ಹಾಸನ: ಎಸ್ಎಸ್ಎಲ್ಸಿ ಪರೀಕ್ಷೆ ಜಿಲ್ಲೆಯ 89 ಕೇಂದ್ರದಲ್ಲಿ ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ, ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಸಂತಸದಿಂದಲೇ ಪರೀಕ್ಷೆ ಬರೆದರು.
ಪ್ರಥಮ ದಿನವಾದ ಗುರುವಾರ ಇಂಗ್ಲೀಷ್ ಪರೀಕ್ಷೆ ನಡೆದಿದ್ದು, 20872 ವಿದ್ಯಾರ್ಥಿಗಳಲ್ಲಿ 19,946 ವಿದ್ಯಾರ್ಥಿಗಳು ಹಾಜರಾಗಿದ್ದು, 926 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ 254 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು, ಅವರನ್ನು ಸೇರಿದಂತೆ 926 ವಿದ್ಯಾರ್ಥಿಗಳು ಗೈರು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಸುದ್ದಿಗಾರರಿಗೆ ತಿಳಿಸಿದರು.
ಕಂಟೈನ್ಮೆಂಟ್ ವಲಯದ ಇಬ್ಬರು ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯಿಂದ ಬಂದು ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 500 ವಿದ್ಯಾರ್ಥಿಗಳಲ್ಲಿ 498 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಕ್ಕೆ ಕೇವಲ ಸಿಬ್ಬಂದಿಗಳು, ವಿದ್ಯಾರ್ಥಿಗಳನ್ನು ಮಾತ್ರ ಆರೋಗ್ಯ ತಪಾಸಣೆ ಮಾಡಿ, ಅವರ ಕೊಠಡಿ ಸಂಖ್ಯೆಯನ್ನು ತಿಳಿಸಿ ಒಳ ಬಿಡಲಾಯಿತು. ಹೀಗೆ ಬಿಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು.
ಬಸ್ ವ್ಯವಸ್ಥೆ
ಜಿಲ್ಲೆಯ 2,952 ವಿದ್ಯಾರ್ಥಿಗಳಿಗೆ 134 ಮಾರ್ಗದಲ್ಲಿ 142 ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮುನ್ನ ಬಸ್ಗಳು ಬಂದದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಪ್ರತಿ ಬಸ್ಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಬಸ್ ವ್ಯವಸ್ಥೆ ಇಲ್ಲದೆಡೆ ಖಾಸಗಿ /ಅನುದಾನಿತ ಶಾಲಾಬಸ್ ವ್ಯವಸ್ತೆ ಕಲ್ಪಿಸಲಾಗಿತ್ತು. ಜಿಲ್ಲೆಯ ಕೆಲವೆಡೆ ಕೇವಲ ವಿದ್ಯಾರ್ಥಿಗಳು ಮಾತ್ರ ಇದ್ದುದರಿಂದ ಬಸ್ ಚಾಲಕರು ಪರೀಕ್ಷಾ ಕೇಂದ್ರದ ಸಮೀಪಕ್ಕೆ ಕರೆತಂದು ಬಿಟ್ಟರು.
ಮಾಸ್ಕ್ ಇಲ್ಲದೆ ಬರಬೇಡಿ ಎಂದು ಮುಂಚಿತವಾಗಿ ತಿಳಿವಳಿಕೆ ಮೂಡಿಸಿದ್ದರಿಂದ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಬಂದಿದ್ದರು ಪ್ರತಿ ಬಸ್ನಲ್ಲಿ 30 ವಿದ್ಯಾರ್ಥಿಗಳಿಗಷ್ಟೇ ಅವಕಾಶ ಕಲ್ಪಿಸಲಾಯಿತು. ಪೋಷಕರು ಮಕ್ಕಳನ್ನು ಬೈಕ್, ಕಾರು ಮತ್ತಿತರ ವಾಹನದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರರೆ ತಂದರು.
ಪ್ರಥಮ ದಿನವಾದ ಗುರುವಾರ ಇಂಗ್ಲೀಷ್ ಪರೀಕ್ಷೆ ನಡೆದಿದ್ದು, 20872 ವಿದ್ಯಾರ್ಥಿಗಳಲ್ಲಿ 19,946 ವಿದ್ಯಾರ್ಥಿಗಳು ಹಾಜರಾಗಿದ್ದು, 926 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ 254 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದು, ಅವರನ್ನು ಸೇರಿದಂತೆ 926 ವಿದ್ಯಾರ್ಥಿಗಳು ಗೈರು ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಸುದ್ದಿಗಾರರಿಗೆ ತಿಳಿಸಿದರು.
ಕಂಟೈನ್ಮೆಂಟ್ ವಲಯದ ಇಬ್ಬರು ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯಿಂದ ಬಂದು ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 500 ವಿದ್ಯಾರ್ಥಿಗಳಲ್ಲಿ 498 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಕ್ಕೆ ಕೇವಲ ಸಿಬ್ಬಂದಿಗಳು, ವಿದ್ಯಾರ್ಥಿಗಳನ್ನು ಮಾತ್ರ ಆರೋಗ್ಯ ತಪಾಸಣೆ ಮಾಡಿ, ಅವರ ಕೊಠಡಿ ಸಂಖ್ಯೆಯನ್ನು ತಿಳಿಸಿ ಒಳ ಬಿಡಲಾಯಿತು. ಹೀಗೆ ಬಿಡುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು.
ಬಸ್ ವ್ಯವಸ್ಥೆ
ಜಿಲ್ಲೆಯ 2,952 ವಿದ್ಯಾರ್ಥಿಗಳಿಗೆ 134 ಮಾರ್ಗದಲ್ಲಿ 142 ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮುನ್ನ ಬಸ್ಗಳು ಬಂದದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಪ್ರತಿ ಬಸ್ಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಬಸ್ ವ್ಯವಸ್ಥೆ ಇಲ್ಲದೆಡೆ ಖಾಸಗಿ /ಅನುದಾನಿತ ಶಾಲಾಬಸ್ ವ್ಯವಸ್ತೆ ಕಲ್ಪಿಸಲಾಗಿತ್ತು. ಜಿಲ್ಲೆಯ ಕೆಲವೆಡೆ ಕೇವಲ ವಿದ್ಯಾರ್ಥಿಗಳು ಮಾತ್ರ ಇದ್ದುದರಿಂದ ಬಸ್ ಚಾಲಕರು ಪರೀಕ್ಷಾ ಕೇಂದ್ರದ ಸಮೀಪಕ್ಕೆ ಕರೆತಂದು ಬಿಟ್ಟರು.
ಮಾಸ್ಕ್ ಇಲ್ಲದೆ ಬರಬೇಡಿ ಎಂದು ಮುಂಚಿತವಾಗಿ ತಿಳಿವಳಿಕೆ ಮೂಡಿಸಿದ್ದರಿಂದ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಬಂದಿದ್ದರು ಪ್ರತಿ ಬಸ್ನಲ್ಲಿ 30 ವಿದ್ಯಾರ್ಥಿಗಳಿಗಷ್ಟೇ ಅವಕಾಶ ಕಲ್ಪಿಸಲಾಯಿತು. ಪೋಷಕರು ಮಕ್ಕಳನ್ನು ಬೈಕ್, ಕಾರು ಮತ್ತಿತರ ವಾಹನದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರರೆ ತಂದರು.