ಆ್ಯಪ್ನಗರ

15 ಲಕ್ಷ ಸುಪಾರಿ ಕೊಟ್ಟು ತಂದೆಯನ್ನೇ ಹತ್ಯೆ ಮಾಡಿದ ಮಗಳ ಬಂಧನ

ಮದುವೆಯಾಗಿದ್ದೂ ಪತಿಯನ್ನು ತೊರೆದು ಪ್ರಿಯಕರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಕೆ, ತಡೆಯಾಗಿದ್ದ ತಂದೆಯನ್ನು ಸುಮಾರು 15 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ.

Vijaya Karnataka Web 31 Aug 2019, 12:18 pm
ಹಾಸನ: ಪ್ರಿಯಕರನ ಜತೆ ಸೇರಿ‌ 15 ಲಕ್ಷ ರೂ. ಸುಪಾರಿ ಕೊಟ್ಟು ತಂದೆಯನ್ನೇ ಹತ್ಯೆ ಮಾಡಿದ ಮಗಳು ಮತ್ತು ಆಕೆಯ ಪ್ರಿಯಕರ ಸೇರಿದಂತೆ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪುತ್ರಿಗೆ ಮದುವೆಯಾಗಿದ್ದರೂ ಪತಿಯನ್ನು ತೊರೆದು ಪ್ರಿಯಕರ ಜತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು.
Vijaya Karnataka Web Murder


ಆರೋಪಿ ವಿದ್ಯಾಗೆ ಮದುವೆಯಾಗಿದ್ದು ಪತಿಯನ್ನು ತೊರೆದು ಪ್ರಿಯಕರ ಚಿದಾನಂದ ಎಂಬುವವನ ಜತೆ ಅಕ್ರಮ‌ ಸಂಬಂಧ ಹೊಂದಿದ್ದರು. ಆಗಸ್ಟ್‌ 23 ರಂದು ವಿದ್ಯಾಳ ತಂದೆ ಮುನಿರಾಜುವನ್ನು ಚಿದಾನಂದ್ ಮತ್ತು ರಘು ಹತ್ಯೆ ಮಾಡಿದ್ದರು. ಇತ್ತೀಚೆಗೆ ಆಲೂರು ತಾಲ್ಲೂಕಿನ ಹೇಮಾವತಿ ಹಿನ್ನೀರಿನಲ್ಲಿ ಮುನಿರಾಜು ಅವರ ಮೃತದೇಹ ಪತ್ತೆಯಾಗಿತ್ತು.

ಆಲೂರು ತಾಲೂಕಿನ ಮಣಿಗನಹಳ್ಳಿ ಬಳಿಯ ಹೇಮಾವತಿ ನದಿಯಲ್ಲಿ ಮೃತದೇಹ ತೇಲುತ್ತಿತ್ತು. ಆಕ್ಸ್ ಕೇಬಲ್ ಮತ್ತು ಚಾಕು ಬಳಸಿ ಮುನಿರಾಜುವನ್ನು ಕೊಲೆ ಮಾಡಿದ್ದರು. ಇತ್ತ ವಿದ್ಯಾ ತಂದೆಯನ್ನು ಹತ್ಯೆ ಮಾಡಿಸಿ ತಾನೇ ಹಿರಿಸಾವೆ ಪೊಲೀಸ್‌ ಠಾಣೆಯಲ್ಲಿ ತಂದೆ ನಾಪತ್ತೆಯಾಗಿರುವ ಬಗ್ಗೆ ನೀಡಿದ್ದಳು. ಇದೀಗ ವಿದ್ಯಾ ಸೇರಿ ಮುನಿರಾಜು ಹತ್ಯೆ ಗೈದಿದ್ದ ಪ್ರಿಯಕರ ಚಿದಾನಂದ ಮತ್ತು ರಘು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ