೆಂಟ್‌,ಮರಳು ಮತ್ತಿತರ ಸಾಮಗ್ರಿಗೆ ಬಳಕೆಯಾಗಿದೆ. ನೀರಿನ ತೊಟ್ಟಿಗೆ ಬೋರ್‌ವೆಲ್‌ಗಳಿಂದ ಪೈಪ್‌ ಸಂಪರ್ಕ ಕಲ್ಪಿಸಿದ್ದು ಪಂಚಾಯಿತಿ ವಾಟರ್‌ಮನ್‌ಗಳು ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ವೇಳೆ ಆಗಮಿಸಿ ನೀರು ಖಾಲಿಯಾಗಿದ್ದರೆ ಆ ಕೂಡಲೇ ತುಂಬಿಸಬೇಕು. ಸದಾ ನೀರು ತುಂಬಿಕೊಂಡಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ತಾಲೂಕಿನ 400 ಗ್ರಾಮಗಳಲ್ಲೂ 800 ತೊಟ್ಟಿಗಳ ನಿರ್ಮಾಣ ಮಾಡಿದ್ದು, ಈ ಬಾರಿಯ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಇರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬಟ್ಟೆಗೆ ಬ್ರೇಕ್‌: ಜಾನುವಾರುಗಳಿಗೆ ಕುಡಿಯುವ ನೀರಿನತೊಟ್ಟಿ ಎಂಬ ಫಲಕವಿದ್ದರೂ ಕೆಲ ಗ್ರಾಮಗಳಲ್ಲಿ ಬಟ್ಟೆ ತೊಳೆಯುತ್ತಿರುವ ಬಗ್ಗೆ ದೂರಿದೆ. ಈ ಬಗ್ಗೆಯೂ ಕ್ರಮ ಕೈಗೊಂಡು ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿರುವ ಕಾರಣ ನಿಯಂತ್ರಣಕ್ಕೆ ಬಂದಿದೆ ಎಂದು ದೇವರಾಜೇಗೌಡ ತಿಳಿಸಿದರು.
--------------------------------
ನಮ್ಮ ಜಮೀನಿನ ಸುತ್ತ ಜಾನುವಾರುಗಳಿಗೆ ಕುಡಿಯುವ ನೀರು ಇರಲಿಲ್ಲ. ಹಸು ,ಕರು, ಎಮ್ಮೆಗಳಿಗೆ ಒಮೊಮ್ಮೆ ಸಂಜೆವರೆಗೂ ನೀರು ಸಿಗುತ್ತಿರಲಿಲ್ಲ.ಜಾನುವಾರುಗಳು ಮನೆಯಿಂದ ಕರೆತರುವುದೇ ಸಮಸ್ಯೆ ಆಗುತ್ತಿತ್ತು. ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಿರುವುದು ಅತ್ಯಂತ ಉಪಯುಕ್ತವಾಗಿದೆ.
- ದೇವೇಗೌಡ ಬೂವನಹಳ್ಳಿ ರೈತ
----------------
ಬೇಸಿಗೆ ಮುನ್ನ ಹಾಗೂ ನಂತರದ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿತ್ತು. ಈ ಸಮಸ್ಯೆ ಮರುಕಳಿಸಬಾರದು ಎಂದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಚೆಕ್‌ಡ್ಯಾಂ ಹಾಗೂ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಜಾನುವಾರುಗಳಿಗೆ ನೀರು ಒದಗಿಸಲಾಗುತ್ತಿದೆ. ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. ಯೋಜನೆ ಅನುಷ್ಠಾನಗೊಳಿಸುವುದು ಎಷ್ಟು ಮುಖ್ಯವೋ ಅದರ ಪ್ರಯೋಜನ ದೊರಕಿಸುವ ಕಡೆಗೂ ಹೆಚ್ಚಿನ ಗಮನ ನೀಡಲಾಗಿದೆ.
- ದೇವರಾಜೇಗೌಡ ತಾಪಂ ಇಒ ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ