ಆ್ಯಪ್ನಗರ

ಗ್ರಾಪಂ ವರಿಷ್ಠರ ಮೀಸಲು ನಿಗದಿಯಲ್ಲಿ ಅನ್ಯಾಯವಾದ್ರೆ ಸುಮ್ಮನಿರೋದಿಲ್ಲ; ರೇವಣ್ಣ ಎಚ್ಚರಿಕೆ..!

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಎರಡು ಗಂಟೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದಿನ ನಾಲ್ಕು ಚುನಾವಣೆಯಲ್ಲಿ ಯಾವ್ಯಾವ ಮೀಸಲು ನಿಗದಿಯಾಗಿತ್ತು ಎಂಬ ದಾಖಲೆಗಳನ್ನು ಚುನಾವಣಾ ಶಾಖೆಯ ನಿವೃತ್ತ ಅಧಿಕಾರಿಗಳಿಂದಲೇ ಸಂಗ್ರಹಿಸಿದ್ದೇನೆ. ಮೀಸಲಿನಲ್ಲಿ ಅನ್ಯಾಯವಾದರೆ ಬಿಡುವುದಿಲ್ಲಎಚ್‌.ಡಿ.ರೇವಣ್ಣ ಎಚ್ಚರಿಸಿದರು.

Vijaya Karnataka Web 5 Jan 2021, 7:32 am
ಹಾಸನ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ನಿಗದಿಯಲ್ಲಿ ಒತ್ತಡಕ್ಕೆ ಮಣಿದು ಕಾನೂನು ಬಾಹಿರವಾಗಿ ಲೋಪ ಎಸಗಿದರೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಸಿದರು.
Vijaya Karnataka Web HD Revanna
ಎಚ್‌ಡಿ ರೇವಣ್ಣ, ಮಾಜಿ ಸಚಿವ (ಸಂಗ್ರಹ ಚಿತ್ರ)


ಅಭಿವೃದ್ಧಿಗೆ ಅಡ್ಡಿ; ರಾಜಕೀಯ ದ್ವೇಷ ಹೆಚ್ಚು ದಿನ ನಡೆಯಲ್ಲ- ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಗ್ರಾಪಂ ಸದಸ್ಯರನ್ನು ಸೆಳೆದುಕೊಳ್ಳಲು ಮೀಸಲು ನಾವು ಹೇಳಿದಂತೆಯೇ ಆಗುತ್ತದೆ. ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಆಮಿಷ ಒಡ್ಡುತ್ತಿರುವ ವಾಯ್ಸ್‌ ರೆಕಾರ್ಡ್‌ ನಮ್ಮ ಬಳಿ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಎರಡು ಗಂಟೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದಿನ ನಾಲ್ಕು ಚುನಾವಣೆಯಲ್ಲಿ ಯಾವ್ಯಾವ ಮೀಸಲು ನಿಗದಿಯಾಗಿತ್ತು ಎಂಬ ದಾಖಲೆಗಳನ್ನು ಚುನಾವಣಾ ಶಾಖೆಯ ನಿವೃತ್ತ ಅಧಿಕಾರಿಗಳಿಂದಲೇ ಸಂಗ್ರಹಿಸಿದ್ದೇನೆ. ಮೀಸಲಿನಲ್ಲಿ ಅನ್ಯಾಯವಾದರೆ ಬಿಡುವುದಿಲ್ಲ ಎಂದರು.

ರೆಸಾರ್ಟ್‌, ಹೋಂ ಸ್ಟೇಗಳು ಹೌಸ್‌ಫುಲ್‌: ಹೊಸ ವರ್ಷಕ್ಕೆ ಬೆಂಗಳೂರಿನಿಂದ ಹಾಸನಕ್ಕೆ ಬಂ

ಚುನಾವಣಾ ಆಯೋಗ ಸತ್ತುಹೋಗಿದೆ. ಗ್ರಾಪಂ ಚುನಾವಣೆಗೆ ಮುನ್ನವೇ ಮೀಸಲು ಪ್ರಕಟಿಸಬೇಕಿತ್ತು. ಕೇಳುವವರು ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಟ್ರ್ಯಾಕ್ಟರ್‌ ಖರೀದಿಸಿದವರನ್ನು ಬಿಟ್ಟು ಜಾಮೀನು ಹಾಕಿದವರಿಗೆ ತೊಂದರೆ ನೀಡಲಾಗುತ್ತಿದೆ. ಈ ಸಂಬಂಧ ಚರ್ಚಿಸಲು ಕೂಡಲೇ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ಕರೆಯಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಇನ್ನು ಈ ಸಂಬಂಧ ಮಾಜಿ ಪ್ರಧಾನಿ ಹಾಗೂ ಸಂಸದರಿಗೆ ತಿಳಿಸುತ್ತೇನೆ. ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ರೈತರಿಗೆ ತೊಂದರೆ ನೀಡುತ್ತಿದ್ದು, ಎಲ್ಲ ಖಾತೆಯನ್ನು ರದ್ದುಮಾಡಿಸಿ ಎಂದು ರೈತರಿಗೆ ಹೇಳಿದ್ದೇನೆ ಎಂದರು. ಜೆಡಿಎಸ್‌ ಮುಖಂಡ ಕೆ.ಎಂ.ರಾಜೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ