ಆ್ಯಪ್ನಗರ

ಸಕಲೇಶಪುರ: ಮಲೆನಾಡಿನಲ್ಲಿ ನಿರಂತರ ಮಳೆ, ಗರಿಗೆದರಿದ ಕೃಷಿ ಚಟುವಟಿಕೆ

​​​ಈಗ ಉತ್ತಮ ಮಳೆ ಸುರಿಯುತ್ತಿರುವುದು ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಅನುಕೂಲವಾಗಿದೆ. ಬಹುತೇಕರು ಈ ನಿಟ್ಟಿನಲ್ಲಿ ಭೂಮಿ ಹದಗೊಳಿಸುವುದು, ಸಸಿ ಮಡಿ ತಯಾರಿ ಹಾಗೂ ಬಿತ್ತನೆ ಬೀಜ ಹಾಕಲು ತಯಾರಿ ಚುರುಕುಗೊಳಿಸಿದ್ದಾರೆ.

Vijaya Karnataka Web 25 Jun 2022, 10:25 pm
ಸಕಲೇಶಪುರ: ಮುಂಗಾರು ವಾತಾವರಣವನ್ನೆ ಕಾಣದಾಗಿದ್ದ ಮಲೆನಾಡಿನಲ್ಲಿ ಕಳೆದ 48 ಗಂಟೆಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಹಾಸನದ ಸಕಲೇಶಪುರ ತಾಲೂಕಿನ ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂಡು ಹಾಗೂ ಕಸಬ ಹೋಬಳಿ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಶುಕ್ರವಾರದಿಂದ ಮಳೆ ಸುರಿಯಲು ಪ್ರಾರಂಭಿಸಿದ್ದು, ಶನಿವಾರ ಮತ್ತಷ್ಟು ಚುಟುಕುಗೊಂಡು ಎಡಬಿಡದೆ ಮಳೆ ಸಿಂಚನವಾಯಿತು. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

ಹಾಸನ ಹೊಳೆನರಸೀಪುರ ತಾಲೂಕಿನಲ್ಲಿ ಭೂಕಂಪನದ ಅನುಭವ! ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಹಳ್ಳಿ ಮೈಸೂರು ಹೋಬಳಿಯ ಜನ

ಮುಂಗಾರು ಜೂನ್‌ ಮೊದಲ ವಾರದಲ್ಲೇ ಪ್ರಾರಂಭವಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿ, ತಿಂಗಳಾಂತ್ಯದಲ್ಲಾದರೂ ಆರಂಭಗೊಂಡಿರುವುದು ಈ ಭಾಗದ ಕೃಷಿಕರಲ್ಲಿ ಒಂದಷ್ಟು ಸಮಾಧಾನ ತಂದಿದೆ. ಸುಮಾರು ಒಂದು ತಿಂಗಳ ಕಾಲ ಮುಂಗಾರು ತಡವಾಗಿದ್ದರಿಂದ ಬಹುತೇಕ ಕೃಷಿಕರು ಈಗಾಗಲೆ ತಮ್ಮ ತೋಟ ಗದ್ದೆಗಳಲ್ಲಿ ಮುಂಗಾರು ಪೂರ್ವದ ಕೆಲಸ ಕಾರ‍್ಯಗಳನ್ನು ಪೂರ್ಣಗೊಳಿಸಿದ್ದು, ಮುಂಗಾರು ಹಂಗಾಮಿನ ಕೃಷಿ ಕಾರ‍್ಯದಲ್ಲಿ ತೊಡಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.

ಈಗ ಉತ್ತಮ ಮಳೆ ಸುರಿಯುತ್ತಿರುವುದು ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ಅನುಕೂಲವಾಗಿದೆ. ಬಹುತೇಕರು ಈ ನಿಟ್ಟಿನಲ್ಲಿ ಭೂಮಿ ಹದಗೊಳಿಸುವುದು, ಸಸಿ ಮಡಿ ತಯಾರಿ ಹಾಗೂ ಬಿತ್ತನೆ ಬೀಜ ಹಾಕಲು ತಯಾರಿ ಚುರುಕುಗೊಳಿಸಿದ್ದಾರೆ.
Illegal Sand Mining: ಹಾಸನದಲ್ಲಿ ಗಣಿಗಾರಿಕೆ ನಡೆಯದಿದ್ದರೂ ಅಕ್ರಮ ಮರಳು ಅವ್ಯಾಹತ..!
ಹೇಮಾವತಿ ನದಿ ಸೇರಿದಂತೆ, ಜಪಾವತಿ, ಕೆಂಪುಹೊಳೆ, ಅಡ್ಡಹೊಳೆ, ಎತ್ತಿನಹೊಳೆ, ಹೊಂಗಡಹಳ್ಳ ಹೊಳೆ, ಕೀರಿಹೊಳೆ ಹಾಗೂ ಇತರೆ ಹಳ್ಳಕೊಳ್ಳಗಳಲ್ಲಿನೀರಿನ ಹರಿವು ಹೆಚ್ಚಿದೆ. ಮಳೆ ಪ್ರಮಾಣ: ತಾಲೂಕಿನ ಪಶ್ಚಿಮ ಘಟ್ಟದ ಅಂಚಿನ ಭಾಗಗಳಾದ ಮಾರನಹಳ್ಳಿ, ಹಾನುಬಾಳು, ಹೊಡಚಹಳ್ಳಿ, ಬಣಾಲು, ನೀಕನಹಳ್ಳಿ, ಅಚ್ಚನಹಳ್ಳಿ, ಮರಗುಂದ, ಹೆತ್ತೂರು ಹಾಗೂ ಇತರೆ ಭಾಗಗಳಲ್ಲಿಕಳೆದ 48 ಗಂಟೆಗಳಲ್ಲಿಸುಮಾರು 25-50 ಮಿ.ಮೀ. ಗೂ ಹೆಚ್ಚು ಮಳೆ ಬಿದ್ದಿದೆ. ಬೆಳಗೂಡು ಹೋಬಳಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ, ಪಟ್ಟಣ ಸೇರಿದಂತೆ ಸುತ್ತಮುತ್ತ, ಹೆಬ್ಬಸಾಲೆ, ಹೆನ್ನಲಿ, ನಡಹಳ್ಳಿ, ಕ್ಯಾಮನಹಳ್ಳಿ, ಹಾದಿಗೆ, ಕ್ಯಾನಹಳ್ಳಿ, ಬೆಳ್ಳೆಕೆರೆ, ಮಾವಿನಹಳ್ಳಿ, ಜಾನೆಕೆರೆ, ಅರೆಕೆರೆ ಹಾಗೂ ಸುತ್ತಮುತ್ತ ಸುಮಾರು 20-40 ಮಿ.ಮೀ. ಮಳೆ ಸುರಿದಿರುವ ವರದಿಯಾಗಿದೆ. ಶನಿವಾರ ಸಂಜೆಯ ವೇಳೆಗೆ ಮಳೆ ಪ್ರಮಾಣ ಇನ್ನೂ ಹೆಚ್ಚಿದ್ದು, ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ಕಂಡುಬಂದಿದೆ.

ಮುಂದಿನ ಲೇಖನ