ಆ್ಯಪ್ನಗರ

ದೇಗುಲಕ್ಕೆ ಅಪರಿಚತರ ಅಕ್ರಮ ಪ್ರವೇಶ: ದೂರು

ದೇವೇಗೌಡರ ಸ್ವಗ್ರಾಮ ತಾಲೂಕಿನ ಹರದನಹಳ್ಳಿಯ ಕುಲದೇವ ಈಶ್ವರ ದೇವಾಲಯ ಮತ್ತು ಅರ್ಚಕರ ನಿವಾಸವನ್ನು ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ತೀವ್ರ ಶೋಧ ನಡೆಸಿ ಬರಿಗೈಯಲ್ಲಿ ಹಿಂದಿರುಗಿದ ಬೆನ್ನಲ್ಲೇ ಅರ್ಚಕ ಪ್ರಕಾಶ್‌ ಭಟ್‌ ಅಪರಿಚಿತರು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Vijaya Karnataka 13 Apr 2019, 5:00 am
ಹೊಳೆನರಸೀಪುರ: ದೇವೇಗೌಡರ ಸ್ವಗ್ರಾಮ ತಾಲೂಕಿನ ಹರದನಹಳ್ಳಿಯ ಕುಲದೇವ ಈಶ್ವರ ದೇವಾಲಯ ಮತ್ತು ಅರ್ಚಕರ ನಿವಾಸವನ್ನು ಅಧಿಕಾರಿಗಳು ಎಂದು ಹೇಳಿಕೊಂಡ ಕೆಲವರು ತೀವ್ರ ಶೋಧ ನಡೆಸಿ ಬರಿಗೈಯಲ್ಲಿ ಹಿಂದಿರುಗಿದ ಬೆನ್ನಲ್ಲೇ ಅರ್ಚಕ ಪ್ರಕಾಶ್‌ ಭಟ್‌ ಅಪರಿಚಿತರು ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web illegal entry into the temple complaint
ದೇಗುಲಕ್ಕೆ ಅಪರಿಚತರ ಅಕ್ರಮ ಪ್ರವೇಶ: ದೂರು


ಚುನಾವಣಾ ವೆಚ್ಚಕ್ಕಾಗಿ ಅಕ್ರಮವಾಗಿ ಹಣ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ ಮೂವರು ಅಧಿಕಾರಿಗಳ ಸೋಗಿನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಪರಿಶೀಲಿಸಿದರು.

ಮೊದಲು ಚುನಾವಣಾ ಅಯೋಗದವರು ಎಂದು ಹೇಳಿಕೊಂಡರೆ, ನಂತರ ಆದಾಯ ತೆರಿಗೆ ಇಲಾಖೆ ಎಂದೇಳಿ, ಮನೆಯಲ್ಲಿದ್ದ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ಇನ್ನೊಬ್ಬ ಅರ್ಚಕ ರೇವಣ್ಣ ಎಂಬುವವರ ಮನೆಯನ್ನೂ ಶೋಧಿಸಿದರು. ನಂತರ ಗುಡಿಯಲ್ಲಿ ಶೋಧ ಕಾರ್ಯ ನಡೆಸಿದರು. ಗರ್ಭಗುಡಿ ಪ್ರವೇಶಕ್ಕೆ ಹಿಂದೇಟು ಹಾಕಿ, ನಂತರ ಅರ್ಚಕರ ಸಹಾಯದೊಂದಿಗೆ ಶೋಧ ಕಾರ್ಯ ಪೂರ್ಣಗೊಳಿಸಿರುವುದಾಗಿ ಸಹ ಅರ್ಚಕರು ತಿಳಿಸಿದ್ದು, ಸೂಕ್ತ ಮಾಹಿತಿ ನೀಡಿದೇ ಅತಿಕ್ರಮ ಪ್ರವೇಶ ಇವರ ಬಗ್ಗೆ ಅನುಮಾನ ಇರುತ್ತದೆ. ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ನಗರ ಪೊಲೀಸರಿಗೆ ಅರ್ಚಕ ಪ್ರಕಾಶ್‌ಭಟ್‌ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ