ಆ್ಯಪ್ನಗರ

ಬಿಎಸ್‌ವೈಯಿಂದ ದ್ವೇಷದ ರಾಜಕಾರಣ

ಆಯಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆ ಹಿಡಿಯುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿದರು.

Vijaya Karnataka 10 Oct 2019, 5:00 am
ಹೊಳೆನರಸೀಪುರ: ಆಯಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆ ಹಿಡಿಯುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಆರೋಪಿದರು.
Vijaya Karnataka Web hatred politics from bsy
ಬಿಎಸ್‌ವೈಯಿಂದ ದ್ವೇಷದ ರಾಜಕಾರಣ


ತಾಲೂಕಿನ ಕಿರು ಜಲಾಶಯ ಚಾಕೇನಹಳ್ಳಿ ಕಟ್ಟೆತುಂಬಿ ಹರಿದಿದ್ದರ ಹಿನ್ನೆಲೆಯಲ್ಲಿ ಬುಧವಾರ ಪತ್ನಿ, ಜಿಪಂ ಸದಸ್ಯೆ ಭವಾನಿ ಹಾಗೂ ಪುತ್ರ, ಸಂಸದ ಪ್ರಜ್ವಲ್‌ರೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿದರು.

''ಅನರ್ಹ ಶಾಸಕರ ಮತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ಮಾಡಲಾಗಿದೆ. ಕಾವೇರಿ ಕೊಳ್ಳಕ್ಕೆ ಒಳಪಡುವ ಕೆಆರ್‌ಎಸ್‌, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ. ಕಾಮಗಾರಿಗಳನ್ನು ಸಿಎಂ ಯಡಿಯೂರಪ್ಪ ಬೇಕೆಂದೇ ತಡೆ ಹಿಡಿದಿದ್ದಾರೆ. ಇದಕ್ಕೆ ದೇವರಿಂದಲೇ ಅವರಿಗೆ ತಕ್ಕ ಶಾಸ್ತಿಯಾಗಲಿದೆ,'' ಎಂದರು.

''ಮೈಸೂರು, ಮಂಡ್ಯ, ಕಬಿನಿ ವ್ಯಾಪ್ತಿಯಲ್ಲಿನ 5150 ಕೋಟಿ ರೂ. ಕಾಮಗಾರಿ, ಹೇಮಾವತಿ ವಿಭಾಗದಲ್ಲಿನ 1650 ಕೋಟಿ ರೂ., ತುಮಕೂರು ವಲಯದ ಕಾವೇರಿ ನಿಗಮದ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿದ್ದ 500 ಕೋಟಿ ರೂ. ಕಾಮಗಾರಿಗೆ ಸರಕಾರ ತಡೆ ನೀಡಿದೆ,'' ಎಂದು ಆರೋಪಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ''ಜಿಲ್ಲೆಯ ಜ್ವಲಂತ ಸಮಸ್ಯೆಗಳ ನಿವಾರಿಸಲು ಸರಕಾರದೊಂದಿಗೆ ಚರ್ಚಿಸುವೆ. ಮನುಷ್ಯ ಮತ್ತು ಆನೆ ಸಂಘರ್ಷ ಕೊನೆಗಾಣಿಸಲು ಆನೆಕಾರಿಡಾರ್‌ ಯೋಜನೆಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಧಿಕಾರಿಗಳ ಸಭೆಯಲ್ಲಿಆನೆಗಳ ಸ್ಥಳಾಂತರ ಸೂಕ್ತವಲ್ಲ ಎಂದಿದ್ದಾರೆ. ಎಲ್ಲೆಂದರಲ್ಲಿ ಒಂಟೊಂಟಿ ಮನೆ ನಿರ್ಮಿಸಿಕೊಂಡಿರುವುದು. ಅರಣ್ಯ ಭೂಮಿ ಒತ್ತುವರಿ ನಡೆಸಿರುವುದು ಆನೆ ದಾಳಿಗೆ ಕಾರಣ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ,'' ಎಂದರು.

ತಾಪಂ ಅಧ್ಯಕ್ಷೆ ಜಯಲಕ್ಷ್ಮೇ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪದ್ಮರಾಜ್‌, ಮುಖಂಡರಾದ ಹರಿಹರಪುರದ ರಾಮೇಗೌಡ, ಬಿಟ್ಟಗೌಡನಹಳ್ಳಿ ನಿಂಗೇಗೌಡ ಹಾಜರಿದ್ದರು.

ಉಪಚುನಾವಣೆಗೆ ಇನ್ನೂ ಕಾರ್ಯರೂಪ ನಡೆಸಿಲ್ಲ. ಈ ಬಗ್ಗೆ ಚಿಂತನೆ ಮಾಡಿ, ಹುಣಸೂರು ಮತ್ತು ಕೆ.ಆರ್‌.ಪೇಟೆಯಲ್ಲಿ ಪ್ರವಾಸ ಮಾಡುವ ಮೂಲಕ ಪಕ್ಷದ ಕಾರ‍್ಯಕರ್ತರನ್ನು ಸಂಘಟಿಸುತ್ತೇನೆ. ಪಕ್ಷದ ಪರ ಅಭ್ಯರ್ಥಿಗಳ ಗೆಲುವಿಗೆ ಸರ್ವ ಪ್ರಯತ್ನ ಮಾಡುತ್ತೇನೆ.

- ಪ್ರಜ್ವಲ್‌, ಸಂಸದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ