ಆ್ಯಪ್ನಗರ

ಹೊಳೆನರಸೀಪುರ: ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ದೂರು

ಹೊಳೆನರಸೀಪುರ: ಅನಾರೋಗ್ಯದಿಂದ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದ 3 ತಿಂಗಳ ಮಗು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Vijaya Karnataka 18 Apr 2019, 5:00 am
ಹೊಳೆನರಸೀಪುರ: ಅನಾರೋಗ್ಯದಿಂದ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದ 3 ತಿಂಗಳ ಮಗು ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web holenarasipura child death police copliant loddge
ಹೊಳೆನರಸೀಪುರ: ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ದೂರು


''ಮಂಗಳವಾರ ಬೆಳಗ್ಗೆ ಮಗು ವಾಂತಿ, ಭೇದಿ ಮಾಡಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೆವು. ಮಕ್ಕಳ ತಜ್ಞರು ಚಿಕಿತ್ಸೆ ನೀಡಿದ್ದರು. ಬುಧವಾರ ಬೆಳಗ್ಗೆ ತೀವ್ರ ವಾಂತಿ, ಬೇದಿಯಾಗಿದ್ದ ಮಗುವನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿದೆವು. ಮಕ್ಕಳ ತಜ್ಞ ಡಾ.ಧನಶೇಖರ್‌ ಚಿಕಿತ್ಸೆ ನೀಡಿದರು. ಅವರ ಸೂಚನೆ ಮೇರೆಗೆ ಸಿಬ್ಬಂದಿ ಗ್ಲೂಕೋಸ್‌ ಹಾಕಿದರು. ಬಳಿಕ ಮಗು ಗೆಲುವಾಗಿತ್ತು. ಬುಧವಾರ ಬೆಳಗ್ಗೆ ಕರ್ತವ್ಯ ನಿರತ ವೈದ್ಯರು ಪರೀಕ್ಷಿಸಿ ನಂತರ ಒಮ್ಮೆಗೆ 2 ಚುಚ್ಚು ಮದ್ದು ನೀಡಿದರು. ಕೆಲವೇ ನಿಮಿಷದಲ್ಲಿ ಮಗು ಅಸ್ವಸ್ಥಗೊಂಡಿತು. ಈ ಬಗ್ಗೆ ವೈದ್ಯರಲ್ಲಿ ಪ್ರಶ್ನಿಸಿದಾಗ ಹಾಸನಕ್ಕೆ ಕರೆದೊಯ್ಯುವಂತೆ ತಿಳಿಸಿದರು. ಹಾಸನಕ್ಕೆ ಕರೆದೊಯ್ಯಲು ಮುಂದಾಗುತ್ತಿದ್ದಂತೆ ಮಗು ಮೃತಪಟ್ಟಿತು'' ಎಂದು ತಂದೆ ಹಿರೇಬೆಳಗುಲಿ ಗ್ರಾಮದ ದೇವರಾಜ್‌ ಪೊಲೀಸರಿಗೆ ದೂರು ನೀಡಿದ್ದಾರೆ.

''ಮಕ್ಕಳ ತಜ್ಞರು ಲಭ್ಯವಿಲ್ಲ ಎಂದು ಹೇಳಿ ಮೊದಲೇ ಹಾಸನಕ್ಕೆ ಕಳುಹಿಸಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇರುತ್ತಿತ್ತೋ ಏನೋ. ಈ ರೀತಿ ವೈದ್ಯರ ನಿರ್ಲಕ್ಷ್ಯಕ್ಕೆ ಹಲವು ಜೀವವನ್ನು ಬಲಿತೆಗೆದುಕೊಳ್ಳುತ್ತಿದೆ. ಆಸ್ಪತ್ರೆ ಬಳಿ ಸಂಬಂಧಿಕರ ರೋಧನ ಮಡುಗಟ್ಟಿತ್ತು.
-------------------
ಮಗುವಿನ ಚೇತರಿಕೆ ಇತ್ತಾದರೂ ಪೂರ್ಣ ಗುಣಮುಖವಾಗಿರಲಿಲ್ಲ. ವಾಂತಿ ಮಾಡಿಕೊಂಡಾಗ ನೆತ್ತಿಗೇರಿ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಸರಕಾರಿ ರಜೆ ದಿನವಾದ್ದರಿಂದ ಮಗುವಿನ ಪೋಷಕರಿಗೆ ಮಕ್ಕಳ ತಜ್ಞರ ಚಿಕಿತ್ಸೆ ಲಭ್ಯವಾಗದು ಎಂದು ಹಾಸನಕ್ಕೆ ತಕ್ಷ ಣವೇ ಕರೆದೊಯ್ಯುವಂತೆ ತಿಳಿಸಿದ್ದೆ.
-ಡಾ.ನಾಗೇಂದ್ರ, ಸರಕಾರಿ ಆಸ್ಪತ್ರೆ ವೈದ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ