ಆ್ಯಪ್ನಗರ

ಐಎಂಎ ಆಸ್ತಿ ಜಪ್ತಿ: ಸರಕಾರಕ್ಕೆ ಡಿಸಿ ವರದಿ

ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತಣ್ಣೀರುಹಳ್ಳದಲ್ಲಿರುವ ಐಎಂಎ ಸಂಸ್ಥೆಗೆ ಸೇರಿದ್ದ ಖಾಲಿ ನಿವೇಶನವನ್ನು ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ವಶಪಡಿಸಿಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

Vijaya Karnataka 30 Jul 2019, 5:00 am
ಹಾಸನ: ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತಣ್ಣೀರುಹಳ್ಳದಲ್ಲಿರುವ ಐಎಂಎ ಸಂಸ್ಥೆಗೆ ಸೇರಿದ್ದ ಖಾಲಿ ನಿವೇಶನವನ್ನು ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ವಶಪಡಿಸಿಕೊಂಡು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
Vijaya Karnataka Web ima asset foreclosure dc report to government
ಐಎಂಎ ಆಸ್ತಿ ಜಪ್ತಿ: ಸರಕಾರಕ್ಕೆ ಡಿಸಿ ವರದಿ


ನಗರಸಭೆ ವ್ಯಾಪ್ತಿಯ ತಣ್ಣೀರುಹಳ್ಳದ ಖಾತೆ ಸಂಖ್ಯೆ 33/03/13/353/ಎ ರಲ್ಲಿನ 22 ಸಾವಿರ ಚದರ ಅಡಿ ಖಾಲಿ ನಿವೇಶನವನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷ ಣೆ ಅಧಿನಿಯಮ 2004 ಕಲಂ 3(3) ರಂತೆ ಈಗಾಗಲೇ ಸ್ಥಳ ತನಿಖೆ ಮಾಡಿ ಜಪ್ತಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಅಧಿಕೃತವಾಗಿ ಸಾರ್ವಜನಿಕರ ಸಮಕ್ಷ ಮದಲ್ಲಿ ನಿವೇಶನವನ್ನು ಸರಕಾರದ ವಶಕ್ಕೆ ಪಡೆದು ಸಕ್ಷ ಮ ಪ್ರಾಧಿಕಾರವಾಗಿರುವ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ವರದಿ ಮಾಡಿದ್ದಾರೆ.

ನಗರಸಭೆ ಆಯುಕ್ತರಾದ ಪರಮೇಶ್ವರ್‌, ಎಸಿ ಡಾ. ಎಚ್‌.ಎಲ್‌. ನಾಗರಾಜ್‌, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀನಿವಾಸ್‌ ಗೌಡ, ತಹಸೀಲ್ದಾರ್‌ ಮೇಘನಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ