ಆ್ಯಪ್ನಗರ

ಇಂದಿನಿಂದ ಹಾಸನಾಂಬ ದರ್ಶನ ಆರಂಭ

​​ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿರುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲು ಅ.17ಕ್ಕೆ ತೆರೆಯಲಿದ್ದು, 29ರವರೆಗೆ ಒಟ್ಟು 13 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ.

Vijaya Karnataka 17 Oct 2019, 9:34 am
ಹಾಸನ: ಸಾವಿರಾರು ಭಕ್ತರು ಕಾತರದಿಂದ ಕಾಯು ತ್ತಿರುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲು ಅ.17ಕ್ಕೆ ತೆರೆಯಲಿದ್ದು, 29ರವರೆಗೆ ಒಟ್ಟು 13 ದಿನಗಳ ಕಾಲ ಪೂಜಾ ಕೈಂಕರ್ಯ ನೆರವೇರಲಿದೆ.
Vijaya Karnataka Web hassanamba darshan from today
ಇಂದಿನಿಂದ ಹಾಸನಾಂಬ ದರ್ಶನ ಆರಂಭ


ಅ.17 ಮತ್ತು ಅ.29ರಂದು ಎರಡು ದಿನ ಹೊರತುಪಡಿಸಿ 11 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶ ದೊರೆಯಲಿದೆ. ವರ್ಷಕ್ಕೆ ಒಮ್ಮೆ ಆಶ್ವಯುಜ ಮಾಸದ ಪೂರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆಗೆದರೆ, ಬಲಿಪಾಡ್ಯಮಿ ಮಾ ರನೇ ದಿನ ಬಾಗಿಲು ಮುಚ್ಚುವುದು ಸಂಪ್ರದಾಯ. ಹಾಸನಾಂಬೆಯ ಮೂರ್ತಿ ಹುತ್ತದ ಆಕಾರದಲ್ಲಿ ಇರುವುದು ವೈಶಿಷ್ಟ್ಯ. ಶತಮಾನದ ಸಂಪ್ರದಾಯದಂತೆ ಅ.17ರಂದು ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿ ಗಿರೀಶ್‌, ಎಸ್‌ಪಿ ರಾಮ್‌ನಿವಾಸ್‌ ಸೆಪಟ್‌, ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿದೇಗುಲದ ಮುಂಭಾಗದಲ್ಲಿ ಬನ್ನಿಕಡಿದ ಬಳಿಕ ಹಾಸನಾಂಬ ದೇಗುಲದ ಗರ್ಭ ಗುಡಿ ಬಾಗಿಲು ತೆರೆಯಲಾಗುವುದು.

ವರ್ಷಪೂರ್ತಿ ಗರ್ಭ ಗುಡಿ ಬಾಗಿಲು ಮುಚ್ಚಿ ರುವ ಕಾರಣ ಪ್ರಥಮವಾಗಿ ಅರ್ಚಕರು ಒಳಪ್ರವೇಶಿಸಿ, ಸ್ವಚ್ಛಗೊಳಿಸಿದ ಬಳಿಕ ಗಣ್ಯರು, ಅಧಿಕಾರಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಪೂಜಾ ವಿಧಿ, ವಿಧಾನ ಸಿದ್ಧತೆ, ದೇವಿಗೆ ಅಲಂಕಾರ ಮತ್ತಿತರ ಕಾರಣಕ್ಕೆ ಮೊದಲ ದಿನದಂದು ಸಾರ್ವಜನಿಕ ದರ್ಶನ ಇರುವುದಿಲ್ಲ. ಅದೇ ರೀತಿ ಕೊನೆ ದಿನವಾದ ಅ.29 ರಂದು ಕೂಡ ಸಾರ್ವಜನಿಕ ದರ್ಶನ ಇರುವುದಿಲ್ಲ. ಇದರ ಹೊರತಾಗಿ ಪ್ರತಿದಿನ ನೈವೇದ್ಯದ ಸಮಯದಲ್ಲಿಸಾರ್ವಜನಿಕ ದರ್ಶನ ಇರುವುದಿಲ್ಲ. ಆರೋಗ್ಯ ತಪಾಸಣೆ, ನೀರು ವ್ಯವಸ್ಥೆ ಸರತಿ ಸಾಲಿನಲ್ಲಿನಿಂತ ಭಕ್ತರು ಅಸ್ವಸ್ಥ ಗೊಂಡಲ್ಲಿಕೂಡಲೇ ತುರ್ತು ಚಿಕಿತ್ಸೆಗಾಗಿ ಜಿಲ್ಲಾಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರ ದಾಹ ತಣಿಸಲು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ಕೌಟ್ಸ್‌ ಕೆಡೆಟ್‌ಗಳು ಉಚಿತ ಸೇವೆಗೆ ಮುಂದಾಗಿದ್ದಾರೆ. ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿಈ ಬಾರಿ ವಾಟರ್‌ ಪ್ರೂಪ್‌ ಟಾರ್ಪಲ್‌ ಬಳಸಿ ಚಾವಣಿ ನಿರ್ಮಿಸಲಾಗಿದೆ.

ಶೌಚಾಲಯ: ಭಕ್ತರ ಅನುಕೂಲಕ್ಕಾಗಿ ಶೌಚಾ ಲಯದ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಭಕ್ತರ ವಾಹನ ನಿಲುಗಡೆಗೆ ನಗರಸಭೆ ವಸ್ತು ಪ್ರದ ರ್ಶನ ಆವರಣದಲ್ಲಿ ವ್ಯವಸ್ಥೆಕಲ್ಪಿಸಲಾಗಿದೆ.

ಡಿಸಿ ಪರಿಶೀಲನೆ: ಗುರುವಾರ ಮಧ್ಯಾಹ್ನ 12.30ಕ್ಕೆ ದೇಗುಲದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿಅಂತಿಮ ಹಂತದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಗಿರೀಶ್‌ ಹಾಗೂ ದೇಗುಲ ಆಡಳಿತಾಧಿಕಾರಿ ಡಾ.ನಾಗರಾಜ್‌, ನೂತನ ಎಸಿ ನವೀನ್‌ಭಟ್‌ ಬುಧವಾರ ಸಂಜೆ ಪರಿಶೀಲಿಸಿದರು. ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿಅಧಿಕಾರಿಗಳು, ಸಿಬ್ಬಂದಿಗೆ ಹಾಸನಾಂಬ ದೇಗುಲದ ಕರ್ತವ್ಯ ನಿಯೋಜನೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ