ಆ್ಯಪ್ನಗರ

ಹಾಸನ: ಆಶ್ಲೇಷ ಮಳೆಗೆ ಅಪಾರ ಹಾನಿ, ಕೊಚ್ಚಿಹೋಗಿದ್ದ ವ್ಯಕ್ತಿ ಶವ ಪತ್ತೆ

ಹಾಸನ, ಅರೇಹಳ್ಳಿಮಾರ್ಗ ಸಕಲೇಶಪುರ ತಾಲೂಕಿಗೆ ವಿದ್ಯುತ್‌ ಪೂರೈಕೆ ಮಾರ್ಗದಲ್ಲಿ 7.5 ಕಿಮೀ ವ್ಯಾಪ್ತಿಯಲ್ಲಿ 227 ವಿದ್ಯುತ್ ಕಂಬ ಧರೆಗುರುಳಿದೆ, ಟ್ರಾನ್ಸ್‌ಫಾರ್ಮರ್‌ ಕೆಟ್ಟುಹೋಗಿದೆ. ಸೆಸ್ಕ್ ಒಂದಕ್ಕೆ ಅಂದಾಜು 83 ಲಕ್ಷದಷ್ಟು ಹಾನಿಯಾಗಿದೆ.

Vijaya Karnataka Web 6 Aug 2020, 11:12 pm
ಹಾಸನ: ಮಲೆನಾಡು ಪ್ರದೇಶವಾದ ಸಕಲೇಶಪುರ ಭಾಗದಲ್ಲಿ ಆಶ್ಲೇಷ ಮಳೆಯ ಪ್ರತಾಪಕ್ಕೆ ನದಿ, ಕೆರೆ, ಕಟ್ಟೆ ತುಂಬಿ ಹರಿಯುತ್ತಿದ್ದು, ಮಳೆನೀರಿನಲ್ಲಿ ಸಿದ್ದಯ್ಯ ಎಂಬಾತ ಕೊಚ್ಚಿಹೋಗಿ ಮೃತಪಟ್ಟಿದ್ದರೆ, 56ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ, 227 ವಿದ್ಯುತ್ ಕಂಬ ಧರೆಗುರುಳಿದೆ, ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದ್ದು, ಗ್ರಾಮೀಣ ಜನರ ಬದುಕು ದುಸ್ತರವಾಗಿದೆ.
Vijaya Karnataka Web ನೀರು
ನೀರು


ಕಳೆದ 48 ಗಂಟೆ ಅವಯಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜೀವನಾಡಿ ಹೇಮಾವತಿ, ಎತ್ತಿನಹೊಳೆ, ಕಿರಿಹೊಳೆ, ಅಡ್ಡಹೊಳೆ, ಕಾಡುಮನೆಹೊಳೆಗಳು ತುಂಬಿ ಹರಿಯುತ್ತಿದ್ದು, ಪ್ರವಾಹಮಟ್ಟ ತಲುಪಿದೆ.

ಸಕಲೇಶಪುರ ತಾಲೂಕು ಸಂಕಲಾಪುರದ ಮಠದ ಸಮೀಪದ ಜಾನುವಾರು ಮೇಯಿಸಲು ಹೋಗಿದ್ದ ವೇಳೆ ಕಾಲುವೆಯಲ್ಲಿ ಬುಧವಾರ ಸಿದ್ದಯ್ಯ ಎಂಬಾತ ಕಾಲುಜಾರಿ ಬಿದ್ದು, ಕೊಚ್ಚಿಹೋಗಿದ್ದು, ಆತನ ಮೃತದೇಹವನ್ನು ಗುರುವಾರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.

ಸಕಲೇಶಪುರದಲ್ಲಿ 40 ಮನೆ, ಕಸಬಾದಲ್ಲಿ 5, ಹಾನುಬಾಳ್ಳುವಿನಲ್ಲಿ 10. ಬೆಳಗೋಡು ವ್ಯಾಪ್ತಿಯಲ್ಲಿ 9, ಹೆತ್ತೂರು ಹೋಬಳಿಯಲ್ಲಿ 10 ಮನೆಗಳು ಭಾಗಶಃ ಹಾನಿಯಾಗಿದೆ. ರಾಜೀವ್‌ಗಾಂ ಹೌಸಿಂಗ್ ಕಾರ್ಪೂರೇಷನ್ ವತಿಯಿಂದ ಹಾನಿಮನೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಹಾಸನ, ಅರೇಹಳ್ಳಿಮಾರ್ಗ ಸಕಲೇಶಪುರ ತಾಲೂಕಿಗೆ ವಿದ್ಯುತ್‌ ಪೂರೈಕೆ ಮಾರ್ಗದಲ್ಲಿ 7.5 ಕಿಮೀ ವ್ಯಾಪ್ತಿಯಲ್ಲಿ 227 ವಿದ್ಯುತ್ ಕಂಬ ಧರೆಗುರುಳಿದೆ, ಟ್ರಾನ್ಸ್‌ಫಾರ್ಮರ್‌ ಕೆಟ್ಟುಹೋಗಿದೆ. ಸೆಸ್ಕ್ ಒಂದಕ್ಕೆ ಅಂದಾಜು 83 ಲಕ್ಷದಷ್ಟು ಹಾನಿಯಾಗಿದೆ. ಹೇಮಾವತಿ ನದಿ ಅಪಾಯಮಟ್ಟವನ್ನು ತಲುಪಿದ್ದು, ಅಕ್ಕ,ಪಕ್ಕದ ಜಮೀನು ಜಲಾವೃತಗೊಂಡಿದೆ.

ಆಜಾದ್‌ ರಸ್ತೆ ಮತ್ತಿತರ ಭಾಗದ ವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಬೇಲೂರು ತಾಲೂಕಿನಲ್ಲಿ ಹತ್ತು ಮನೆಗಳು ಭಾಗಶಃ ಹಾನಿಯಾಗಿದೆ. ಸಕಲೇಶಪುರ ತಾಲೂಕು ಬ್ಯಾಕರಹಳ್ಳಿ ಕೃಷಿಪತ್ತಿನ ಸಹಕಾರಿ ಸಂಘದ ಗೋದಾಮಿನಲ್ಲಿ ಇರಿಸಿದ್ದ ರಸಗೊಬ್ಬರ ಮನೆ ನೀರಿನಲ್ಲಿ ತೊಯ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ