ಆ್ಯಪ್ನಗರ

ಹಾಸನ ಲೋಕೋಪಯೋಗಿ ಕಚೇರಿ ಮೇಲೂ ಐಟಿ ದಾಳಿ

ಚನ್ನರಾಯಪಟ್ಟಣದಲ್ಲಿ ಮೂರು ಗುತ್ತಿಗೆದಾರರ ಮನೆಗಳ ಮೇಲೆ ಆದಾಯತೆರಿಗೆ ಅಧಿಕಾರಿಗಳ ದಾಳಿ. ಅಶ್ವತ್ಥ ನಾರಾಯಣ ಗೌಡ, ರಾಯಿ ಗೌಡ ಮತ್ತು ನಾರಾಯಣರೆಡ್ಡಿ ಇವರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ.

Vijaya Karnataka Web 28 Mar 2019, 10:24 am
ಹಾಸನ: ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಡಿ ರೇವಣ್ಣ ಅವರೇ ಲೋಕೋಪಯೋಗಿ ಸಚಿವರು ಆಗಿರುವ ಹಿನ್ನೆಲೆ ಭಾರಿ ಕುತೂಹಲ ಕೆರಳಿಸಿದೆ.
Vijaya Karnataka Web Revanna


ಚನ್ನರಾಯಪಟ್ಟಣದಲ್ಲಿ ಮೂರು ಗುತ್ತಿಗೆದಾರರ ಮನೆಗಳ ಮೇಲೆ ಆದಾಯತೆರಿಗೆ ಅಧಿಕಾರಿಗಳ ದಾಳಿ. ಅಶ್ವತ್ಥ ನಾರಾಯಣ ಗೌಡ, ರಾಯಿ ಗೌಡ ಮತ್ತು ನಾರಾಯಣರೆಡ್ಡಿ ಇವರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ಹಾಸನದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಎಂಬುವರ ವಿಚಾರಣೆ ನಡೆಸಲಾಗಿದೆ. ಮುಂಜಾನೆ 5.30ಕ್ಕೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳ ಪರಿಶೀಲನೆಯಲ್ಲಿ ಐಟಿ‌ ಅಧಿಕಾರಿಗಳು ತೊಡಗಿದ್ದಾರೆ.

ರಾಜ್ಯದ ಒಟ್ಟು 15 ಕಡೆಗಳಲ್ಲಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡ್ಯದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಣ್ಣ ನೀರಾವರಿ ಸಚಿವ ಸಿ ಕೆ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಸಿಆರ್‌ಪಿಎಫ್‌ ಯೋಧರ ಭದ್ರತೆಯೊಂದಿಗೆ ಐಟಿ ದಾಳಿ ನಡೆದಿದೆ.

ಬುಧವಾರ ರಾತ್ರಿಯಷ್ಟೇ ಸಿಎಂ ಕುಮಾರಸ್ವಾಮಿ, ತಮ್ಮ ವಿರುದ್ಧ ಕೇಂದ್ರ ಸರಕಾರ ಐಟಿ ದಾಳಿ ಮಾಡಿಸಲು ಸಂಚು ನಡೆಸಿದೆ ಎಂದಿದ್ದರು. ಚುನಾವಣೆ ಹೊಸ್ತಿಲಲ್ಲಿ ತಮ್ಮ ವಿರುದ್ಧ ಐಟಿ ದಾಳಿ ನಡೆಸಿದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಂತೆ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ರವಾನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ